Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್ಗೆ ಬರಲಿದ್ದಾರೆ ʼಕರಣ್ ಅರ್ಜುನ್ʼ
Team Udayavani, Oct 28, 2024, 3:04 PM IST
ಮುಂಬಯಿ: ರೀ- ರಿಲೀಸ್ ಟ್ರೆಂಡ್ಗೆ ಬಾಲಿವುಡ್ನ (Bollywood) ಎವರ್ ಗ್ರೀನ್ ಸೂಪರ್ ಹಿಟ್ ಸಿನಿಮಾ ʼಕರಣ್ ಅರ್ಜುನ್ʼ (Karan Arjun) ಸೇರಿದೆ.
ಸಲ್ಮಾನ್ ಖಾನ್ (Salman Khan), ಶಾರುಖ್ ಖಾನ್ (Shah Rukh Khan) ಜತೆಯಾಗಿ ನಟಿಸಿದ್ದ, ರಾಕೇಶ್ ರೋಷನ್ ನಿರ್ದೇಶನ (Rakesh Roshan) ಮಾಡಿದ್ದ ʼಕರಣ್ ಅರ್ಜುನ್ʼ ಸಿನಿಮಾ ಮತ್ತೆ ಥಿಯೇಟರ್ನಲ್ಲಿ ತೆರೆ ಕಾಣಲಿದೆ.
1995ರ ಜನವರಿಯಲ್ಲಿ ತೆರೆಗೆ ಬಂದಿದ್ದ ʼಕರಣ್ ಅರ್ಜುನ್ʼ ಆ ಕಾಲದಲ್ಲಿ ಬಾಕ್ಸಾಫೀಸ್ನಲ್ಲಿ ದೊಡ್ಡ ಹಿಟ್ ಆಗಿತ್ತು, ಸಿನಿಮಾದಲ್ಲಿನ ಕಥೆ, ಹಾಡು, ನಟನೆ ಹೀಗೆ ಎಲ್ಲಾ ವಿಭಾಗದಲ್ಲೂ ಫ್ಯಾಮಿಲಿ ಡ್ರಾಮಾ ʼಕರಣ್ ಅರ್ಜುನ್ʼ ಸಖತ್ ಸದ್ದು ಮಾಡಿತ್ತು.
“ಮೇರೆ ಕರಣ್ ಅರ್ಜುನ್ ಆಯೇಂಗೆ..” ಎನ್ನುವ ಡೈಲಾಗ್ ಇಂದಿಗೂ ಬಾಲಿವುಡ್ನಲ್ಲಿ ಎವರ್ ಗ್ರೀನ್ ಆಗಿದೆ. ಸಹೋದರರಾಗಿ ಸಲ್ಮಾನ್ , ಶಾರುಖ್ ಅವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಹೋದರತ್ವ ಹಾಗೂ ತಾಯಿ ಬಾಂಧವ್ಯದ ಸುತ್ತ ಸಾಗಿದ ʼಕರಣ್ ಅರ್ಜುನ್ʼ 30 ವರ್ಷಗಳ ಬಳಿಕ ಮತ್ತೆ ವರ್ಲ್ಡ್ವೈಡ್ ಥಿಯೇಟರ್ಗಳಲ್ಲಿ ತೆರೆಗೆ ಬರಲಿದೆ.
Karan Arjun aa rahe hai! Witness the reincarnation across the globe in cinema halls from November 22nd 2024.#RajeshRoshan @BeingSalmanKhan @iamsrk @itsKajolD #MamtaKulkarni #Rakhee #AmrishPuri @tipsofficial @PenMovies #30yearsOfKaranArjun pic.twitter.com/Xfzi5oS8dL
— Rakesh Roshan (@RakeshRoshan_N) October 28, 2024
ಇದೇ ನವೆಂಬರ್ 22 ರಂದು ʼಕರಣ್ ಅರ್ಜುನ್ʼ ಗ್ಲೋಬಲ್ ರಿಲೀಸ್ ಆಗಲಿದೆ ಎಂದು ನಿರ್ದೇಶಕ ರಾಕೇಶ್ ರೋಷನ್ ಸಿನಿಮಾದ ತುಣುಕವೊಂದನ್ನು ಹಂಚಿಕೊಂಡು ತಿಳಿಸಿದ್ದಾರೆ.
ಶಾರುಖ್ , ಸಲ್ಮಾನ್ ಜತೆ ರಾಖಿ ಗುಲ್ಜಾರ್, ಕಾಜೋಲ್, ಮಮತಾ ಕುಲಕರ್ಣಿ, ಅಮರೀಶ್ ಪುರಿ, ರಂಜಿತ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್ ಹಿಟ್ ʼಮಿರ್ಜಾಪುರ್ʼ ಸರಣಿ
Movie: 45 ಕೋಟಿ ಬಜೆಟ್, 60 ಸಾವಿರ ಗಳಿಕೆ; ಇದು ಭಾರತದ ಬಿಗೆಸ್ಟ್ ಫ್ಲಾಪ್ ಸಿನಿಮಾ
B’town: ಮದುವೆ, ಪಾರ್ಟಿಗಳ ಪರ್ಫಾರ್ಮೆನ್ಸ್ಗೆ ಬಿಟೌನ್ ಸ್ಟಾರ್ಸ್ ಪಡೆಯುವ ಸಂಭಾವನೆ ಎಷ್ಟು?
Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ
Piracy;ಕಳೆದ ವರ್ಷ 22,400 ಕೋಟಿ ರೂ. ನಷ್ಟ!
MUST WATCH
ಹೊಸ ಸೇರ್ಪಡೆ
Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ
Chewing Gum: ಕ್ರಿಕೆಟಿಗರು ಚೂಯಿಂಗ್ ಗಮ್ ಜಗಿಯುವುದು ಯಾಕೆ ಗೊತ್ತಾ? ಇಲ್ಲಿದೆ ಕಾರಣ
Udupi: ವಿವಿಧ ಬೇಡಿಕೆ ಈಡೇರಿಸುವಂತೆ ಅಂಗವಿಕಲರಿಂದ ಪ್ರತಿಭಟನೆ
Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ
Uttara Pradesh: ವಾರಾಣಸಿಯಲ್ಲಿ 51 ಅಡಿ ಎತ್ತರದ ಬೃಹತ್ ಹನುಮಂತ ಪ್ರತಿಮೆ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.