![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, May 5, 2021, 9:33 PM IST
ಮುಂಬೈ : ಇತ್ತೀಚಿಗಷ್ಟೆ ಬಾಲಿವುಡ್ ನಟಿ ಮೌನಿ ರಾಯ್ ಟೀಕೆಗೆ ಗುರಿಯಾಗಿದ್ದರು. ದೇಶದಲ್ಲಿ ಜನರು ಕೋವಿಡ್ನಿಂದ ಸಾಯುತ್ತಿದ್ದರೆ, ರಾಯ್ ಮಾತ್ರ ದುಬೈನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದರು. ಆದರೆ, ಇದೀಗ ಟೀಕಾಕಾರರಿಗೆ ಮೌನಿ ಖಡಕ್ ಉತ್ತರ ನೀಡಿದ್ದಾರೆ.
ಹೌದು, ಚಿಕಿತ್ಸೆ ಪಡೆಯಲು ಪರತಪಿಸುತ್ತಿರುವ ಬಡ ರೋಗಿಗಳಿಗೆ ಸಹಾಯ ಹಸ್ತ ನೀಡಿದ್ದಾರೆ ರೂಪದರ್ಶಿ ಮೋನಿ. covid.giveindia.org ಎನ್ನುವ ಸಂಸ್ಥೆ ಹಣ ಸಂಗ್ರಹಿಸುತ್ತಿದೆ. ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಬಡರೋಗಿಗಳ ಚಿಕಿತ್ಸೆಗೆ ಈ ಹಣ ವಿನಿಯೋಗಿಸುತ್ತಿದೆ. ನಟಿ ಮೌನಿ ರಾಯ್ ಈ ಸಂಸ್ಥೆಗೆ ಹಣ ದಾನ ಮಾಡಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಅವರು ಹೇಳಿಕೊಂಡಿದ್ದಾರೆ.
ಕೋವಿಡ್ ನಿಂದಾಗಿ ನಮ್ಮ ಜನರು ಸಂಕಷ್ಟದಲ್ಲಿದ್ದಾರೆ. ಬಡವರು ಚಿಕಿತ್ಸೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಜನರ ನೆರವಿಗಾಗಿ covid.giveindia.org ಸಂಸ್ಥೆ ಫಂಡ್ ಕಲೆಕ್ಟ್ ಮಾಡುತ್ತಿದೆ. ಇದಕ್ಕೆ ನಾನೂ ಕೂಡ ನನ್ನ ಕೈಲಾದಷ್ಟು ದಾನ ಮಾಡಿದ್ದೇನೆ. ನೀವು ಮಾಡಿ, ಬಡ ಜನರ ಜೀವ ಉಳಿಸಿ ಎಂದು ಅಭಿಮಾನಿಗಳಲ್ಲಿ ಕೇಳಿ ಕೊಂಡಿದ್ದಾರೆ.
ಇನ್ನು ಮೌನಿ ರಾಯ್ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಮೊದಲ ಭಾಗದ ಐಟಂ ಸಾಂಗ್ವೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್ನಲ್ಲಿ ತನ್ನದೆಯಾದ ಫೇಮ್ ಹೊಂದಿರುವ ಈ ಬೆಡಗಿ, ಕೋವಿಡ್ ಬಿಕ್ಕಟ್ಟಿನಲ್ಲಿ ಜನರಿಗೆ ಸಹಾಯದ ಹಸ್ತ ಚಾಚುವ ಮೂಲಕ ತಮ್ಮನ್ನು ಟೀಕಿಸಿದವರ ಬಾಯಿ ಮುಚ್ಚಿಸಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.