ಬಾಲಿವುಡ್‌,ಟಾಲಿವುಡ್‌ ಸಿನಿಮಾದ ಮುಂದೆ ಮುಗ್ಗರಿಸದ ಹಾಲಿವುಡ್:‌ 2ನೇ ವಾರವೂ ಕಲೆಕ್ಷನ್‌ ಜೋರು


Team Udayavani, Jul 31, 2023, 5:19 PM IST

tdy-17

ಮುಂಬಯಿ: ಇತ್ತೀಚೆಗಿನ ದಿನಗಳಲ್ಲಿ ಹಾಲಿವುಡ್‌ ಸಿನಿಮಾಗಳನ್ನು ನೋಡುವ ಭಾರತೀಯ ಪ್ರೇಕ್ಷಕರು ಹೆಚ್ಚಾಗಿದ್ದಾರೆ. ಭಾರತದ ಬಾಕ್ಸ್‌ ಆಫೀಸ್‌ ನಲ್ಲಿ ವಿದೇಶಿ ಸಿನಿಮಾಗಳ ಹವಾ ಜೋರಾಗಿದೆ.

ಕಳೆದ ವಾರ ಬಾಲಿವುಡ್‌ ನಲ್ಲಿ ರಣವೀರ್‌ – ಆಲಿಯಾ ಅಭಿನಯದ ʼ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾ ರಿಲೀಸ್‌ ಆಗಿದೆ. ಬಾಲಿವುಡ್‌ ಮಟ್ಟಿಗೆ ಸಿನಿಮಾಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ಜೊತೆಗೆ, ಕಲೆಕ್ಷನ್‌ ಎರಡರಲ್ಲೂ ಸದ್ದು ಮಾಡಿದೆ.

ಇತ್ತ ದಕ್ಷಿಣಕ್ಕೆ ಬಂದರೆ ಪವನ್‌ ಕಲ್ಯಾಣ್‌, ಸಾಯಿ ಧರಮ್ ತೇಜ್ ಅಭಿನಯದ ʼಬ್ರೊʼ: ದಿ ಅವತಾರ್‌ʼ ಸಿನಿಮಾ ಕೂಡ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದೆ. ಸಿನಿಮಾ 100 ಕೋಟಿ ಗಳಿಸುವ ಸಮೀಪಕ್ಕೆ ಬಂದಿದೆ.

ಈ ಎರಡೂ ಸಿನಿಮಾದ ಅಬ್ಬರದ ನಡುವೆಯೂ ಇತ್ತೀಚೆಗೆ ತೆರೆಕಂಡ ಹಾಲಿವುಡ್‌ ನ ಎರಡು ಸಿನಿಮಾಗಳು ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ತನ್ನ ಕಲೆಕ್ಷನ್‌ ವಿಚಾರದಲ್ಲಿ ಕೂಡ ಹಿಂದೆ ಬಿದ್ದಿಲ್ಲ.

ಇದನ್ನೂ ಓದಿ: ರಜಿನಿ ‘ಜೈಲರ್’ ಗೆ ಸೆಡ್ಡು ಹೊಡೆದ ‘ತೋತಾಪುರಿ- 2’

ಕ್ರಿಸ್ಟೋಫರ್ ನೋಲನ್ ಅವರ ʼ ಓಪನ್‌ಹೈಮರ್ʼ ಹಾಗೂ ಮಾರ್ಗಾಟ್ ರಾಬಿ ಮತ್ತು ರಯಾನ್ ಗೊಸ್ಲಿಂಗ್ ಅಭಿನಯದ ʼಬಾರ್ಬಿʼ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎರಡು ವಾರ ಕಳೆಯುತ್ತ ಬಂದರೂ ಮುಂದುವರೆದಿದೆ.

ಕ್ರಿಸ್ಟೋಫರ್ ನೋಲನ್ ಅವರ ʼ ಓಪನ್‌ಹೈಮರ್ʼ ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. 10 ದಿನದ ಬಳಿಕ ಸಿನಿಮಾ 91.50 ಕೋಟಿ ರೂ. ಕಮಾಯಿ ಮಾಡಿದೆ. ಒಂದೆರೆಡು ದಿನದಲ್ಲಿ 100 ಕೋಟಿ ಕ್ಲಬ್‌ ಸೇರುವ ಸಾಧ್ಯತೆಯಿದೆ. ಭಾರತದಲ್ಲಿ ಈ ವರ್ಷ “ಫಾಸ್ಟ್ ಎಕ್ಸ್” ಮತ್ತು “ಮಿಷನ್ ಇಂಪಾಸಿಬಲ್ 7” 100 ಕೋಟಿ ಕ್ಲಬ್‌ ಸೇರಿದ ಹಾಲಿವುಡ್‌ ಸಿನಿಮಾಗಳು.

ʼಓಪನ್‌ಹೈಮರ್ʼ 100 ಕೋಟಿ ಕ್ಲಬ್‌ ಸೇರುವುದು ಪಕ್ಕಾ ಆಗಿದೆ. ಇದರ ಜೊತೆಗೆ ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಹಾಲಿವುಡ್‌ ಸಿನಿಮಾ ಎನ್ನುವ ಖ್ಯಾತಿಯನ್ನು ಸಿನಿಮಾಗಳಿಸುವ ಸಾಧ್ಯತೆಯಿದೆ.

ಇನ್ನು ʼಬಾರ್ಬಿʼ ಇದುವರೆಗೆ 32.75 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸಿನಿಮಾ 40 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಿನಿಮಾದ ಈ ಕಲೆಕ್ಷನ್‌ ಗಳು 800 – 850 ಸ್ಕ್ರೀನ್ ಗಳಲ್ಲಿ ಬರುತ್ತಿರುವುದು ಇಲ್ಲಿ ಗಮನಿಸಬೇಕಾದ ವಿಚಾರವಾಗಿದೆ.

ಇನ್ನು ಎರಡೂ ಸಿನಿಮಾಗಳು ಗ್ಲೋಬಲ್‌ ಬಾಕ್ಸ್‌ ಆಫೀಸ್‌ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ.

ʼಓಪನ್‌ಹೈಮರ್‌ʼ ನ ದಿನದ ಲೆಕ್ಕಚಾರ:   

ದಿನ 1 – 14.50 ಕೋಟಿ ರೂ.

2ನೇ ದಿನ – 17 ಕೋಟಿ ರೂ.

3ನೇ ದಿನ – 17 ಕೋಟಿ ರೂ.

4ನೇ ದಿನ – 6.75 ಕೋಟಿ ರೂ.

5ನೇ ದಿನ – 6.25 ಕೋಟಿ ರೂ.

6ನೇ ದಿನ – 5.75 ಕೋಟಿ ರೂ.

7ನೇ ದಿನ – 5.25 ಕೋಟಿ ರೂ.

8ನೇ ದಿನ – 4.40 ಕೋಟಿ ರೂ.

9ನೇ ದಿನ – 7 ಕೋಟಿ ರೂ.

10ನೇ ದಿನ – 7.40 ಕೋಟಿ ರೂ.

ಭಾರತದಲ್ಲಿ 10 ದಿನಗಳಲ್ಲಿ ಒಟ್ಟು ಗಳಿಕೆ: 91.50 ಕೋಟಿ ರೂ.

ʼಬಾರ್ಬಿʼಯ ದಿನದ ಲೆಕ್ಕಚಾರ:   

ದಿನ 1 – 4.40 ಕೋಟಿ ರೂ.

2ನೇ ದಿನ – 6 ಕೋಟಿ ರೂ.

3ನೇ ದಿನ – 6.70 ಕೋಟಿ ರೂ.

4ನೇ ದಿನ – 2.20 ಕೋಟಿ ರೂ.

5 ನೇ ದಿನ – 2.20 ಕೋಟಿ ರೂ.

6ನೇ ದಿನ – 2 ಕೋಟಿ ರೂ.

7ನೇ ದಿನ – 1.75 ಕೋಟಿ ರೂ.

8ನೇ ದಿನ – 1.50 ಕೋಟಿ ರೂ.

9ನೇ ದಿನ – 2.90 ಕೋಟಿ ರೂ.

10ನೇ ದಿನ – 3.10 ಕೋಟಿ ರೂ. 

ಭಾರತದಲ್ಲಿ 10 ದಿನಗಳಲ್ಲಿ ಒಟ್ಟು ಗಳಿಕೆ: 32.75 ಕೋಟಿ ರೂ.

 

ಟಾಪ್ ನ್ಯೂಸ್

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

1-deee

Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್

Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್

121

Border 2: ಸನ್ನಿ ಡಿಯೋಲ್‌ ʼಬಾರ್ಡರ್-2‌ʼಗೆ ʼಫೌಜಿʼಯಾಗಿ ಬಂದ ಸುನಿಲ್‌ ಶೆಟ್ಟಿ ಪುತ್ರ

Bollywood Actor Govinda: ಬಾಲಿವುಡ್‌ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು

Bollywood Actor Govinda: ಬಾಲಿವುಡ್‌ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು

1-kanga-eme

‘Emergency’ ದೃಶ್ಯ ಕಡಿತಕ್ಕೆ ಕಂಗನಾ ಸಮ್ಮತಿ: CBFC

Tusshar Kapoor: ʼಗೋಲ್‌ ಮಾಲ್‌ʼ ನಟ ತುಷಾರ್‌ ಕಪೂರ್‌ ಫೇಸ್‌ಬುಕ್‌ ಖಾತೆ ಹ್ಯಾಕ್

Tusshar Kapoor: ʼಗೋಲ್‌ ಮಾಲ್‌ʼ ನಟ ತುಷಾರ್‌ ಕಪೂರ್‌ ಫೇಸ್‌ಬುಕ್‌ ಖಾತೆ ಹ್ಯಾಕ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

2

Theft Case: ಬ್ಯಾಂಕಿನಿಂದ ಹಣದ ಬ್ಯಾಗ್‌ ಕಳವು ಪ್ರಕರಣ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.