ಸಿಂಗಾಪುರದಲ್ಲಿ ಹನಿಮೂನ್: ಪತ್ನಿಯೊಂದಿಗಿನ ಸುಂದರ ಫೋಟೋ ಹಂಚಿಕೊಂಡ ನಟ ಆಶಿಶ್ ವಿದ್ಯಾರ್ಥಿ
Team Udayavani, Jun 15, 2023, 12:16 PM IST
ಮುಂಬಯಿ: ಇತ್ತೀಚೆಗೆ ಎರಡನೇ ಮದುವೆಯಾದ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಪತ್ನಿ ರೂಪಾಲಿಯೊಂದಿಗೆ ಹಾಲಿ ಡೇ ಮೂಡ್ ನಲ್ಲಿ ವಿದೇಶದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಸುಂದರವಾದ ಫೋಟೋವನ್ನು ಆಶಿಶ್ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಆತ್ಮೀಯರ ಸಮ್ಮುಖದಲ್ಲಿ ಕೋಲ್ಕತ್ತಾದಲ್ಲಿ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ವಿವಾಹವಾಗಿದ್ದಾರೆ. 60ನೇ ವಯಸ್ಸಿನಲ್ಲಿ 2ನೇ ಮದುವೆಯಾದ ಬಗ್ಗೆ ಕೆಲವರು ನಾನಾ ಬಗೆಯ ಕಮೆಂಟ್ ಮಾಡಿದ್ದರು. ಮದುವೆಗೆ ವಯಸ್ಸು ಮುಖ್ಯವಲ್ಲ, ಎರಡು ಮನಸ್ಸುಗಳು ಮುಖ್ಯವೆಂದು ಹೇಳಿದ ನಟ ಆಶಿಶ್ ಮೊದಲ ಪತ್ನಿ ರಾಜೋಶಿಯಿಂದ ವಿಚ್ಚೇದನ ಹಾಗೂ ರೂಪಾಲಿ ಅವರನ್ನು ಭೇಟಿಯಾದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದನ್ನೂ ಓದಿ: Gruha Lakshmi ನಾಳೆಯಿಂದ ಗೃಹಲಕ್ಷ್ಮಿ ಯೋಜನೆ: ವರ್ಷವಿಡೀ ಅರ್ಜಿ ಸಲ್ಲಿಕೆ ಮಾಡಬಹುದು
“ಪಿಲೂ (ಮೊದಲ ಪತ್ನಿ) ಜೊತೆಗಿನ ನೆನಪಿನಿಂದ ಆಚೆ ಬಂದ ಬಳಿಕ ವ್ಲೋಗಿಂಗ್ ಅಸೈನ್ಮೆಂಟ್ವೊಂದರಲ್ಲಿ ನಾನು ರೂಪಾಲಿ ಅವರನ್ನು ಭೇಟಿಯಾದೆ. ಈ ಭೇಟಿ ಸ್ನೇಹಕ್ಕೆ ತಿರುಗಿತು. ನಾವು ಚಾಟಿಂಗ್ ಮಾಡುತ್ತ ಹೋದೆವು. ಅವರು ತಮ್ಮ ನೋವನ್ನು ಹಂಚಿಕೊಂಡರು. ಅವರ ಗಂಡ ತೀರಿ ಹೋಗಿ 5 ವರ್ಷಗಳು ಕಳೆದಿದೆ. ಮತ್ತೆ ಮದುವೆಯ ಬಗ್ಗೆ ಅವರು ಯೋಚನೆ ಮಾಡಿರಲಿಲ್ಲ. ಆದರೆ ನಮ್ಮಿಬ್ಬರ ನಡುವಿನ ಚಾಟಿಂಗ್ ನಮ್ಮನ್ನು ಹತ್ತಿರವಾಗಿಸಿತು. ಜೀವನವನ್ನು ಹೊಸದಾಗಿ ನೋಡುವ ಮತ್ತು ಮದುವೆಯಾಗುವ ಸಾಧ್ಯತೆಯ ಯೋಚನೆ ಮಾಡಿ ಮುಂದಿನ ಹೆಜ್ಜೆಯನ್ನು ಇಟ್ಟೆವು ಎಂದು ಅವರು ಹೇಳಿದ್ದರು.
ನವದಂಪತಿ ಸುತ್ತಾಡಲು ಸಿಂಗಾಪುರಕ್ಕೆ ತೆರಳಿದ್ದಾರೆ. ಇಬ್ಬರು ವಾಹನವೊಂದರಲ್ಲಿ ಸವಾರಿ ಮಾಡುವ ಫೋಟೋವನ್ನು ನಟ ಆಶಿಶ್ ವಿದ್ಯಾರ್ಥಿ ಹಂಚಿಕೊಂಡಿದ್ದಾರೆ. “ಪ್ರಿಯ ದೋಸ್ತ್, ನಿಮ್ಮ ಪ್ರೀತಿ ಮತ್ತು ಹಾರೈಕೆಗಳಿಗೆ ಧನ್ಯವಾದಗಳು” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ನಟನ ಪೋಸ್ಟ್ ಗೆ ಹಲವು ಮಂದಿ ಕಮೆಂಟ್ ಮಾಡಿದ್ದಾರೆ. “ಆಲ್ ದಿ ಬೆಸ್ಟ್. ಮೇಡ್ ಫಾರ್ ಈಚ್ ಅದರ್ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇಬ್ಬರು ಸದಾ ಖುಷಿಯಾಗಿರಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ವಿವಾಹ
National Cinema Day: ಈ ದಿನ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.