![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 9, 2021, 4:45 PM IST
ಕೊಲ್ಕತ್ತಾ: ನಟಿ ಹಾಗೂ ಟಿಎಂಸಿ ಸಂಸದೆ ಸುಸ್ರತ್ ಜಹಾನ ಮದುವೆ ಹಾಗೂ ಪ್ರಗ್ನೆಸಿ ವಿಚಾರವಾಗಿ ಕೊನೆಗೂ ಮೌನ ಮುರಿದಿದ್ದಾರೆ. ಹಾಗೂ ತಮ್ಮ ಹಾಗೂ ನಿಖಿಲ್ ಜೊತೆ ನಡೆದ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ನುಸ್ರತ್ ಜಹಾನ ಅವರು ಬೋಡ್ರಮ್ ಟೌನ್ನ ಉದ್ಯಮಿ ನಿಖಿಲ್ ಜೈನ್ ಜೊತೆ 2019ರ ಜೂನ್ 19 ರಂದು ಮದುವೆಯಾಗಿದ್ದರು. ಖುದ್ದು ನುಸ್ರತ್ ತಮ್ಮ ಮದುವೆ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಆದರೀಗ ಅವರೇ ಈ ಮದುವೆ ಮಾನ್ಯವಲ್ಲ ಎನ್ನುತ್ತಿದ್ದಾರೆ. ಟರ್ಕಿಶ್ ಕಾನೂನು ಪ್ರಕಾರ ನಡೆದ ಈ ಮದುವೆ ಭಾರತದಲ್ಲಿ ಅಸಿಂಧು. ಇಲ್ಲಿಯ ಕಾನೂನಿನ ಕಣ್ಣಿಗೆ ನಮ್ಮದು ಮದುವೆ ಅಲ್ಲ ಎಂದಿದ್ದಾರೆ.
ಗರ್ಭಿಣಿಯಾಗಿರುವ ನುಸ್ರತ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆಂಬ ಸುದ್ದಿ ಇತ್ತೀಚೆಗೆ ಹರಿದಾಡುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರ ಗಂಡ ನಿಖಿಲ್ ಜೈನ್ ತಾವಿಬ್ಬರೂ ಒಟ್ಟಿಗೆ ಇಲ್ಲವೆಂದಾಗ ಈ ಮಗು ನನ್ನದು ಹೇಗಾಗುತ್ತದೆ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನುಸ್ರತ್, ವಿದೇಶೀ ನೆಲದಲ್ಲಿದ್ದ ಕಾರಣ, ಹಾಗೂ ಟರ್ಕಿ ಮ್ಯಾರೇಜ್ ರೆಗ್ಯುಲೇಷನ್ ಅನ್ವಯ ಈ ಮದುವೆ ಮಾನ್ಯವಲ್ಲ. ಅಲ್ಲದೇ ಇದೊಂದು ಅಪೂರ್ಣ(ಎರಡು ವಿಭಿನ್ನ ಧರ್ಮದವರ ನಡುವೆ ನಡೆದ) ಮದುವೆ. ಹೀಗಾಗಿ ಇದಕ್ಕೆ ಭಾರತದಲ್ಲಿ ಶಾಸನಬದ್ಧ ಮಾನ್ಯತೆ ನೀಡಬೇಕಾದ ಅಗತ್ಯವಿತ್ತು. ಆದರೆ ಹಾಗಾಗಲಿಲ್ಲ ಎಂದಿದ್ದಾರೆ.
ಕಾನೂನಾತ್ಮಕವಾಗಿ ಈ ಮದುವೆ ಮಾನ್ಯವಲ್ಲ. ಇದನ್ನು ಕೇವಲ ರಿಲೇಷನ್ಶಿಪ್ ಅಥವಾ ಲಿವ್ ಇನ್ ರಿಲೇಷನ್ಶಿಪ್ ಎನ್ನಬಹುದು. ಹೀಗಾಗಿ ಡೈವೋರ್ಸ್ ಪ್ರಶ್ನೆಯೇ ಉದ್ಭವಿಸಲ್ಲ. ನಾವು ತುಂಬಾ ಸಮಯದ ಹಿಂದೆಯೇ ಪ್ರತ್ಯೇಕವಾಗಿದ್ದೇವೆ. ನಾನು ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ ಯಾಕೆಂದರೆ ನಾನು ನನ್ನ ವೈಯುಕ್ತಿಕ ಜೀವನದ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳುವುದಿಲ್ಲ. ನಮ್ಮ ಸೋ ಕಾಲ್ಡ್ ಮದುವೆ ಕಾನೂನಿನ ಪ್ರಕಾರ ಮಾನ್ಯವಲ್ಲ ಎಂದಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.