ʼPeaky Blindersʼ ಹಾಡು ಕಾಪಿ ಮಾಡಿ ʼಲಿಯೋʼದಲ್ಲಿ ಬಳಸಿದ್ರಾ ಅನಿರುದ್ಧ್?‌ ಏನಿದು ವಿವಾದ?

ವಿವಾದದ ಕುರಿತು ಪ್ರತಿಕ್ರಿಯೆ ಕೊಟ್ಟ Peaky Blinder ಸಂಯೋಜಕ

Team Udayavani, Oct 24, 2023, 2:21 PM IST

tdy-9

ಚೆನ್ನೈ: ದಳಪತಿ ವಿಜಯ್‌ ಅವರ ʼಲಿಯೋʼ ಸಿನಿಮಾ ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. ಸಿನಿಮಾಕ್ಕೆ ಅಂದುಕೊಂಡ ಹಾಗೆ ಬಾಕ್ಸ್‌ ಆಫೀಸ್‌ ನಲ್ಲಿ ಧಮಾಕ ಆರಂಭ ಸಿಕ್ಕಿದೆ. ಈಗಾಗಲೇ ವರ್ಲ್ಡ್‌ ವೈಡ್‌ ಸಿನಿಮಾ 400 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಸಿನಿಮಾದಲ್ಲಿ ದಳಪತಿ ಅವರ ಮಾಸ್‌ ಲುಕ್‌ & ಸೀನ್‌ ಗಳು ಎಷ್ಟು ಗಮನ ಸೆಳೆಯುತ್ತದೆಯೋ ಅಷ್ಟೇ ಗಮನ ಸೆಳೆಯುವುದು ಅನಿರುದ್ಧ್‌ ಅವರ ಮ್ಯೂಸಿಕ್.‌ ʼಲಿಯೋʼ ಸಿನಿಮಾದ ಮ್ಯೂಸಿಕ್‌ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇದೇ ಮ್ಯೂಸಿಕ್‌ ವಿಚಾರವಾಗಿ ಸಂಗೀತ ಸಂಯೋಜಕ ಅನಿರುದ್ಧ್‌ ಅವರು ಟೀಕೆಗೆ ಒಳಗಾಗಿದ್ದಾರೆ.

ʼಲಿಯೋʼ ಸಿನಿಮಾದಲ್ಲಿನ ʼಆರ್ಡನರಿ ಪರ್ಸನ್‌ʼ ಎನ್ನುವ ಹಾಡು ಪ್ರೇಕ್ಷಕರ ಗಮನ ಸೆಳೆಯುತ್ತದೆ. ಈ ಹಾಡಿನ ಬಿಜಿಎಂ ಕಿಕ್‌ ಕೊಡುವಂತಿದೆ. ಟ್ರ್ಯಾಕ್‌ ನ್ನು ಯೂಟ್ಯೂಬ್‌ ಗೆ ಹಾಕುವಂತೆ ಕೆಲ ಫ್ಯಾನ್ಸ್‌ ಗಳು ಆಗ್ರಹಿಸಿದ್ದರು. ಅದರಂತೆ ʼಲಿಯೋʼ ತಂಡ ಹಾಡನ್ನು ಯೂಟ್ಯೂಬ್‌ ಗೆ ಅಪ್ಲೋಡ್‌ ಮಾಡಿದೆ. ಆದರೆ ಇಲ್ಲಿಂದ ವಿವಾದ ಉಂಟಾಗಿದೆ.

ʼಆರ್ಡನರಿ ಪರ್ಸನ್‌ʼ ಹಾಡನ್ನು ಕಾಪಿ ಮಾಡಲಾಗಿದೆ. ಇದನ್ನು ಕದ್ದು ಚಿತ್ರದಲ್ಲಿ ಆಳವಡಿಸಲಾಗಿದೆ ಎಂದು ಅನಿರುದ್ಧ್‌ ಮೇಲೆ ಕೆಲವರು ಆರೋಪವನ್ನು ಮಾಡಿದ್ದಾರೆ. ಓಟ್ನಿಕಾ(Otnicka) ಎನ್ನುವ ಬೆಲರೂಸಿಯನ್ ಮೂಲದ ಗಾಯಕನ ‘ಪೀಕಿ ಬ್ಲೈಂಡರ್ಸ್'(Peaky Blinders) ಹಾಡಿನಿಂದ ಇದನ್ನು ಕಾಪಿ ಮಾಡಲಾಗಿದೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.

ಹಾಡನ್ನು ಕೇಳಿ ಅನೇಕರು ಓಟ್ನಿಕಾ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಕೇಳಿದ್ದಾರೆ. ಇದೀಗ ಈ ವಿವಾದದ ಬಗ್ಗೆ ಸ್ವತಃ ಓಟ್ನಿಕಾ ಅವರೇ ಇನ್ಸ್ಟಾಗ್ರಾಮ್‌ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

“ಗೆಳೆಯರೇ, “ಲಿಯೋ” ಚಿತ್ರದ ಕುರಿತು ನಿಮ್ಮ ನೂರಾರು ಸಂದೇಶಗಳು ಬರುತ್ತಿದೆ. ನಾನು ಎಲ್ಲವನ್ನೂ ನೋಡಬಹುದು, ಆದರೆ ಎಲ್ಲರಿಗೂ ಉತ್ತರಿಸುವುದು ಕಷ್ಟ. ಈ ಹಾಡಿನ ಬಗ್ಗೆ ನನ್ನನು ಅನೇಕರು ಕೇಳುತ್ತಿದ್ದಾರೆ. ʼಲಿಯೋʼ ಹಾಡಿನ ಕೆಳಗೆ ನನ್ನನ್ನು ಉಲ್ಲೇಖಿಸಿ ಎಲ್ಲಿದ್ದೀರಾ ಅಂಥ ಕೇಳುತ್ತಿದ್ದಾರೆ. ಸದ್ಯ ಪರಿಸ್ಥಿತಿ ತುಂಬಾ ಅಸ್ಪಷ್ಟವಾಗಿದೆ. ಇದರ ಬಗ್ಗೆ ಪರಿಶೀಲಿಸಿ, ಸ್ಪಷ್ಟನೆ ನೀಡುತ್ತೇನೆ” ಎಂದು ಅವರು ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ ಗೆ ಕಾಮೆಂಟ್‌ ಮಾಡಿದ ವ್ಯಕ್ತಿಗೆ ಪ್ರತಿಕ್ರಿಯೆ ನೀಡಿರುವ ಅವರು, “ನನ್ನ ಹಾಡನ್ನು ‘ಲಿಯೋ’ ನಲ್ಲಿ ಬಳಸಿರುವ ಬಗ್ಗೆ ನನಗೆ ತಿಳಿದಿಲ್ಲ. ಲೇಬಲ್ ಹಕ್ಕುಸ್ವಾಮ್ಯವನ್ನು ಹೊಂದಿಲ್ಲ ಮತ್ತು ಕಲಾವಿದನ ಅರಿವಿಲ್ಲದೆ ಪರವಾನಗಿ ನೀಡಲು ಸಾಧ್ಯವಿಲ್ಲ. ಯಾರೂ ನನ್ನನ್ನು ಮತ್ತು ತಂಡವನ್ನು ಸಂಪರ್ಕಿಸಿಲ್ಲ” ಎಂದು ಅವರು ಹೇಳಿದ್ದಾರೆ.

ಅನಿರುದ್ಧ್ ರವಿಚಂದರ್ ‘ಪೀಕಿ ಬ್ಲೈಂಡರ್ಸ್’ನ ಅಭಿಮಾನಿ. ‘ಆರ್ಡಿನರಿ ಪರ್ಸನ್’ ಟ್ರ್ಯಾಕ್ ‘ಪೀಕಿ ಬ್ಲೈಂಡರ್ಸ್’ ನಿಂದ ಪ್ರೇರಿತವಾಗಿದೆ. ಅದನ್ನು ನಕಲು ಮಾಡಿಲ್ಲ ಎಂದು ಕೆಲವರು ಅನಿರುದ್ಧ್‌ ಪರ ಕಾಮೆಂಟ್‌ ಮಾಡಿದ್ದಾರೆ.

ʼಲಿಯೋʼ ಸಿನಿಮಾದಲ್ಲಿ ವಿಜಯ್, ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಮಿಸ್ಕಿನ್, ಸ್ಯಾಂಡಿ ಮತ್ತು ಗೌತಮ್ ಮೆನನ್ ಸೇರಿದಂತೆ ಸಮಗ್ರ ತಾರಾಗಣವನ್ನು ಹೊಂದಿದೆ. ಮ್ಯಾಥ್ಯೂ ಥಾಮಸ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮತ್ತು ಹಲವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hollywood: ಆಸ್ಕರ್‌ ವಿಜೇತ ‘ಟೈಟಾನಿಕ್‌ʼ, ʼಅವತಾರ್‌ʼ ನಿರ್ಮಾಪಕ ಜಾನ್ ಲ್ಯಾಂಡೌ ನಿಧನ

Hollywood: ಆಸ್ಕರ್‌ ವಿಜೇತ ‘ಟೈಟಾನಿಕ್‌ʼ, ʼಅವತಾರ್‌ʼ ನಿರ್ಮಾಪಕ ಜಾನ್ ಲ್ಯಾಂಡೌ ನಿಧನ

1

ವರ್ಷದ ಮೊದಲಾರ್ಧದಲ್ಲಿ 1081ಕೋಟಿ ರೂ.ಗಳಿಕೆ ಕಂಡ ಬಾಲಿವುಡ್: ಸೋತವರೆಷ್ಟು,ಗೆದ್ದವರೆಷ್ಟು?

samanta

Health illiterate; ‘ಆರೋಗ್ಯ ಅನಕ್ಷರಸ್ಥೆ’ ಎಂದ ವೈದ್ಯನಿಗೆ ನಟಿ ಸಮಂತಾ ತಿರುಗೇಟು

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

ಜಪಾನ್‌ನಲ್ಲಿ ರಿಲೀಸ್‌ ಆಗಲಿದೆ ʼಜವಾನ್‌ʼ: 4 ತಿಂಗಳ ಮೊದಲೇ ಅಡ್ವಾನ್ಸ್‌ ಬುಕಿಂಗ್‌ ಶುರು

ಜಪಾನ್‌ನಲ್ಲಿ ರಿಲೀಸ್‌ ಆಗಲಿದೆ ʼಜವಾನ್‌ʼ: 4 ತಿಂಗಳ ಮೊದಲೇ ಅಡ್ವಾನ್ಸ್‌ ಬುಕಿಂಗ್‌ ಶುರು

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

police crime

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.