Film ಆಸಕ್ತಿ ಕಡಿಮೆ..; ಕರಣ್ ಜೋಹರ್ ಕಾಲೆಳೆದ ಶಾರುಖ್ ಖಾನ್!
Team Udayavani, Sep 11, 2024, 9:25 AM IST
ಮುಂಬೈ: ಸೂಪರ್ಸ್ಟಾರ್ ಶಾರುಖ್ ಖಾನ್( Superstar Shah Rukh Khan ) ಅವರು ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್(Karan Johar) ಅವರು ಚಾಟ್ ಶೋಗಳನ್ನು ಆಯೋಜಿಸಿ ಸಿನಿಮಾಗಳತ್ತ ಕಡಿಮೆ ಆಸಕ್ತಿ ತೋರುತ್ತಿರುವುದಕ್ಕಾಗಿ ಕಾಲೆಳೆದಿದ್ದಾರೆ.
IIFA ಪ್ರಶಸ್ತಿಗಳ ಪತ್ರಿಕಾಗೋಷ್ಠಿಯಲ್ಲೇ ನಿರ್ದೇಶಕ ಕರಣ್ ಜೋಹರ್ ಅವರ ಸಮ್ಮುಖದಲ್ಲೇ ಸಿನಿಮಾಗಳತ್ತ ಕಡಿಮೆ ಸಕ್ರಿಯರಾಗಿದ್ದಕ್ಕಾಗಿ ಶಾರುಖ್ ಅವರು ಕರಣ್ ಕಾಲೆಳೆದರು.
ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (IIFA) ಅವಾರ್ಡ್ಸ್ 2024 ಅನ್ನು ಆಯೋಜಿಸಲು ಸಿದ್ಧರಾಗಿರುವ ಶಾರುಖ್ ಮತ್ತು ಕರಣ್, “ಕುಚ್ ಕುಚ್ ಹೋತಾ ಹೈ”, “ಕಭಿ ಖುಷಿ ಕಭಿ ಗಮ್”, “ಮೈ ನೇಮ್ ಈಸ್ ಖಾನ್, “ಕಭಿ ಅಲ್ವಿದಾ ನಾ ಕೆಹನಾ” ನಂತಹ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಮೋಡಿ ಮಾಡಿದ್ದರು.
“ಚಾಟ್ ಶೋಗಳಲ್ಲಿ ಹೆಚ್ಚು ಮಗ್ನರಾಗಿರುವ ಕರಣ್ ಅವರಿಗೆ ”ಯಾವಾಗ ಚಲನಚಿತ್ರಗಳನ್ನು ಮಾಡಲಿದ್ದೀರಿ, ನನ್ನ ಸಹೋದರ”ಎಂದು ಶಾರುಖ್ ನಗುವಿನ ಅಲೆ ಎಬ್ಬಿಸಿದರು.2023 ರಲ್ಲಿ ಕರಣ್ “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ” ಅವರ ಕೊನೆಯ ನಿರ್ದೇಶನ ಚಿತ್ರ ಎಂದು ಶಾರುಖ್ ನೆನಪಿಸಿಕೊಂಡರು. “ಕಾಫಿ ವಿತ್ ಕರಣ್” ಜನಪ್ರಿಯ ಸೆಲೆಬ್ರಿಟಿ ಚಾಟ್ ಶೋ ಆಗಿದೆ.
”ನಾನು ಸಿನಿಮಾ ಮಾಡಬೇಕೆಂದಿದ್ದೇನೆ ಮತ್ತು ಮಾಡಬೇಕಾದುದು ಅದನ್ನೇ” ಎಂದು ಚಲನಚಿತ್ರ ನಿರ್ಮಾಪಕ ಕರಣ್ ಹೇಳಿದರು.
ಮೂರು ದಿನಗಳ IIFA ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯ ಯಾಸ್ ದ್ವೀಪದಲ್ಲಿ ಸತತ ಮೂರನೇ ವರ್ಷ ಸೆಪ್ಟೆಂಬರ್ 27 ರಿಂದ 29 ರವರೆಗೆ ನಡೆಯಲಿದೆ. ನಟ ವಿಕ್ಕಿ ಕೌಶಲ್ ವೇದಿಕೆಯಲ್ಲಿ ಶಾರುಖ್ ಮತ್ತು ಕರಣ್ ಜತೆಯಾಗಿ ಹೋಸ್ಟ್ ಮಾಡಲಿದ್ದಾರೆ. ಹಿರಿಯ ನಟಿ ರೇಖಾ ಮತ್ತು ಶಾಹಿದ್ ಕಪೂರ್, ಜಾನ್ವಿ ಕಪೂರ್ ಮತ್ತು ಕೃತಿ ಸನೋನ್ ಮುಂತಾದ ತಾರೆಯರ ಶೋ ಕೂಡ ಮುಖ್ಯ ಆಕರ್ಷಣೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
Jawan Movie: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ಸೂಪರ್ ಹಿಟ್ ʼಜವಾನ್ʼ
Actor James Hollcroft: ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನಟ ಶವವಾಗಿ ಪತ್ತೆ
Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.