![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Aug 22, 2023, 5:42 PM IST
Pawan Kalyan: ಈ ಕಾರಣದಿಂದ ಪವರ್ ಸ್ಟಾರ್ ʼಉಸ್ತಾದ್ ಭಗತ್ʼನಿಂದ ಹೊರಬಿದ್ದ ಪೂಜಾ ಹೆಗ್ಡೆ
ಹೈದರಾಬಾದ್: ಪವನ್ ಕಲ್ಯಾಣ್ ಅವರ ʼಉಸ್ತಾದ್ ಭಗತ್ ಸಿಂಗ್’ ಸೆಟ್ಟೇರುವ ಮುನ್ನವೇ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಿದೆ. ಸಿನಿಮಾದ ನಾಯಕಿ ಯಾರೆನ್ನುವ ಕುರಿತು ಅನೇಕ ಗಾಸಿಪ್ ಗಳ ಹಬ್ಬಿದ್ದು, ಇದೀಗ ಈ ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದೆ.
ʼಉಸ್ತಾದ್ ಭಗತ್ ಸಿಂಗ್’ ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ಪವನ್ ಕಲ್ಯಾಣ್ ಅವರ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಹರೀಶ್ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಬಹುಭಾಷಾ ನಟಿ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎನ್ನುವ ಮಾತುಗಳು ಆರಂಭಿಕವಾಗಿ ಕೇಳಿ ಬಂದಿತ್ತು. ಆ ಬಳಿಕ ಅವರು ಈ ಸಿನಿಮಾದಲ್ಲಿ ಇರುವ ಬಗ್ಗೆ ಕೆಲವೊಂದು ಗಾಸಿಪ್ ಗಳು ಹರಿದಾಡಿತ್ತು.
ಪೂಜಾ ಹೆಗ್ಡೆ ಅವರ ಕಳೆದ ಕೆಲ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿಲ್ಲ. ಸತತ ಸೋಲಿನಿಂದ ನಟಿ ಪೂಜಾ ಹೆಗ್ಡೆ ಈಗ ತನ್ನ ಸ್ಕ್ರಿಪ್ಟ್ ಗಳನ್ನು ಎಚ್ಚರಿಕೆ ವಹಿಸಿಕೊಂಡು ಆಯ್ದುಕೊಳ್ಳುತ್ತಿದ್ದಾರೆ. ತನಗೆ ಸೂಕ್ತವಾದ ಸ್ಕ್ರಿಪ್ಟ್ ಗಳನ್ನು ಮಾತ್ರ ಆಯ್ದುಕೊಳ್ಳುತ್ತಿದ್ದಾರೆ. ಇದೀಗ ʼಉಸ್ತಾದ್ ಭಗತ್’ ಚಿತ್ರದಿಂದ ಕರಾವಳಿ ಚೆಲುವೆ ಹೊರಬಿದ್ದಿದ್ದಾರೆ.
ʼಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಅವರೊಂದಿಗೆ ಬಹುಭಾಷಾ ನಟಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ.
ಸೆ. 5ರಿಂದ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದ್ದು, ಈ ಸಿನಿಮಾದಲ್ಲಿ ಶ್ರೀಲೀಲಾ, ಅಶುತೋಷ್ ರಾಣಾ, ನವಾಬ್ ಶಾ, ಬಿ ಎಸ್ ಅವಿನಾಶ್, ಗೌತಮಿ ಮತ್ತು ಚಮ್ಮಕ್ ಚಂದ್ರ ಮುಂತಾದವರು ನಟಿಸಲಿದ್ದಾರೆ ಎಂದು ಮೈತ್ರಿ ಮೂವೀ ಮೇಕರ್ಸ್ ತಿಳಿಸಿದೆ.
ʼಉಸ್ತಾದ್ ಭಗತ್ ಸಿಂಗ್ʼ ಚಿತ್ರವು 2016 ರಲ್ಲಿ ಬಿಡುಗಡೆಯಾದ ಅಟ್ಲೀ ಅವರ ತಮಿಳು ಚಿತ್ರ ʼಥೇರಿʼಯ ರಿಮೇಕ್ ಎನ್ನಲಾಗಿದ್ದು, ತಮಿಳಿನಲ್ಲಿ ದಳಪತಿ ವಿಜಯ್, ಸಮಂತಾ ರೂತ್ ಪ್ರಭು ಮತ್ತು ಆಮಿ ಜಾಕ್ಸನ್ ನಟಿಸಿದ್ದರು. ಕಾಲಿವುಡ್ ನಲ್ಲಿ ʼಥೇರಿʼ ಸೂಪರ್ ಹಿಟ್ ಆಗಿತ್ತು.
ಇತ್ತೀಚೆಗೆ ರಿಲೀಸ್ ಆದ ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ್ ಅವರ ʼಬ್ರೋʼ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.