![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 5, 2023, 1:41 PM IST
ಮುಂಬಯಿ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಆಶ್ಲೀಲ ವಿಡಿಯೋ ಪ್ರಕರಣ ಸುದ್ದಿಯಾದ ದಿನದಿಂದ ಇಂದಿನವರೆಗೆ ಮುಖ ಮುಚ್ಚಿಕೊಂಡೇ ಜನರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.
ರಾಜ್ ಕುಂದ್ರಾ ಜೈಲಿನಲ್ಲಿದ್ದ ದಿನ ಹಾಗೂ ಜಾಮೀನು ಪಡೆದವರೆಗಿನ ದಿನಗಳಲ್ಲಿ ನಡೆದ ಸಂಗತಿಗಳ ಸುತ್ತ ಸಿನಿಮಾವೊಂದು ಬರಲಿದೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಈ ಬಗ್ಗೆ ಮಾತುಕತೆ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ.
ಇದೀಗ ರಾಜ್ ಕುಂದ್ರಾ ಮೊದಲ ಬಾರಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಜನರ ಮುಂದೆ ಕಾಣಿಸಿಕೊಂಡಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಅವರು 18+ ಜೋಕ್ಸ್ ಗಳನ್ನು ಹೇಳಿದ್ದಾರೆ.
ಇದನ್ನೂ ಓದಿ: Viral: ಹೆಲ್ಮೆಟ್ ಇಲ್ಲದೆ ಪೊಲೀಸರ ಕೈಗೆ ಸಿಕ್ಕಿಬಿದ್ದರೂ,ಈತನಿಗೆ ಇದುವರಗೆ ದಂಡವೇ ಹಾಕಿಲ್ಲ!
ಅವರ ಸ್ಟ್ಯಾಂಡ್ ಅಪ್ ಕಾಮಿಡಿಯ ಝಲಕ್ ನ್ನು ರಾಜ್ ಕುಂದ್ರಾ ಅವರೇ ಹಂಚಿಕೊಂಡಿದ್ದಾರೆ. ವೇದಿಕೆಯ ಬರುವ ವೇಳೆ ಅವರು “ನಾನು ಹೇಳುವ ‘ಲೈಂಗಿಕ ಜೋಕ್ಗಳಿಂದ'(18+) ನಿಮಗೆ ಮುಜುಗರವಾದರೆ ನೀವು ಇಲ್ಲಿಂದ ಹೋಗಬಹುದು” ಎಂದಿದ್ದಾರೆ.
ಲೇಡೀಸ್ & ಜಂಟಲ್ ಮೆನ್ ನಾನು ರಾಜ್ ಕುಂದ್ರಾ, ‘ಮಾಸ್ಕ್ ಮ್ಯಾನ್’ ಶಿಲ್ಪಾ ಕಾ ಪತಿ ಮತ್ತು ‘ಸಾಸ್ತಾ ಕನ್ಯೆ ವೆಸ್ಟ್’ ಎಂದೂ ನನ್ನನು ಕರೆಯುತ್ತಾರೆ. 18 ವರ್ಷದವನಾಗಿದ್ದಾಗ ಲಂಡನ್ ನಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದೆ. 21ನೇ ವಯಸ್ಸಿನಲ್ಲಿ ಪಾಶ್ಮಿನಾ ಶಾಲು ಉದ್ಯಮವನ್ನೇ ಕಟ್ಟಿ ಬೆಳೆಸಿದೆ. ನನ್ನ ಕೆಲಸ ಯಾವತ್ತೂ ಬಟ್ಟೆ ಏರಿಸುವುದೇ ಆಗಿತ್ತು, ಬಟ್ಟೆ ತೆಗೆಯುವುದಿಲ್ಲ” ಎಂದು ಪರೋಕ್ಷವಾಗಿ ಆಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ಸ್ಟ್ಯಾಂಡ್ ಅಪ್ ಕಾಮಿಡಿಯ ಈ ವಿಡಿಯೋ ಕ್ಲಿಪಿಂಗ್ ನ್ನು ರಾಜ್ ಕುಂದ್ರಾ ಅವರು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್ 2021 ರಲ್ಲಿ ಆಶ್ಲೀಲ ವಿಡಿಯೋ ನಿರ್ಮಾಣ ಹಾಗೂ ವಿತರಣೆ ಮಾಡಿದ ಆರೋಪದ ಮೇಲೆ ರಾಜ್ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. ಕೆಲ ದಿನಗಳ ಕಾಲ ರಾಜ್ ಕುಂದ್ರಾ ಈ ಪ್ರಕರಣಕ್ಕೆ ಸಂಬಂಧ ಜೈಲಿನಲ್ಲಿದ್ದರು.
View this post on Instagram
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.