“Hansika Motwani ಕಾಲನ್ನು ಮುಟ್ಟಲು..” ವೇದಿಕೆಯಲ್ಲೇ ವಿವಾದಾತ್ಮಕವಾಗಿ ಮಾತನಾಡಿದ ನಟ
Team Udayavani, Jul 4, 2023, 5:49 PM IST
ಚೆನ್ನೈ: ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಮದುವೆ ಬಳಿಕ ಮತ್ತೆ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ʼಪಾರ್ಟ್ನರ್ʼ ಸಿನಿಮಾದ ಪ್ರಚಾರದಲ್ಲಿ ನಿರತರಾಗಿರುವ ಅವರು ಇತ್ತೀಚೆಗೆ ಸಹನಟ ಆಡಿದ ಮಾತಿನಿಂದ ಮುನಿಸಿಕೊಂಡಿರುವುದು ಟಾಕ್ ಆಫ್ ಟೌನ್ ಆಗಿದೆ.
ಆದಿ ಪಿನಿಸೆಟ್ಟಿ ಹಾಗೂ ಹನ್ಸಿಕಾ ಅಭಿನಯಯದ ʼಪಾರ್ಟ್ನರ್ʼ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಸಿನಿಮಾದಲ್ಲಿ ರೋಬೋ ಶಂಕರ್ ಅವರು ನಟಿಸಿದ್ದಾರೆ. ಚೆನ್ನೈನಲ್ಲಿ ನಡೆದ ಸಿನಿಮಾ ತಂಡದ ಕಾರ್ಯಕ್ರಮದಲ್ಲಿ ರೋಬೋ ಶಂಕರ್ ಅವರು, ಸಿನಿಮಾದ ದೃಶ್ಯವೊಂದರ ಅನುಭವದ ಬಗ್ಗೆ ಮಾತನಾಡಿರುವುದು ನಟಿ ಹನ್ಸಿಕಾ ಅವರ ಮುನಿಸಿಗೆ ಕಾರಣವಾಗಿದೆ.
“ಸಿನಿಮಾದಲ್ಲಿ ನಟಿ ಹನ್ಸಿಕಾ ಅವರ ಕಾಲುಗಳನ್ನು ಮುಟ್ಟುವ ದೃಶ್ಯವೊಂದಿತ್ತು. ಆದರೆ ಅವರು ಆ ದೃಶ್ಯವನ್ನು ಮಾಡಲು ನಿರಾಕರಿಸಿದರು. ಅವರು ಕಾಲು ಹಾಗೂ ಬೆರಳನ್ನು ಮುಟ್ಟಲು ಅವಕಾಶ ನೀಡಲಿಲ್ಲ. ಆದರೆ ಅದೇ ದೃಶ್ಯವನ್ನು ನಾಯಕ ನಟ ಆದಿ ಅವರಿಗೆ ಮಾಡಲು ನಟಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ನಾಯಕನಾಗಿರುವ ಲಾಭ” ಎಂದು ಅವರು ಹೇಳಿದ್ದಾರೆ.
ಈ ವೇಳೆ ವೇದಿಕೆಯಲ್ಲಿ ನಾಯಕಿ ಹನ್ಸಿಕಾ ಅವರು ಕೂಡ ಇದ್ದರು. ಕೂಡಲೇ ರೋಬೋ ಶಂಕರ್ ನನ್ನ ಮಾತನ್ನು ತಮಾಷೆಯಾಗಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಆದರೆ ವೇದಿಕೆಯಲ್ಲಿದ್ದ ಹನ್ಸಿಕಾ ಅವರು ಇದರಿಂದ ಅಸಮಾಧಾನಗೊಂಡಿದ್ದಾರೆ.
ನಟಿಯ ಮೇಲಿನ ರೋಬೋ ಶಂಕರ್ ಅವರ ಹೇಳಿಕೆಗೆ ಹಲವರು ಅವರನ್ನು ಟೀಕಿಸಿದ್ದಾರೆ. ಸಮಾರಂಭದಲ್ಲಿದ್ದ ಪತ್ರಕರ್ತರೊಬ್ಬರು ನೀವು ನಿಮ್ಮ ಮಾತಿನ ಗಡಿಯನ್ನು ದಾಟಿದ್ದೀರಿ ಎಂದಿದ್ದಾರೆ. ನೆಟ್ಟಿಗರು ಕೂಡ ರೋಬೋ ಶಂಕರ್ ಅವರ ಮಾತಿಗೆ ಗರಂ ಆಗಿದ್ದಾರೆ.
ಇದಾದ ಬಳಿಕ ʼಪಾರ್ಟ್ನರ್ʼ ಚಿತ್ರತಂಡ ನಟಿಗೆ ರೋಬೋ ಶಂಕರ್ ಪರವಾಗಿ ಹನ್ಸಿಕಾಗೆ ಕ್ಷಮೆಯಾಚಿಸಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಆದಿ ಪಿನಿಸೆಟ್ಟಿ, ಹಂಸಿಕಾ ಮೋಟ್ವಾನಿ, ಯೋಗಿ ಬಾಬು, ಪಾಲಕ್ ಲಾಲ್ವಾನಿ, ಪಾಂಡ್ಯರಾಜನ್, ರೋಬೋ ಶಂಕರ್, ಜಾನ್ ವಿಜಯ್, ರವಿ ಮರಿಯಾ, ಟೈಗರ್ ತಂಗದುರೈ ಮತ್ತು ಇತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Japan ಆ್ಯನಿಮೇಟೆಡ್ ರಾಮಾಯಣ ಅ.18ಕ್ಕೆ ಮರು ಬಿಡುಗಡೆ
Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ವಿವಾಹ
National Cinema Day: ಈ ದಿನ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.