![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 30, 2023, 11:02 AM IST
ಮುಂಬಯಿ: ನಟಿ ಸಮಂತಾ ರುತ್ ಪ್ರಭು ʼಶಾಕುಂತಲಂʼ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಕೆಲ ಸಮಯದಿಂದ ಸುದ್ದಿಯಲ್ಲಿರುವ ಸಮಂತಾ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ʼಪುಷ್ಪಾʼ ಸಿನಿಮಾದಲ್ಲಿನ ʼಊ ಅಂಟವಾʼ ಹಾಡಿನ ಬಗ್ಗೆ ಮಾತನಾಡಿದ್ದಾರೆ.
ʼಮಿಸ್ ಮಾಲಿನಿʼ ನಡೆಸಿದ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ʼಪುಷ್ಪಾʼ ಸಿನಿಮಾದಲ್ಲಿನ ʼಊ ಅಂಟವಾʼ ಹಾಡಿನ ಹಿಂದೆ ಕೇಳಿ ಬಂದ ಕೆಲ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ.
ʼಪುಷ್ಪಾʼ ಸಿನಿಮಾದ ʼಊ ಅಂಟವಾʼ ಹಾಡು ಹಿಟ್ ನಂಬರ್. ಹಾಡಿನಲ್ಲಿ ಐಟಂ ಡ್ಯಾನ್ಸ್ ಮಾಡಿದ್ದು ನಟಿ ಸಮಂತಾ. ಸಮಂತಾ ಅರೆ ಉಡುಗೆ ತೊಟ್ಟು ಹಾಡಿನ ಬೀಟ್ ಗೆ ಹೆಜ್ಜೆ ಹಾಕಿದ್ದು, ಪಡ್ಡೆ ಹುಡುಗರ ಗಮನ ಸೆಳೆದಿತ್ತು. ಈ ಹಾಡು ಸಮಂತಾ ಗಂಡನಿಂದ ದೂರವಾದ ಬಳಿಕ ಕೆಲ ಸಮಯದ ಬಳಿಕವೇ ರಿಲೀಸ್ ಆಗಿತ್ತು.
ಇದನ್ನೂ ಓದಿ: “ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್ʼ ಹೊಸ ಪೋಸ್ಟರ್ ಹಂಚಿಕೊಂಡ ಪ್ರಭಾಸ್
ʼಊ ಅಂಟವಾʼ ಹಾಡಿಗೆ ಆಫರ್ ಬಂದಾಗ ನಾನು ವಿಚ್ಛೇದನದ ವಿಚಾರವನ್ನು ಅನೌನ್ಸ್ ಮಾಡುವ ಹಂತದಲ್ಲಿದ್ದೆ. ಆ ವೇಳೆ ನನ್ನ ಕುಟುಂಬ, ಸ್ನೇಹಿತರು, ಆತ್ಮೀಯರು ಸೇರಿದಂತೆ ಹಲವರು ʼನೀನು ಐಟಂ ಡ್ಯಾನ್ಸ್ ಆಫರ್ ಒಪ್ಪಿಕೊಳ್ಳಬೇಡ, ಮನೆಯಲ್ಲಿರು” ಎಂದಿದ್ದರು. ವಿಚ್ಚೇನದ ಬಳಿಕ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ ಎಂದು ಸ್ನೇಹಿತರು ಹೇಳಿದರು ಎಂದಿದ್ದಾರೆ.
ಹಾಡು ರಿಲೀಸ್ ಆಗುವ ವೇಳೆ ನಟಿಯ ವಿಚ್ಚೇದನವಾಗಿತ್ತು.ʼ ಸೂಪರ್ ಡಿಲಕ್ಸ್ʼ ಸಿನಿಮಾದಲ್ಲಿ ನಟಿಸಲು ಪ್ರೋತ್ಸಾಹಿಸಿದ ಸ್ನೇಹಿತರು. ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಬೇಡ ಎಂದರು. ಎಲ್ಲವನ್ನೂ ಎದುರಿಸಿ ನಾನು ಹಾಡಿನಲ್ಲಿ ಕಾಣಿಸಿಕೊಂಡೆ. ನನ್ನ ಸಂಬಂಧವನ್ನು ಉಳಿಸಲು ಶೇ.100 ರಷ್ಟು ನಾನು ಪ್ರಯತ್ನ ಮಾಡಿದೆ ಆದರೆ ಅದು ಆಗಿಲ್ಲ. ನಾನೇನು ತಪ್ಪು ಮಾಡಿಲ್ಲ ಅಂದರೆ ನಾನ್ಯಾಕೆ ಮರೆಮಾಚಿ ಇರಬೇಕು ಎಂದು ನಟಿ ಹೇಳಿದ್ದಾರೆ.
ಈ ಹಿಂದೆಯೂ ಸಮಂತಾ ʼಊ ಅಂಟವಾʼ ಹಾಡು ಗಂಡನಿಂದ ದೂರವಾದ ಬಗ್ಗೆ ಕಾಫಿ ವಿತ್ ಕರಣ್ʼ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.