Dunki: ಕ್ರಿಸ್ಮಸ್ ಗೆ ʼಡಂಕಿʼ ರಿಲೀಸ್ ಪಕ್ಕಾ; ಹ್ಯಾಟ್ರಿಕ್ ಹಿಟ್ ಕೊಡ್ತಾರ ಶಾರುಖ್?
ನನ್ನ ಸಿನಿಮಾ ಬಿಡುಗಡೆಯ ವೇಳೆ ಹಬ್ಬವೇ ಇರುತ್ತದೆ..
Team Udayavani, Sep 16, 2023, 1:55 PM IST
ಮುಂಬಯಿ: ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ʼಜವಾನ್ʼ ಸಿನಿಮಾ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ವರ್ಲ್ಡ್ ವೈಡ್ 700 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ʼಪಠಾಣ್ʼ ಸಿನಿಮಾದ ಬಳಿಕ ಶಾರುಖ್ ಖಾನ್ ʼಜವಾನ್ʼ ಮೂಲಕ ಮತ್ತೊಮ್ಮೆ ಬಾಕ್ಸ್ ಆಫೀಸ್ ಕಿಂಗ್ ಆಗಿದ್ದಾರೆ. ಸಿನಿಮಾ ಬಿಗ್ ಹಿಟ್ ಆಗುವ ಮೂಲಕ ಕಾಲಿವುಡ್ ಸ್ಟಾರ್ ಡೈರೆಕ್ಟರ್ ಅಟ್ಲಿ ಕುಮಾರ್ ಬಾಲಿವುಡ್ ನಲ್ಲಿ ಮಿಂಚಿದ್ದಾರೆ.
ಇತ್ತೀಚೆಗೆ ಅಟ್ಲಿ ಶಾರುಖ್ ಅವರೊಂದಿಗೆ ಮತ್ತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ʼಜವಾನ್ʼ ಸಿನಿಮಾ ತಂಡ ಚಿತ್ರ ಯಶಸ್ಸಾದ ಖುಷಿಯಲ್ಲಿ ಸಕ್ಸಸ್ ಮೀಟ್ ಆಯೋಜಿಸಿ ಪ್ರೇಕ್ಷಕರಿಗೆ ಧನ್ಯವಾದವನ್ನು ಸಲ್ಲಿಸಿದೆ.
ಬ್ಯಾಕ್ ಟು ಬ್ಯಾಕ್ ಎರಡು ಬಿಗ್ ಹಿಟ್ ಗಳನ್ನು ನೀಡಿದ ಬಳಿಕ ಇದೀಗ ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರದತ್ತ ಗಮನ ಹರಿಸಿದ್ದಾರೆ. ಶಾರುಖ್ ಖಾನ್ ರಾಜ್ಕುಮಾರ್ ಹಿರಾನಿ ಅವರ ʼಡಂಕಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವುದು ಗೊತ್ತಿರುವ ವಿಚಾರ. ಈ ಸಿನಿಮಾದ ಬಗ್ಗೆ ಬಹು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.
ಸಿನಿಮಾ ಇದೇ ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಇದೀಗ ಸಿನಿಮಾದ ರಿಲೀಸ್ ಡೇಟ್ ನ್ನು ಶಾರುಖ್ ಖಾನ್ ಆಧಿಕೃತಗೊಳಿಸಿದ್ದಾರೆ. ಡಿಸೆಂಬರ್ 22 ರಂದು ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಇದೀಗ ಈ ದಿನಾಂಕವನ್ನು ಶಾರುಖ್ ಖಾನ್ ಅಧಿಕೃತಗೊಳಿಸಿದ್ದಾರೆ.
ಸಕ್ಸಸ್ ಮೀಟ್ ನಲ್ಲಿ ಮಾತನಾಡಿದ ಅವರು, “ನಾವು ಗಣರಾಜ್ಯೋತ್ಸವದ ಜನವರಿ 26 ರಂದು ಚಿತ್ರವನ್ನು ರಿಲೀಸ್ ಮಾಡಿದ್ದೇವೆ. (ಪಠಾಣ್ ಸಿನಿಮಾ) ಆ ಬಳಿಕ ಶ್ರೀಕೃಷ್ಣನ ಜನ್ಮಾಷ್ಟಮಿಯಂದು ʼಜವಾನ್ʼ ಸಿನಿಮಾವನ್ನು ಬಿಡುಗಡೆ ಮಾಡಿದ್ದೇವೆ. ಮುಂದೆ ಕ್ರಿಸ್ಮಸ್ ಹಬ್ಬಕ್ಕೆ “ಡಂಕಿ” ಸಿನಿಮಾವನ್ನು ತರಲಿದ್ದೇವೆ. ರಾಷ್ಟ್ರೀಯ ಏಕೀಕರಣವನ್ನು ಇಡುತ್ತೇನೆ. ಯಾವಾಗಲೂ ನನ್ನ ಸಿನಿಮಾ ಬಿಡುಗಡೆಯ ವೇಳೆ ಹಬ್ಬವೇ ಇರುತ್ತದೆ” ಎಂದು ಶಾರುಖ್ ಹೇಳಿದರು.
ʼಜವಾನ್ ʼ ಸಿನಿಮಾದ ಬಳಿಕ ಶಾರುಖ್ ಖಾನ್ ಅವರ ʼಡಂಕಿʼ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ತಾಪ್ಸಿ ಪನ್ನು ಅವರು ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರ ಜೊತೆ ಶಾರುಖ್ ʼಡಂಕಿʼ ಬಗ್ಗೆ ಮಾತನಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್ ಧ್ವನಿ; ಹೀರೋ ಮೇಲೆ ಆರೋಪ
Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್
Border 2: ಸನ್ನಿ ಡಿಯೋಲ್ ʼಬಾರ್ಡರ್-2ʼಗೆ ʼಫೌಜಿʼಯಾಗಿ ಬಂದ ಸುನಿಲ್ ಶೆಟ್ಟಿ ಪುತ್ರ
Bollywood Actor Govinda: ಬಾಲಿವುಡ್ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು
‘Emergency’ ದೃಶ್ಯ ಕಡಿತಕ್ಕೆ ಕಂಗನಾ ಸಮ್ಮತಿ: CBFC
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.