

Team Udayavani, Jul 3, 2024, 3:22 PM IST
ಮುಂಬಯಿ: ಶಾರುಖ್ ಖಾನ್ (Shah Rukh Khan) – ಅಟ್ಲಿ ಕುಮಾರ್ ಅವರ ʼಜವಾನ್ʼ (Jawan) ಸಿನಿಮಾ ಥಿಯೇಟರ್ ನಲ್ಲಿ ಮೋಡಿ ಮಾಡಿದ್ದು ಗೊತ್ತೇ ಇದೆ. ʼಪಠಾಣ್ʼ ,ʼಜವಾನ್ʼ ಹಾಗೂ ʼಡಂಕಿʼ ಶಾರುಖ್ ಅವರಿಗೆ ಕಂಬ್ಯಾಕ್ ಮಾಡಿಕೊಟ್ಟ ಸಿನಿಮಾಗಳೆಂದರೆ ತಪ್ಪಾಗದು.
2023ರ ಸೆ.7 ರಂದು ʼಜವಾನ್ʼ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಬಾಲಿವುಡ್ ನಲ್ಲಿ ಆ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ʼಜವಾನ್ʼ ಹೊರಹೊಮ್ಮಿತ್ತು. ಇದೀಗ ಮತ್ತೆ ಶಾರುಖ್ ಖಾನ್ ʼಜವಾನ್ʼ ಆಗಿ ಬಿಗ್ ಸ್ಕ್ರೀನ್ ನಲ್ಲಿ ಅಬ್ಬರಿಸಲಿದ್ದಾರೆ.
ಭಾರತದ ಸಿನಿಮಾಗಳಿಗೆ ವಿದೇಶದಲ್ಲೂ ಪ್ರೇಕ್ಷಕರಿದ್ದಾರೆ. ಜಪಾನ್ ನಲ್ಲಿ ಈ ಹಿಂದೆ ‘ಆರ್ ಆರ್ ಆರ್ʼ ಚಿತ್ರ ಜಪಾನ್ ನಲ್ಲಿ ರಿಲೀಸ್ ಆಗಿತ್ತು. ಇದೀಗ ಶಾರುಖ್ ಅವರ ʼಜವಾನ್ʼ ಚಿತ್ರ ಜಪಾನ್ ನಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ: SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್
ಈ ವರ್ಷದ ನವೆಂಬರ್ 29ರಂದು ʼಜವಾನ್ʼ ಜಪಾನ್ ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಜಪಾನ್ ನಲ್ಲಿ ಭಾರತೀಯ ಸಿನಿಮಾಗಳನ್ನು ವಿತರಣೆ ಮಾಡಲು ಖ್ಯಾತಿ ಆಗಿರುವ ʼಟ್ವಿನ್ʼ ಜಪಾನ್ ನಲ್ಲಿ ʼಜವಾನ್ʼ ಸಿನಿಮಾವನ್ನು ವಿತರಣೆ ಮಾಡಲಿದೆ.
ಇದೇ ಜು.5 ರಿಂದ ಅಂದರೆ ಸಿನಿಮಾ ರಿಲೀಸ್ ಆಗುವ ನಾಲ್ಕು ತಿಂಗಳ ಮೊದಲೇ ಅಡ್ವಾನ್ಸ್ ಬುಕಿಂಗ್ ಆರಂಭಗೊಳ್ಳಲಿದೆ. ಮುಂಗಡವಾಗಿ ಟಿಕೆಟ್ ಖರೀದಿಸುವವರು ʼಚಲೇಯʼ ಹಾಡಿನ ಶಾರುಖ್ ಖಾನ್ ಅವರ ಪೋಸ್ಟರ್ಗಳನ್ನು ಸ್ವೀಕರಿಸಲಿದ್ದಾರೆ.
300ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ʼಜವಾನ್ʼ ವರ್ಲ್ಡ್ ವೈಡ್ 1000 ಕೋಟಿ ರೂ.ಗಳಿಕೆ ಮಾಡಿತ್ತು.
ಚಿತ್ರದಲ್ಲಿ ಶಾರುಖ್ ಜೊತೆ ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ನಯನತಾರಾ, ಸುನಿಲ್ ಗ್ರೋವರ್, ರಿಧಿ ಡೋಗ್ರಾ, ಐಜಾಜ್ ಖಾನ್, ಲೆಹರ್ ಖಾನ್, ಆಲಿಯಾ ಖುರೇಷಿ, ಸಂಜೀತಾ ಭಟ್ಟಾಚಾರ್ಯ ಮುಂತಾದವರು ನಟಿಸಿದ್ದಾರೆ.
Bollywood Industry Hit & Highest Grosser of 2023 #Jawan to release in Japan on 29th November 2024. pic.twitter.com/LXXz2PVqZq
— Nishit Shaw (@NishitShawHere) July 3, 2024
Bollywood: ʼಛಾವಾʼ ಕ್ರೇಜ್.. ಸಂಭಾಜಿ ಮಹಾರಾಜನಂತೆ ಕುದುರೆ ಏರಿ ಥಿಯೇಟರ್ಗೆ ಬಂದ ವ್ಯಕ್ತಿ
Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Bollywood: ರೀ-ರಿಲೀಸ್ ಗಳಿಕೆಯಲ್ಲಿ ʼತುಂಬಾಡ್ʼ ಮೀರಿಸಿದ ʼಸನಮ್ ತೇರಿ ಕಸಮ್ʼ
Karan Johar : ರಾಜಮೌಳಿ ಸಿನಿಮಾದಲ್ಲಿ ಲಾಜಿಕ್ ಇರಲ್ಲ – ನಿರ್ಮಾಪಕ ಕರಣ್ ಜೋಹರ್
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.