![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 30, 2021, 4:09 PM IST
ಮುಂಬೈ: ನಾವು ಮಾತನಾಡಬಾರದು ನಮ್ಮ ಕೆಲಸ ಹಾಗೂ ಸಾಧನೆ ಮಾತಾಡಬೇಕು ಎಂಬ ಮಾತಿಗೆ ನಟ ಸೋನು ಸೂದ್ ಉತ್ತಮ ಉದಾಹರಣೆಯಾಗಿದ್ದಾರೆ.
ಬೆಳ್ಳಿ ಪರದೆಯ ಮೇಲೆ ಖಳನಾಯಕನಾಗಿದ್ದರೂ ರಿಯಲ್ ಲೈಫಿನಲ್ಲಿ ಈ ನಟ ರಿಯಲ್ ಹೀರೋ ಆಗಿದ್ದಾರೆ. ಕೋವಿಡ್ ಸೋಂಕಿನಿಂದ ಭಾರತ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಈ ನಟನ ನಿಜವಾದ ಕೆಲಸ ಶುರುವಾಯಿತು. ಬಡ-ಬಗ್ಗರಿಗೆ, ಕೂಲಿ ಕಾರ್ಮಿಕರಿಗೆ ನೆರವಾದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಕಾರ್ಯ ಈ ನಟನಿಗೆ ಹೊಸದೊಂದು ಇಮೇಜ್ ತಂದು ಕೊಟ್ಟಿತು. ಭಾರತ ದೇಶದ ಪ್ರತಿಯೊಂದು ಮೂಲೆಮೂಲೆಗೂ ಸೋನು ಸೂದ್ ಅವರ ಹೆಸರು ಪಸರಿಸುವಂತೆ ಮಾಡಿತು.
ಈಗ ಸೋನು ಅವರ ಸಾಧನೆ ಮಾತನಾಡುತ್ತಿದೆ ಎಂಬುದಕ್ಕೆ ಪ್ರಸಂಗವೊಂದು ಸಾಕ್ಷಿಯಾಗಿದೆ. ಅದು ಏನು ಅಂತಿರಾ ? ಹಾಗಾದರೆ ಮುಂದೆ ಓದಿ..
ಕೆಲ ವರ್ಷಗಳ ಹಿಂದೆ ಪಂಜಾಬಿನ ‘ಸ್ಟಾರ್ ಡಸ್ಟ್’ ಹೆಸರಿನ ಮ್ಯಾಗ್ಜಿನ್ ಕವರ್ ಪೇಜ್ ಫೋಟೊ ಶೂಟ್ ಗೆ ಸೋನು ಸೂದ್ ಅವರು ತಮ್ಮ ಭಾವಚಿತ್ರಗಳನ್ನು ಕಳುಹಿಸಿಕೊಟ್ಟಿದ್ದರು. ಅವುಗಳನ್ನು ಮ್ಯಾಗ್ ಜಿನ್ ರಿಜೆಕ್ಟ್ ಮಾಡಿತ್ತು. ಆದರೆ, ಇಂದು ಅದೇ ಮ್ಯಾಗ್ ಜಿನ್ ಸೋನು ಸೂದ್ ಅವರ ಫೋಟೊವನ್ನು ಮುಖಪುಟದಲ್ಲಿ ಪ್ರಕಟಿಸಿದೆ.
ಈ ಘಟನೆಯನ್ನು ಸ್ವತಃ ಸೋನು ಸೂದ್ ಅವರು ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಕವರ್ ಪೇಜಿನಲ್ಲಿ ತಮ್ಮ ಫೋಟೊ ಪ್ರಕಟಿಸಿದ್ದಕ್ಕೆ ಸ್ಟಾರ ಡಸ್ಟ್ ಮ್ಯಾಗ್ ಜಿನ್ ಗೆ ಧನ್ಯವಾದ ಹೇಳಿದ್ದಾರೆ.
There was a day when I had sent my pictures from Punjab for an audition of Stardust, but got rejected.
Today want to thank Stardust for this lovely cover.
Humbled ❣️?
@sumita11 @Stardust_Magna @vedishnaidu @ashok_dhamankar pic.twitter.com/lQj6CLgxg3— sonu sood (@SonuSood) May 30, 2021
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.