SuperStars; ನವನಿರ್ದೇಶಕರ ಕೈಯಲ್ಲಿ ಸೂಪರ್‌ಸ್ಟಾರ್: ಹಳೆ ಬೇರು ಹೊಸ ಚಿಗುರು


Team Udayavani, Aug 17, 2023, 4:45 PM IST

ನವನಿರ್ದೇಶಕರ ಕೈಯಲ್ಲಿ ಸೂಪರ್‌ಸ್ಟಾರ್: ಹಳೆ ಬೇರು ಹೊಸ ಚಿಗುರು

ಜನರೇಶನ್‌ ಬದಲಾಗುತ್ತಿದ್ದಂತೆ ಟ್ರೆಂಡ್‌ ಕೂಡಾ ಬದಲಾಗುತ್ತದೆ. ಬದಲಾದ ಟ್ರೆಂಡ್‌ ಅನ್ನು ಅಪ್ಪಿಕೊಂಡು, ಒಪ್ಪಿಕೊಂಡವನೇ ಜಾಣ. ಅದರಲ್ಲೂ ಸಿನಿಮಾ ರಂಗ ನಿಂತಿರೋದೇ ಟ್ರೆಂಡ್‌ ಮೇಲೆ ಎಂದರೆ ತಪ್ಪಲ್ಲ. ಒಂದೊಳ್ಳೆಯ ಕಂಟೆಂಟ್‌ ಅನ್ನು ಇವತ್ತಿನ ಟ್ರೆಂಡ್‌ಗೆ ತಕ್ಕಂತೆ ಕೊಟ್ಟು ಬಿಟ್ಟರೆ ಆ ಚಿತ್ರ ಅರ್ಧ ಗೆದ್ದಂತೆ. ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡು ಸದ್ಯ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ್ದಾರೆ ಮೂವರು ಸೂಪರ್‌ ಸ್ಟಾರ್‌ಗಳು. ಅವರೇ ರಜನಿಕಾಂತ್‌, ಕಮಲ್‌ ಹಾಸನ್‌ ಹಾಗೂ ಚಿರಂಜೀವಿ.

ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳ ಬಗ್ಗೆ ಮಾತನಾಡಲು ಹೊರಟರೆ ಇವರನ್ನು ಬಿಟ್ಟು ಮಾತು ಮುಂದೆ ಹೋಗುವುದೇ ಇಲ್ಲ. 1975ರಿಂದ ರಜನಿ ಕಾಂತ್‌, 1978ರಿಂದ ಚಿರಂಜೀವಿ ಹಾಗೂ 1973ರಿಂದ ಕಮಲ್‌ಹಾಸನ್‌ ತಮ್ಮ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿದ್ದಾರೆ. ಈ ಹಂತದಲ್ಲಿ ಸೂಪರ್‌ ಹಿಟ್‌ ಸಿನಿಮಾಗಳ ಜೊತೆಗೆ ಇನ್ನಿಲ್ಲದಂತೆ ಫ್ಲಾಫ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ, ಈ ನಟರ ಒಂದು ವೈಶಿಷ್ಟéವೆಂದರೆ ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗುತ್ತಾ, ಹೊಸ ನಿರ್ದೇಶಕರಿಗೆ ಪ್ರೋತ್ಸಾಹ ನೀಡುತ್ತಾ ಬಂದ ಪರಿಣಾಮ ಈಗ ಈ ಮೂವರು ದೊಡ್ಡ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.

ನೀವು ಸೂಕ್ಷ್ಮವಾಗಿ ಗಮನಿಸಿದರೆ ಇತ್ತೀಚಿನ ವರ್ಷಗಳಲ್ಲಿ ರಜನಿಕಾಂತ್‌ ಅವರಿಗೆ ಯಾವ ಸಿನಿಮಾವೂ ದೊಡ್ಡ ಮಟ್ಟದಲ್ಲಿ ಕೈ ಹಿಡಿಯಲಿಲ್ಲ. ಬಿಡುಗಡೆ ಪೂರ್ವದಲ್ಲಿದ್ದ ಅವರ ಸಿನಿಮಾಗಳ ಕ್ರೇಜ್‌, ಬಿಡುಗಡೆ ಬಳಿಕ ಮುಂದುವರೆಯಲೇ ಇಲ್ಲ. ಇದೇ ಮಾತು ಕಮಲ್‌ ಹಾಸನ್‌ ಹಾಗೂ ಚಿರಂಜೀವಿ ಅವರಿಗೂ ಅನ್ವಯವಾಗುತ್ತದೆ. ಆದರೆ, ಈಗ ಈ ಮೂವರು ಸೂಪರ್‌ಸ್ಟಾರ್‌ಗಳಿಗೂ ಒಂದೊಂದು ಯಶಸ್ಸು ಸಿಕ್ಕಿದೆ. ಈ ಯಶಸ್ಸನ್ನು ತಂದುಕೊಟ್ಟವರು ನವ ನಿರ್ದೇಶಕರು ಎಂಬುದು ವಿಶೇಷ.

ಹೌದು, ರಜನಿಕಾಂತ್‌ “ಜೈಲರ್‌’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಈ ಚಿತ್ರವನ್ನು ನಿರ್ದೇಶಿಸಿರುವ ನೆಲ್ಸನ್‌ಗೆ “ಜೈಲರ್‌’ ಐದನೇ ಚಿತ್ರ. ಸೂಪರ್‌ಸ್ಟಾರ್‌ ರಜನಿಕಾಂತ್‌ ಈ ನವನಿರ್ದೇಶಕನ ಮೇಲೆ ನಂಬಿಕೆ ಇಟ್ಟು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಪರಿಣಾಮ ಈಗ “ಜೈಲರ್‌’ ಸೂಪರ್‌ ಹಿಟ್‌ ಆಗಿ ಮುಂದುವರೆಯುತ್ತಿದೆ.

ಇನ್ನು ಮೆಗಾಸ್ಟಾರ್‌ ಚಿರಂಜೀವಿ ಅವರಿಗೆ ಈ ವರ್ಷಾರಂಭದಲ್ಲೇ ಗೆಲುವು ತಂದುಕೊಟ್ಟಿದ್ದು ಕೂಡಾ ನವನಿರ್ದೇಶಕ ಎಂಬುದು ಗಮನಾರ್ಹ. “ವಾಲ್ಟರ್‌ ವೀರಯ್ಯ’ ಸಿನಿಮಾ ನಿರ್ದೇಶಿಸಿರುವ ಬಾಬಿ (ಕೆ.ಎಸ್‌.ರವೀಂದ್ರ) ಅವರಿಗೆ “ವಾಲ್ಟರ್‌ ವೀರಯ್ಯ’ ಐದನೇ ಚಿತ್ರ. ಈ ಚಿತ್ರ ಭರ್ಜರಿ ಹಿಟ್‌ ಆಗುವ ಮೂಲಕ ಚಿರಂಜೀವಿ ಅವರ ಕೆರಿಯರ್‌ಗೆ ಬೂಸ್ಟ್‌ ನೀಡಿದ್ದು ಸುಳ್ಳಲ್ಲ. ಹೀಗೆ ಹಳೆ ಬೇರು ಹೊಸ ಚಿಗುರು ಚಿತ್ರರಂಗದಲ್ಲಿ ಫ‌ಲ ನೀಡುತ್ತಿರುವುದು ಸುಳ್ಳಲ್ಲ. ಗೆಲುವಿಗೆ ಬೇಕಾಗಿರುವುದು ಸ್ಟಾರ್‌ಗಿರಿಯಲ್ಲ, ಹೊಸತನದ ತುಡಿತ ಎಂಬುದು ಮತ್ತೆ ಸಾಬೀತಾಗುತ್ತಿದೆ.

ಕಮಲ್‌ ಕೈಹಿಡಿದ ವಿಕ್ರಮ್‌: ಕಮಲ್‌ ಹಾಸನ್‌ ಅವರ ವಿಚಾರಕ್ಕೆ ಬರುವುದಾದರೆ ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆಯಾದ “ವಿಕ್ರಮ್‌’ ಚಿತ್ರ ದೊಡ್ಡ ಯಶಸ್ಸು ತಂದುಕೊಟ್ಟಿತು. ಈ ಚಿತ್ರವನ್ನು ನಿರ್ದೇಶಿಸಿರುವ ಲೋಕೇಶ್‌ ಕನಕರಾಜ್‌ ಅವರಿಗೆ “ವಿಕ್ರಮ್‌’ ಆರನೇ ಸಿನಿಮಾ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಮಲ್‌ ಕೂಡಾ ಹಳೆ ಬೇರು ಹೊಸ ಚಿಗುರು ಎಂಬಂತೆ ನವನಿರ್ದೇಶಕನ ಕನಸಿಗೆ ಸಾಥ್‌ ಕೊಟ್ಟ ಪರಿಣಾಮ “ವಿಕ್ರಮ್‌’ ಅವರ ಕೆರಿಯರ್‌ನ ಸೂಪರ್‌ ಹಿಟ್‌ ಸಿನಿಮಾವಾಗಿ ನಿಂತಿದೆ.

ಟಾಪ್ ನ್ಯೂಸ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

Ajay Devgn lends his voice to ‘Chhaava’

Chhaava: ‘ಚಾವಾ’ಗೆ ಧ್ವನಿಯಾದ ಅಜಯ್‌ ದೇವಗನ್‌

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

Mamata-Kulakarni

Spiritual journey: ಕಿನ್ನರ್‌ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.