Samantha: ಚಿಕಿತ್ಸಾ ಖರ್ಚಿಗೆ 25 ಕೋಟಿ ರೂ. ಸಹಾಯ ಪಡೆದ ಸಮಂತಾ?; ಕೊನೆಗೂ ಮೌನ ಮುರಿದ ನಟಿ
Team Udayavani, Aug 5, 2023, 12:41 PM IST
ಹೈದರಾಬಾದ್: ಟಾಲಿವುಡ್ ಬೆಡಗಿ ನಟಿ ಸಮಂತಾ ಮಯೋಸಿಟೀಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತೇ ಇದೆ. ಸ್ವತಃ ನಟಿಯೇ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು.
ತನಗೆ ಕಾಯಿಲೆಯಿದ್ದರೂ ಬಣ್ಣದ ಲೋಕದಲ್ಲಿ ಸಮಂತಾ ನಿರಂತರವಾಗಿ ಕಾಣಿಸಿಕೊಂಡಿದ್ದಾರೆ. ಚಿಕಿತ್ಸೆಯ ಜೊತೆ ಜೊತೆಗೆ ತಮ್ಮ ಸಿನಿಮಾಗಳ ಕೆಲಸದಲ್ಲೂ ಅವರು ಸಕ್ರಿಯವಾಗಿ ತೂಡಗಿಸಿಕೊಂಡಿದ್ದಾರೆ.
8 ತಿಂಗಳಿನಲ್ಲಿ ನನ್ನ ಜೀವನ ಬದಲಾಗಿದೆ ಎಂದು ಸಿನಿಮಾವೊಂದರ ಪ್ರಚಾರದ ವೇಳೆ ನಟಿ ಸಮಂತಾ ಹೇಳಿಕೊಂಡಿದ್ದರು. ಆ ಮೂಲಕ ಅನಾರೋಗ್ಯದೊಂದಿಗಿನ ತನ್ನ ಹೋರಾಟದ ಬಗ್ಗೆ ಹೇಳಿಕೊಂಡಿದ್ದರು.
ಅನಾರೋಗ್ಯದ ವಿಚಾರಕ್ಕೆ ಹೋರಾಟ ನಡೆಸುತ್ತಲೇ ಅವರ ʼಯಶೋಧಾʼ ಹಾಗೂ ʼ ಶಾಕುಂತಲಂʼ ಚಿತ್ರ ತೆರೆ ಕಂಡಿದೆ.
ಈ ನಡುವೆ ಅವರು ಚೇತರಿಕೆಯ ಹಾದಿಯಲ್ಲಿರುವಾಗಲೇ ಅವರ ಬಗ್ಗೆ ಕೆಲ ವದಂತಿಗಳು ಹಬ್ಬಿವೆ. ಇತ್ತೀಚೆಗೆ ನಟಿ ಸಮಂತಾ ತನ್ನ ಚಿಕಿತ್ಸಾ ಖರ್ಚಿಗೆ ಆರ್ಥಿಕ ಸಹಾಯವಾಗಿ 25 ಕೋಟಿ ರೂಪಾಯಿಯ ಸಹಾಯವನ್ನು ಇತರರಿಂದ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿತ್ತು. ಇಂಟರ್ ನೆಟ್ ಸೇರಿದಂತೆ ಕೆಲ ಸುದ್ದಿ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿತ್ತು.
ಇದೀಗ ನಟಿ ಸಮಂತಾ ಈ ಬಗ್ಗೆ ಮೌನ ಮುರಿದಿದ್ದಾರೆ. ಸುಳ್ಳು ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಗರಂ ಆಗಿದ್ದಾರೆ.
“ಮಯೋಸಿಟಿಸ್ ಚಿಕಿತ್ಸೆಗೆ 25 ಕೋಟಿ ರೂ. ಖರ್ಚು? ಯಾರೋ ಕೆಟ್ಟದಾಗಿ ಡೀಲ್ ಮಾಡಿಕೊಂಡಿದ್ದಾರೆ. ಇದರ ಚಿಕ್ಕ ಖರ್ಚನ್ನು ನಾನೇ ಮಾಡುತ್ತಿದ್ದೇನೆ ಎನ್ನುವುದು ನನಗೆ ಖುಷಿಯಿದೆ. ನಾನು ವೃತ್ತಿ ಜೀವನದಲ್ಲಿ ಮಾಡಿದ ಎಲ್ಲಾ ಕೆಲಸಗಳಿಗೆ ನಾನು ಮಾರ್ಬಲ್ಸ್ ಗಳಿಂದ ಪಾವತಿಸಿಲ್ಲ. ನನ್ನನು ನಾನು ಆರಾಮವಾಗಿ ನೋಡಿಕೊಳ್ಳುಬಹುದು. ಮಯೋಸಿಟಿಸ್ ನಿಂದ ಸಾವಿರಾರು ಮಂದಿ ಬಳಲುತ್ತಿದ್ದಾರೆ. ಚಿಕಿತ್ಸೆ ಸಂಬಂಧ ನೀಡುವ ಮಾಹಿತಿಯೊಂದಿಗೆ ನಾವು ಜವಬ್ದಾರಿಯುತವಾಗಿ ಇರಬೇಕು” ಎಂದು ನಟಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಸಮಂತಾ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿರುವ ʼಖುಷಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಸಿನಿಮಾ ಸೆ. 1 ರಂದು ತೆರೆಗೆ ಬರಲಿದೆ. ಇದಾದ ಬಳಿಕ ರಾಜ್ ಮತ್ತು ಡಿಕೆ ಅವರ ‘ಸಿಟಾಡೆಲ್: ಇಂಡಿಯಾ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
Jawan Movie: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ಸೂಪರ್ ಹಿಟ್ ʼಜವಾನ್ʼ
Actor James Hollcroft: ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನಟ ಶವವಾಗಿ ಪತ್ತೆ
Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.