Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
Team Udayavani, Sep 14, 2024, 6:32 PM IST
ಮುಂಬಯಿ: 2018ರಲ್ಲಿ ಬಂದಿದ್ದ ಹಾರಾರ್ ‘ತುಂಬಾಡ್ʼ (Tumbbad) ಸಿನಿಮಾ ಸೆ.13 ರಂದು ರೀ- ರಿಲೀಸ್ ಆಗಿದೆ. ಸಿನಿಮಾದ ಟಿಕೆಟ್ ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ.
ಯಾವ ದೊಡ್ಡ ಕಲಾವಿದರು, ಸ್ಟಾರ್ ಕಾಸ್ಟ್ ಇಲ್ಲದೆಯೇ ರಿಲೀಸ್ ಆದ ‘ತುಂಬಾಡ್ʼ ತನ್ನ ಕಥೆ ಹಾಗೂ ಅಮೋಘ ದೃಶ್ಯಾವಳಿಯಿಂದ ಪ್ರೇಕ್ಷಕರ ಮನಗೆದ್ದಿತ್ತು. ನಿಧಾನವಾಗಿ ಥಿಯೇಟರ್ ನತ್ತ ಜನ ಬರುವಾಗಲೇ ಸಿನಿಮಾ ಮಾಯಾವಾಗಿತ್ತು. ಆದರೆ ಸಿನಿಮಾದ ಬಗ್ಗೆ ಅನೇಕರು ಪಾಸಿಟಿವ್ ಆಗಿ ಮಾತನಾಡಿದ್ದರು.
ಬಂಗಾರದ ನಾಣ್ಯಕ್ಕಾಗಿ ಜೀವ ಪಣಕ್ಕಿಟ್ಟು ಸಾಹಸಕ್ಕೆ ಹೊರಡುವ ಹಾರಾರ್ – ಥ್ರಿಲ್ಲರ್ ‘ತುಂಬಾಡ್ʼ ಸಿನಿಮಾದ ತಯಾರಿಗೆ 6 ವರ್ಷ ಬೇಕಾಗಿತ್ತು. ಮಹಾರಾಷ್ಟ್ರದ ಹೊರವಲಯದಲ್ಲಿ ಚಿತ್ರೀಕರಣಗೊಂಡ ಸಿನಿಮಾ ನೈಜ ಘಟನೆಯಂತೆ ಮೂಡಿಬಂದಿದೆ.
ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಾಕಿದ ಹಣವನ್ನೂ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಆ ವರ್ಷ ಆಸ್ಕರ್ ಗಾಗಿ ಭಾರತದಿಂದ ‘ತುಂಬಾಡ್ʼ ಸಿನಿಮಾವನ್ನು ಕಳುಹಿಸಬೇಕೆನ್ನುವ ಕೂಗು ಕೇಳಿ ಬಂದಿತ್ತು.
ತನ್ನ ಕಥೆ ಹಾಗೂ ಭೀತಿ ಹುಟ್ಟಿಸುವ ದೃಶ್ಯಗಳು ಪ್ರೇಕ್ಷಕರನ್ನು ಥಿಯೇಟರ್ನಲ್ಲಿ ನೈಜ ಅನುಭವವನ್ನು ನೀಡಿತು. ಬಹು ಜನರ ಅಪೇಕ್ಷೆಯ ಮೇರೆಗೆ ಸಿನಿಮಾವನ್ನು ಸೆ.13(ಶುಕ್ರವಾರ) ರೀ- ರಿಲೀಸ್ ಮಾಡಲಾಗಿದೆ. ಮೊದಲ ದಿನವೇ ಸಿನಿಮಾ 2 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.
ಈ ಬೆನ್ನಲ್ಲೇ ಸಿನಿಮಾದ ಸೀಕ್ವೆಲ್ ಅನೌನ್ಸ್ ಮಾಡಲಾಗಿದೆ. ಶೋಹುಂ ಶಾ(Sohum Shah) ನಟಿಸಿ ನಿರ್ಮಿಸಿದ್ದ ‘ತುಂಬಾಡ್ʼ -2 (Tumbbad 2)ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.
View this post on Instagram
ರಾಹಿ ಅನಿಲ್ ಬರವೆ ಸಿನಿಮಾವನ್ನು ನಿರ್ದೇಶಕ ಮಾಡಿದ್ದರು. ಎರಡನೇ ಭಾಗವನ್ನು ಅವರೇ ನಿರ್ದೇಶನ ಮಾಡಲಿದ್ದಾರೆ.
ವಿನಾಯಕ್ ಅವರ ಪುತ್ರ ಪಾಂಡುರಂಗ ರಾವ್ ಅಳುತ್ತಿರುವ ದೃಶ್ಯವನ್ನು ತೋರಿಸಲಾಗಿದ್ದು, ಹಿನ್ನೆಲೆ ಧ್ವನಿಯಲ್ಲಿ ಪ್ರಳಯ್ ಆಯೇಗಾ.. ಎಂದು ಸೀಕ್ವೆಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಶೀಘ್ರದಲ್ಲಿ ಸಿನಿಮಾ ಬರಲಿದೆ ಎಂದು ಬರೆಯಲಾಗಿದೆ.
2021ರಲ್ಲೇ ಶೋಹುಂ ಶಾ ‘ತುಂಬಾಡ್ʼ -2 ಬಗ್ಗೆ ಮಾತನಾಡಿದ್ದರು. ಸೀಕ್ವೆಲ್ ಅಥವಾ ಪ್ರೀಕ್ವೆಲ್ ಬರುವುದು ಪಕ್ಕಾ ಎಂದು ಹೇಳಿದ್ದರು.
ಶೋಹುಂ ಶಾ ,ಜ್ಯೋತಿ ಮಲ್ಶೆ,ಧುಂಡಿರಾಜ್ ಪ್ರಭಾಕರ್,ರೋಂಜಿನಿ ಚಕ್ರವರ್ತಿ, ರುದ್ರ ಸೋನಿ ‘ತುಂಬಾಡ್ʼನಲ್ಲಿ ನಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
National Cinema Day: ಈ ದಿನ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Jawan Movie: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ಸೂಪರ್ ಹಿಟ್ ʼಜವಾನ್ʼ
Actor James Hollcroft: ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನಟ ಶವವಾಗಿ ಪತ್ತೆ
Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Rummy Aata Movie: ಸೆ.20ರಿಂದ ರಮ್ಮಿ ಆಟ ಶುರು
Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್ ಟಿಆರ್ ಸಿನಿಮಾ ವೀಕ್ಷಿಸಿದ ರೋಗಿ.!
Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್
Pavagada: ಆಂಬ್ಯುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು
India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.