![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 26, 2023, 5:52 PM IST
ಮುಂಬಯಿ: ತನ್ನ ಚಿತ್ರ – ವಿಚಿತ್ರ ಡ್ರೆಸ್ಸಿಂಗ್ ಸ್ಟೈಲ್ ಗಳಿಂದಲೇ ಸುದ್ದಿಯಾಗುವ ಇಂಟರ್ ನೆಟ್ ತಾರೆ ಉರ್ಫಿ ಜಾವೇದ್ ಮಾನವೀಯ ಗುಣಗಳಿಂದ ಗಮನ ಸೆಳೆದಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಉರ್ಫಿ ಜಾವೇದ್ ಫ್ಯಾಷನ್ ಸಂಬಂಧಿತ ವಿಚಾರಗಳಿಂದ ಟ್ರೆಂಡ್ ಅಲ್ಲಿರುತ್ತಾರೆ. ತನ್ನ ತುಂಡುಗೆಯ ಬಟ್ಟೆಗಳಿಂದಲೇ ಗಮನ ಸೆಳೆಯುವ ಉರ್ಫಿ ಜಾವೇದ್ ಎಷ್ಟೋ ಸಲಿ ಬಟ್ಟೆಗಳ ವಿಚಾರದಿಂದಲೇ ಟೀಕೆಗೆ ಒಳಗಾಗಿದ್ದಾರೆ. ಆದರೆ ಅದ್ಯಾವುದಕ್ಕೂ ಹಿಂಜರಿಯದೆ ಉರ್ಫಿ ಫ್ಯಾಷನ್ ಲೋಕದಲ್ಲಿ ತನ್ನ ಛಾಪನ್ನು ಮುಂದುವರಸಿದ್ದಾರೆ.
ಇಷ್ಟು ದಿನ ಇಂಟರ್ ನೆಟ್ ನಲ್ಲಿ ತನ್ನ ಹಸಿಬಿಸಿ ಫೋಟೋಗಳಿಂದ ಸುದ್ದಿಯಾಗುತ್ತಿದ್ದ ಉರ್ಫಿ ಜಾವೇದ್ ಇದೀಗ ಮುಂಬಯಿಯ ರೆಸ್ಟೋರೆಂಟ್ ನಲ್ಲಿ ವೇಟರ್ ಆಗುವ ಮೂಲಕ ಗಮನ ಸೆಳೆದಿದ್ದಾರೆ. ಉರ್ಫಿ ರೆಸ್ಟೋರೆಂಟ್ ನಲ್ಲಿ ವೇಟರ್ ಆಗಿ ಗ್ರಾಹಕರ ಆರ್ಡರ್ ತೆಗೆದುಕೊಳ್ಳುವಾಗಿನ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
“ಕನಸು ನನಸಾಯಿತು! ಯಾವುದೇ ಕೆಲಸ ದೊಡ್ಡದು ಅಥವಾ ಚಿಕ್ಕದಾಗಿದೆನ್ನುವುದು ಅವರವರ ದೃಷ್ಟಿಕೋನಕ್ಕೆ ಸಂಬಂಧಿಸಿದೆ. ಕೆಲ ಗಂಟೆಗಳನ್ನು ವೇಟರ್ ಆಗಿ ಕಳೆದ. ಇದರಿಂದ ಬರುವ ಹಣವನ್ನು ಕ್ಯಾನ್ಸರ್ ರೋಗಿಗಳ ಸಹಾಯ ಸಂಘಕ್ಕೆ ನೀಡಲು ಬಯಸಿದ್ದೇನೆ. ಇಂತಹ ಕಾರ್ಯಗಳನ್ನು ಮುಂದುವರಿಸಲು ಬದ್ಧವಾಗಿದ್ದೇನೆ” ಎಂದು ಉರ್ಫಿ ಬರೆದುಕೊಂಡಿದ್ದಾರೆ.
ಮಾಡೆಲ್ ಬಿಟ್ಟು ವೇಟರ್ ಆಗಿದ್ದೇಕೆ ಉರ್ಫಿ? : ಕ್ಯಾನ್ಸರ್ ರೋಗಿಗಳ ಸಹಾಯ ಸಂಘಕ್ಕೆ ಧನ ಸಹಾಯವನ್ನು ನೀಡುವ ನಿಟ್ಟಿನಲ್ಲಿ ಉರ್ಫಿ ವೇಟರ್ ಆಗಿ ರೆಸ್ಟೋರೆಂಟ್ ನಲ್ಲಿ ವೇಟರ್ ಆಗಿ ಕೆಲ ಗಂಟೆಗಳನ್ನು ಕಳೆದಿದ್ದಾರೆ. ಸಾಮಾನ್ಯ ವೇಟರ್ ನಂತೆ ಅವರು, ಗ್ರಾಹಕರ ಆರ್ಡರ್ ತೆಗೆದುಕೊಂಡಿದ್ದಾರೆ. ಇದರಿಂದ ಬರುವ ಹಣ ಹಾಗೂ ಟಿಪ್ಸ್ ಗಳನ್ನು ಕ್ಯಾನ್ಸರ್ ರೋಗಿಗಳ ಸಹಾಯಕ್ಕೆ ನೀಡಲಿದ್ದಾರೆ.
ಅವರ ಈ ವಿಡಿಯೋಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಮಾನವೀಯ ಗುಣದ ಉರ್ಫಿಯನ್ನು ಶ್ಲಾಘಿಸಿದ್ದಾರೆ.
View this post on Instagram
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.