Divorce; 8 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್
ಅಂತರ್ ಧರ್ಮೀಯ ವಿವಾಹವಾಗಿದ್ದ ಖ್ಯಾತ ನಟಿಯ ದಾಂಪತ್ಯದಲ್ಲಿ ಬಿರುಕು..
Team Udayavani, Sep 25, 2024, 9:45 AM IST
ಮುಂಬಯಿ: ಕೆಲ ಕಾಲದಿಂದ ಸಿನಿ ರಂಗದಿಂದ ದೂರವಾಗಿರುವ ಬಾಲಿವುಡ್ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್(Urmila Matondkar )ಮದುವೆಯಾದ 8 ವರ್ಷಗಳ ಬಳಿಕ ಪತಿ ಮೊಹ್ಸಿನ್ ಅಖ್ತರ್ ಮಿರ್ ಅವರಿಂದ ವಿಚ್ಛೇದನಕ್ಕೆ(Divorce) ಅರ್ಜಿ ಸಲ್ಲಿಸಿರುವ ಸುದ್ದಿ ಹೊರ ಬಿದ್ದಿದೆ.
ಅಂತರ್ ಧರ್ಮೀಯ ವಿವಾಹವಾಗಿದ್ದ ನಟಿಯ ವೈಯಕ್ತಿಕ ಜೀವನದ ಸುದ್ದಿ ಮುಖ್ಯಾಂಶವಾಗಿ ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ.
ರಂಗೀಲಾ, ಜುದಾಯಿ ಮತ್ತು ದೀವಾನೆ ಮುಂತಾದ ಹಿಟ್ ಚಿತ್ರಗಳ ಮೂಲಕ ಜನ ಮನ ಗೆದ್ದಿದ್ದ 50 ರ ಹರೆಯದ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಮೊಹ್ಸಿನ್ ಅವರೊಂದಿಗಿನ ಜೀವನದಿಂದ ದೂರವಾಗಲು ನಿರ್ಧರಿಸಿದ್ದಾರೆ. ಈಗಾಗಲೇ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಪ್ರತ್ಯೇಕತೆಯ ಹಿಂದಿನ ಕಾರಣ ಇನ್ನೂ ತಿಳಿದಿಲ್ಲವಾದರೂ, ವಿಚ್ಛೇದನವು ”ಪರಸ್ಪರ ಒಪ್ಪಿಗೆಯ ಮೇಲೆ ನಡೆಯುತ್ತಿಲ್ಲ” ಎಂದು ವರದಿಯಾಗಿದೆ.
ತನಗಿಂತ 10 ವರ್ಷ ಕಿರಿಯ ಕಾಶ್ಮೀರ ಮೂಲದ ನಟ ಮೊಹ್ಸಿನ್ ಅವರೊಂದಿಗೆ 2016 ಮಾರ್ಚ್ 3 ರಂದು ಊರ್ಮಿಳಾ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು.
ಮನೀಶ್ ಮಲ್ಹೋತ್ರಾ ಅವರ ಸೊಸೆಯ ವಿವಾಹ ಸಮಾರಂಭದಲ್ಲಿ ಮೊಹ್ಸಿನ್ ಮತ್ತು ಊರ್ಮಿಳಾ ಆತ್ಮೀಯವಾಗಿದ್ದರು. ಕೇವಲ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸರಳ ಆಚರಣೆಯಲ್ಲಿ ವಿವಾಹವಾಗಿದ್ದರು. ಮದುವೆಯು ಬಳಿಕ ಊರ್ಮಿಳಾ ಇಸ್ಲಾಂಗೆ ಮತಾಂತರ ಗೊಂಡಿದ್ದಾರೆ ಎಂದೂ ಸುದ್ದಿಯಾಗಿದ್ದರು. ಆದರೆ ಊಹಾಪೋಹಗಳನ್ನು ನಟಿ ತಳ್ಳಿ ಹಾಕಿದ್ದರು. ”ಇದೆಲ್ಲ ರಾಜಕೀಯ, ನಾನು ನನ್ನ ಹಿಂದೂ ಎಂಬ ಗುರುತನ್ನು ಹೆಮ್ಮೆ ಪಡುತ್ತೇನೆ’ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Samarjit Lankesh: ʼಗೌರಿʼ ಬಳಿಕ ಇಂದ್ರಜಿತ್ ಪುತ್ರನಿಗೆ ಬಾಲಿವುಡ್ನಿಂದ ಬಿಗ್ ಆಫರ್
Kiran Rao ಚಿತ್ರ ಆಸ್ಕರ್ ಗೆ ಪ್ರವೇಶ: ಮಾಜಿ ಪತಿ ಆಮಿರ್ ಖಾನ್ ಹರ್ಷ
Oscars: 97ನೇ ಆಸ್ಕರ್ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’
Bollywood: ಪಾಕ್ ನಟ ಫವಾದ್ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್ ಕಂಬ್ಯಾಕ್
Paris; ಸಂಗೀತ ಕಾರ್ಯಕ್ರಮದಲ್ಲಿ ಭಾರತೀಯ ಗಾಯಕನ ಮೇಲೆ ಮೊಬೈಲ್ ಎಸೆತ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Crime: ಪತ್ನಿಯ ಶೀಲ ಶಂಕಿಸಿ 5 ವರ್ಷದ ಪುತ್ರಿಯ ಕೊಂದ ತಂದೆ ಬಂಧನ
Bengaluru: ಬಾಲಕ ಸಾವು; ನಾಲ್ವರು ಎಂಜಿನಿಯರ್ ಅಮಾನತು
Siddaramaiah ವಿರುದ್ಧ ಹೈ ಕೋರ್ಟ್ ತೀರ್ಪು: ಕಪಿಲ್ ಸಿಬಲ್ ಪ್ರತಿಕ್ರಿಯೆ
Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ
Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.