Ektaa R Kapoor; ಮಹಿಳೆಯರ ಸುರಕ್ಷತೆ ಕೇವಲ ಸಿನಿಮಾ ರಂಗದ ಸಮಸ್ಯೆಯಲ್ಲ
Team Udayavani, Sep 4, 2024, 9:07 AM IST
ಮುಂಬಯಿ: ಮಹಿಳೆಯರ ಸುರಕ್ಷತೆ ಕೇವಲ ಸಿನಿ ರಂಗದ ಸಮಸ್ಯೆಯಲ್ಲ. ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದು ಖ್ಯಾತ ಚಿತ್ರ ನಿರ್ಮಾಪಕಿ ಏಕ್ತಾ ಆರ್ ಕಪೂರ್ ಹೇಳಿದ್ದಾರೆ.
ಮುಂಬರುವ ಚಿತ್ರ ‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ನ(The Buckingham Murders) ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಏಕ್ತಾ ಆರ್ ಕಪೂರ್ “ಮಹಿಳೆಯರು ಮತ್ತು ಅವರ ಸುರಕ್ಷತೆ ಕೇವಲ ಉದ್ಯಮದ ಸಮಸ್ಯೆಯಲ್ಲ. ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ’ಎಂದರು.
#WATCH | At the trailer launch event of her upcoming movie ‘The Buckingham Murders, Producer Ektaa R Kapoor says, “Women and their safety is not just an industry issue. We take this very seriously. Like I said, a lot of women have to now lead so that a lot of other women can join… pic.twitter.com/eOVLOADdeD
— ANI (@ANI) September 4, 2024
ಬಹಳಷ್ಟು ಮಹಿಳೆಯರು ಈಗ ರಂಗವನ್ನು ಮುನ್ನಡೆಸಬೇಕಾಗಿದೆ ಇದರಿಂದ ಬಹಳಷ್ಟು ಇತರ ಮಹಿಳೆಯರು ತಂಡವನ್ನು ಸೇರಬಹುದು. ಕಥೆಯನ್ನು ಹೇಳುವ ವಿಚಾರದಲ್ಲೂ ಸಹ ನಾವು ರಂಗವನ್ನು ಬದಲಾಯಿಸಬೇಕಾಗಿದೆ. ಪುರುಷರಿಗೆ ಸರಿಗಟ್ಟಲು ನಮಗೆ ಬಹಳಷ್ಟು ಸ್ಥಳಗಳಲ್ಲಿ ಮಹಿಳೆಯರು ಬೇಕು. ಅದಕ್ಕಾಗಿ ಮಹಿಳೆಯರೂ ಮುಂದಾಗಬೇಕು” ಎಂದರು.
”ಮಹಿಳಾ ಅಧಿಕಾರಿ ಭೇದಿಸಿದ ಅಪರಾಧ ಕಥೆಯನ್ನು ಹೇಳುವುದು ಕೆಲವು ರೀತಿಯ ಸುರಕ್ಷತೆಯನ್ನು ಸೃಷ್ಟಿಸುವ ಒಂದು ಹೆಜ್ಜೆಯಾಗಿದೆ” ಎಂದು ಹೇಳಿದರು.
‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ ಕ್ರೈಮ್ ಥ್ರಿಲ್ಲರ್ ಚಲನಚಿತ್ರವನ್ನು ಹನ್ಸಲ್ ಮೆಹ್ತಾ ನಿರ್ದೇಶಿಸಿದ್ದಾರೆ. ಕರೀನಾ ಕಪೂರ್ ಖಾನ್, ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಕರೀನಾ ಬ್ರಿಟಿಷ್-ಭಾರತೀಯ ಪತ್ತೇದಾರಿಯಾಗಿ ನಟಿಸಿದ್ದಾರೆ. ಬಕಿಂಗ್ಹ್ಯಾಮ್ಶೈರ್ನಲ್ಲಿ ಕೊಲೆಯಾದ ಮಗುವಿನ ಪ್ರಕರಣದ ಕುರಿತಾಗಿನ ಕಥಾ ಹಂದರ ಇದಾಗಿದೆ ಎಂದು ತಿಳಿದುಬಂದಿದೆ.
2023, ಅಕ್ಟೋಬರ್ 14 ರಂದು 67 ನೇ BFI ಲಂಡನ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನವನ್ನು ಕಂಡಿತ್ತು. ಇದೆ ಸೆಪ್ಟೆಂಬರ್13 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ವಿವಾಹ
National Cinema Day: ಈ ದಿನ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
Jawan Movie: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ಸೂಪರ್ ಹಿಟ್ ʼಜವಾನ್ʼ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.