Kollywood: ತ್ರಿಶಾ ಕುರಿತು ಅಸಭ್ಯ ಹೇಳಿಕೆ; ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದ ಮನ್ಸೂರ್
Team Udayavani, Nov 21, 2023, 3:22 PM IST
ಚೆನ್ನೈ: ನಟಿ ತ್ರಿಶಾ ಕುರಿತು ಅಸಭ್ಯವಾಗಿ ಹೇಳಿಕೆ ನೀಡಿರುವ ಕಾಲಿವುಡ್ ನಟ ಮನ್ಸೂರ್ ಅಲಿ ಖಾನ್ ಅವರ ಮೇಲೆ ನಾಡಿಗರ್ ಸಂಗಮ್ (ದಕ್ಷಿಣ ಭಾರತೀಯ ಕಲಾವಿದರ ಸಂಘ ) ತಾತ್ಕಾಲಿಕವಾಗಿ ನಿಷೇಧ ಹೇರಿದೆ.
ಮನ್ಸೂರ್ ಹೇಳಿದ್ದೇನು?: “ಲಿಯೋ ಸಿನಿಮಾದಲ್ಲಿ ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಸಿನಿಮಾದಲ್ಲಿ ಅವರೊಂದಿಗೆ ಬೆಡ್ ರೂಮ್ ಸೀನ್ ಇರುತ್ತದೆ ಅನ್ಕೊಂಡಿದ್ದೆ. ಅವಳನ್ನು ಎತ್ತಿಕೊಂಡು ಬೆಡ್ ರೂಮ್ ಗೆ ಹೋಗುವ ದೃಶ್ಯವಿದೆ ಅಂದುಕೊಂಡಿದ್ದೆ. ಈ ರೀತಿ ನಾನು ಈ ಹಿಂದಿನ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ಮಾಡಿದ್ದೇನೆ. ನಾನು ತುಂಬಾ ರೇಪ್ ಸೀನ್ ಗಳನ್ನು ಮಾಡಿದ್ದೇನೆ. ಇದೇನು ನನಗೆ ಹೊಸತಲ್ಲ. ಆದರೆ ಇವರು(ಚಿತ್ರತಂಡ) ನನಗೆ ಕಾಶ್ಮೀರದಲ್ಲಿ ಚಿತ್ರೀಕರಣವಾಗುವ ವೇಳೆ ಸೆಟ್ ನಲ್ಲಿ ತ್ರಿಶಾಳನ್ನು ತೋರಿಸಲೇ ಇಲ್ಲ” ಎಂದಿದ್ದರು.
ಈ ಹೇಳಿಕೆಗೆ ಹಿರಿಯ – ಕಿರಿಯ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅವರ ಹೇಳಿಕೆಯಿಂದಾಗಿ ಅವರನ್ನು ಸಿನಿಮಾದಿಂದ ತಾತ್ಕಾಲಿಕವಾಗಿ ನಾಡಿಗರ್ ಸಂಗಮ್ (ದಕ್ಷಿಣ ಭಾರತೀಯ ಕಲಾವಿದರ ಸಂಘ) ನಿಷೇಧಿಸಿದೆ.
ಇದಾದ ಬಳಿಕ ಪ್ರತಿಕಾಗೋಷ್ಠಿ ಕರೆದ ನಟ ಮನ್ಸೂರ್ ಆಲಿ ಖಾನ್ ತಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.
“ನನ್ನ ಮೇಲೆ ನಿಷೇಧ ಹೇರಿ ನಾಡಿಗರ್ ಸಂಗಮ್ ತಪ್ಪು ಮಾಡಿದೆ. ಈ ರೀತಿಯ ಸಮಸ್ಯೆ ಸಂಭವಿಸಿದಾಗ, ಅವರು ನನ್ನ ವಿವರಣೆಯನ್ನು ಸಹ ಕೇಳಲಿಲ್ಲ. ಅವರು ನನಗೆ ಕರೆ ಮಾಡಬಹುದಿತ್ತು ಅಥವಾ ವಿವರಣೆ ಕೇಳಲು ನೋಟಿಸ್ ನೀಡಬಹುದಿತ್ತು. ವಿಚಾರಣೆ ಮಾಡಬೇಕಿತ್ತು ಆದರೆ ಹಾಗೆ ಮಾಡದೆ, ಈ ರೀತಿ ನೇರವಾಗಿ ತಾತ್ಕಾಲಿಕವಾಗಿ ನಿಷೇಧ ಹೇರಿದ್ದಾರೆ” ಎಂದಿದ್ದಾರೆ.
“ನನ್ನ ಮೇಲಿರುವ ನಿಷೇಧವನ್ನು ಹಿಂಪಡೆಯಲು ನಾನು ನಾಲ್ಕು ಗಂಟೆಯ ಕಾಲಾವಕಾಶವನ್ನು ನೀಡುತ್ತೇನೆ. ನಾನು ಕ್ಷಮೆ ಕೇಳಿದರೆ ಮಾತ್ರ ನಿಷೇಧ ಹಿಂದಕ್ಕೆ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ನಾನು ಕ್ಷಮೆ ಕೇಳುವವರಂತೆ ಕಾಣುತ್ತಿದ್ದೇನೆಯೇ?” ಎಂದು ಪ್ರಶ್ನಿಸಿದ್ದಾರೆ.
“ವಧುವರರ ಚಿತ್ರಗಳಂತೆ ಕಾಣುವ ನಮ್ಮಿಬ್ಬರ ಫೋಟೋವನ್ನು ಅಕ್ಕಪಕ್ಕ ಹಾಕಿ ಮಾಧ್ಯಮದವರು ಪ್ರಕಟಿಸಿದ್ದಾರೆ. ನೀವೆಲ್ಲರೂ ನನ್ನ ಉತ್ತಮ ಫೋಟೋವನ್ನು ಬಳಸಬಹುದಲ್ಲವೇ? ಕೆಲವು ಚಿತ್ರಗಳಲ್ಲಿ, ನಾನು ಚೆನ್ನಾಗಿ ಕಾಣುತ್ತೇನೆ” ಎಂದಿದ್ದಾರೆ.
ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, “ಸಿನಿಮಾದಲ್ಲಿ ಅತ್ಯಾಚಾರದ ದೃಶ್ಯ ಎಂದರೆ ಏನು? ನಿಜವಾಗಿಯೂ ಅತ್ಯಾಚಾರ ಮಾಡುವುದೇ?ಸಿನಿಮಾದಲ್ಲಿ ಕೊಲೆ ಎಂದರೆ ಏನು? ನಿಜವಾಗಿಯೂ ಕೊಲೆ ಮಾಡುವುದೇ?ನಿಮಗೆ ಸ್ವಲ್ಪ ಬುದ್ದಿ ಇರಬೇಕಲ್ಲವೇ? ನಾನು ಏನನ್ನೂ ತಪ್ಪಾಗಿ ಹೇಳಿಲ್ಲ. ನಾನು ಕ್ಷಮೆ ಕೇಳುವುದಿಲ್ಲ.” ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಪಾಕ್ ನಟ ಫವಾದ್ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್ ಕಂಬ್ಯಾಕ್
Paris; ಸಂಗೀತ ಕಾರ್ಯಕ್ರಮದಲ್ಲಿ ಭಾರತೀಯ ಗಾಯಕನ ಮೇಲೆ ಮೊಬೈಲ್ ಎಸೆತ!
Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ
Japan ಆ್ಯನಿಮೇಟೆಡ್ ರಾಮಾಯಣ ಅ.18ಕ್ಕೆ ಮರು ಬಿಡುಗಡೆ
Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vishwa Hindu Parishad: ದೇಗುಲಗಳಲ್ಲಿ ಮಾರ್ಗದರ್ಶನ ಮಂಡಳಿ ರಚನೆಯಾಗಲಿ: ಭಂಡಾರಕೇರಿ ಶ್ರೀ
Shiruru Landslide Tragedy: ಟ್ಯಾಂಕರ್ ಎಂಜಿನ್, ಸ್ಕೂಟಿ ಪತ್ತೆ
Election Schedule: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣೆ ನೀತಿ ಸಂಹಿತೆ: ಮಾರ್ಗಸೂಚಿ
Badminton; ಅನ್ಮೋಲ್ ಖರಬ್ಗೆ ಬ್ಯಾಡ್ಮಿಂಟನ್ ಪ್ರಶಸ್ತಿ
Duleep Trophy:ಇಂಡಿಯಾ ಎ ಚಾಂಪಿಯನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.