![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Nov 21, 2023, 3:22 PM IST
ಚೆನ್ನೈ: ನಟಿ ತ್ರಿಶಾ ಕುರಿತು ಅಸಭ್ಯವಾಗಿ ಹೇಳಿಕೆ ನೀಡಿರುವ ಕಾಲಿವುಡ್ ನಟ ಮನ್ಸೂರ್ ಅಲಿ ಖಾನ್ ಅವರ ಮೇಲೆ ನಾಡಿಗರ್ ಸಂಗಮ್ (ದಕ್ಷಿಣ ಭಾರತೀಯ ಕಲಾವಿದರ ಸಂಘ ) ತಾತ್ಕಾಲಿಕವಾಗಿ ನಿಷೇಧ ಹೇರಿದೆ.
ಮನ್ಸೂರ್ ಹೇಳಿದ್ದೇನು?: “ಲಿಯೋ ಸಿನಿಮಾದಲ್ಲಿ ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಸಿನಿಮಾದಲ್ಲಿ ಅವರೊಂದಿಗೆ ಬೆಡ್ ರೂಮ್ ಸೀನ್ ಇರುತ್ತದೆ ಅನ್ಕೊಂಡಿದ್ದೆ. ಅವಳನ್ನು ಎತ್ತಿಕೊಂಡು ಬೆಡ್ ರೂಮ್ ಗೆ ಹೋಗುವ ದೃಶ್ಯವಿದೆ ಅಂದುಕೊಂಡಿದ್ದೆ. ಈ ರೀತಿ ನಾನು ಈ ಹಿಂದಿನ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ಮಾಡಿದ್ದೇನೆ. ನಾನು ತುಂಬಾ ರೇಪ್ ಸೀನ್ ಗಳನ್ನು ಮಾಡಿದ್ದೇನೆ. ಇದೇನು ನನಗೆ ಹೊಸತಲ್ಲ. ಆದರೆ ಇವರು(ಚಿತ್ರತಂಡ) ನನಗೆ ಕಾಶ್ಮೀರದಲ್ಲಿ ಚಿತ್ರೀಕರಣವಾಗುವ ವೇಳೆ ಸೆಟ್ ನಲ್ಲಿ ತ್ರಿಶಾಳನ್ನು ತೋರಿಸಲೇ ಇಲ್ಲ” ಎಂದಿದ್ದರು.
ಈ ಹೇಳಿಕೆಗೆ ಹಿರಿಯ – ಕಿರಿಯ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅವರ ಹೇಳಿಕೆಯಿಂದಾಗಿ ಅವರನ್ನು ಸಿನಿಮಾದಿಂದ ತಾತ್ಕಾಲಿಕವಾಗಿ ನಾಡಿಗರ್ ಸಂಗಮ್ (ದಕ್ಷಿಣ ಭಾರತೀಯ ಕಲಾವಿದರ ಸಂಘ) ನಿಷೇಧಿಸಿದೆ.
ಇದಾದ ಬಳಿಕ ಪ್ರತಿಕಾಗೋಷ್ಠಿ ಕರೆದ ನಟ ಮನ್ಸೂರ್ ಆಲಿ ಖಾನ್ ತಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.
“ನನ್ನ ಮೇಲೆ ನಿಷೇಧ ಹೇರಿ ನಾಡಿಗರ್ ಸಂಗಮ್ ತಪ್ಪು ಮಾಡಿದೆ. ಈ ರೀತಿಯ ಸಮಸ್ಯೆ ಸಂಭವಿಸಿದಾಗ, ಅವರು ನನ್ನ ವಿವರಣೆಯನ್ನು ಸಹ ಕೇಳಲಿಲ್ಲ. ಅವರು ನನಗೆ ಕರೆ ಮಾಡಬಹುದಿತ್ತು ಅಥವಾ ವಿವರಣೆ ಕೇಳಲು ನೋಟಿಸ್ ನೀಡಬಹುದಿತ್ತು. ವಿಚಾರಣೆ ಮಾಡಬೇಕಿತ್ತು ಆದರೆ ಹಾಗೆ ಮಾಡದೆ, ಈ ರೀತಿ ನೇರವಾಗಿ ತಾತ್ಕಾಲಿಕವಾಗಿ ನಿಷೇಧ ಹೇರಿದ್ದಾರೆ” ಎಂದಿದ್ದಾರೆ.
“ನನ್ನ ಮೇಲಿರುವ ನಿಷೇಧವನ್ನು ಹಿಂಪಡೆಯಲು ನಾನು ನಾಲ್ಕು ಗಂಟೆಯ ಕಾಲಾವಕಾಶವನ್ನು ನೀಡುತ್ತೇನೆ. ನಾನು ಕ್ಷಮೆ ಕೇಳಿದರೆ ಮಾತ್ರ ನಿಷೇಧ ಹಿಂದಕ್ಕೆ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ನಾನು ಕ್ಷಮೆ ಕೇಳುವವರಂತೆ ಕಾಣುತ್ತಿದ್ದೇನೆಯೇ?” ಎಂದು ಪ್ರಶ್ನಿಸಿದ್ದಾರೆ.
“ವಧುವರರ ಚಿತ್ರಗಳಂತೆ ಕಾಣುವ ನಮ್ಮಿಬ್ಬರ ಫೋಟೋವನ್ನು ಅಕ್ಕಪಕ್ಕ ಹಾಕಿ ಮಾಧ್ಯಮದವರು ಪ್ರಕಟಿಸಿದ್ದಾರೆ. ನೀವೆಲ್ಲರೂ ನನ್ನ ಉತ್ತಮ ಫೋಟೋವನ್ನು ಬಳಸಬಹುದಲ್ಲವೇ? ಕೆಲವು ಚಿತ್ರಗಳಲ್ಲಿ, ನಾನು ಚೆನ್ನಾಗಿ ಕಾಣುತ್ತೇನೆ” ಎಂದಿದ್ದಾರೆ.
ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, “ಸಿನಿಮಾದಲ್ಲಿ ಅತ್ಯಾಚಾರದ ದೃಶ್ಯ ಎಂದರೆ ಏನು? ನಿಜವಾಗಿಯೂ ಅತ್ಯಾಚಾರ ಮಾಡುವುದೇ?ಸಿನಿಮಾದಲ್ಲಿ ಕೊಲೆ ಎಂದರೆ ಏನು? ನಿಜವಾಗಿಯೂ ಕೊಲೆ ಮಾಡುವುದೇ?ನಿಮಗೆ ಸ್ವಲ್ಪ ಬುದ್ದಿ ಇರಬೇಕಲ್ಲವೇ? ನಾನು ಏನನ್ನೂ ತಪ್ಪಾಗಿ ಹೇಳಿಲ್ಲ. ನಾನು ಕ್ಷಮೆ ಕೇಳುವುದಿಲ್ಲ.” ಎಂದು ಹೇಳಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.