Aara movie review; ಹೊಸಬರ ಸಂಘರ್ಷದ ಹಾದಿ


Team Udayavani, Jul 30, 2023, 12:59 PM IST

Aara movie review

ಕೆಲವು ಸಿನಿಮಾಗಳು ಕಮರ್ಷಿಯಲ್‌ ಅಂಶಗಳನ್ನು ಬಿಟ್ಟು, ಅದರ ಕಥಾಹಂದರ, ಪರಿಸರ, ಆಶಯದಿಂದ ಇಷ್ಟವಾಗುತ್ತವೆ. ಇಂತಹ ಸಿನಿಮಾಗಳಲ್ಲಿ ಒಂದು ಪ್ರಾಮಾಣಿಕ ಪ್ರಯತ್ನವಿರುತ್ತದೆ. ಈ ವಾರ ತೆರೆಕಂಡಿರುವ “ಆರ’ ಸಿನಿಮಾ ಕೂಡಾ ಇಂತಹ ಪ್ರಾಮಾಣಿಕ ಪ್ರಯತ್ನದಿಂದ ಮೂಡಿಬಂದ ಸಿನಿಮಾ.

ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ ಈ ಸಿನಿಮಾದಲ್ಲಿ ಒಂದು ಒಳ್ಳೆಯ ಉದ್ದೇಶವಿದೆ, ಜೊತೆಗೆ ಅದನ್ನು ವಿಭಿನ್ನವಾಗಿ ಹೇಳಬೇಕೆಂಬ ತವಕವಿದೆ, ರೆಗ್ಯುಲರ್‌ ಶೈಲಿಯನ್ನು ದಾಟಿ ಪ್ರೇಕ್ಷಕಕನ ಮನಸ್ಸು ಗೆಲ್ಲಬೇಕು ಎಂಬ ಹಂಬಲವೂ ಇದೆ. ತಮ್ಮ ಸೀಮಿತ ಅವಕಾಶಗಳಲ್ಲಿ “ಆರ’ ತಂಡ ಒಂದು ಹೊಸ ಕಂಟೆಂಟ್‌ ಅನ್ನು ಕಟ್ಟಿಕೊಟ್ಟಿದೆ.

“ಆರ’ ಸಿನಿಮಾ ಎರಡು ಆಯಾಮಗಳಿಂದ ಸಾಗುತ್ತದೆ. ಒಂದು ಅರಣ್ಯ ನಾಶ ಮತ್ತು ಮನುಷ್ಯನೊಳಗಿನ ಮುಗ್ಧತೆ ನಾಶವಾದಾಗ ಏನಾಗುತ್ತದೆ ಎಂಬುದು. ಅರಣ್ಯ ನಾಶದ ಟ್ರ್ಯಾಕ್‌ ಬಂದಾಗ ಅದಕ್ಕೊಂದು ದೈವಿಕತೆಯ ಸ್ಪರ್ಶ ನೀಡಲಾಗಿದೆ. ಕಾಡಿನೊಳಗಿರುವ ದೇವಸ್ಥಾನ, ನಾಗಬನಗಳು ಅರಣ್ಯವನ್ನು ರಕ್ಷಿಸುತ್ತವೆ ಎಂಬ ನಂಬಿಕೆ ಇದೆ. ಈ ಅಂಶವನ್ನು ಸಿನಿಮಾದಲ್ಲಿ ತುಂಬಾ ಅಚ್ಚುಕಟ್ಟಾಗಿ ಬಳಸಿಕೊಳ್ಳಲಾಗಿದೆ. ಒಂದೇ ಮಾತಲ್ಲಿ ಹೇಳಬೇಕಾದರೆ ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷದ ಕಥೆ ಎನ್ನಬಹುದು. ಇಲ್ಲಿ ಮನುಷ್ಯನ ದುರಾಸೆ, ಅಹಂ ಹೇಗೆ ಆತನಿಗೆ ಗೊತ್ತಿಲ್ಲದೇ ಆತನನ್ನು ಕೆಟ್ಟ ಹಾದಿಗೆ ದೂಡುತ್ತದೆ ಎಂಬ ಅಂಶವನ್ನು ಹಲವು ಸನ್ನಿವೇಶಗಳ ಮೂಲಕ ಹೇಳಲಾಗಿದೆ. ಮೊದಲೇ ಹೇಳಿದಂತೆ ಈ ಸಿನಿಮಾದ ಆಶಯ ಚೆನ್ನಾಗಿದೆ.

ಇಡೀ ಕಥೆಯನ್ನು ಹೊಸ ಶೈಲಿಯಲ್ಲಿ ನಿರೂಪಿಸಲು ನಿರ್ದೇಶಕರು ಪ್ರಯತ್ನಿಸಿರುವುದು ಚಿತ್ರದಲ್ಲಿ ಎದ್ದು ಕಾಣುತ್ತದೆ. ಇಲ್ಲಿ ಕಾಲೆಳೆಯುವವರು, ಕೈ ಹಿಡಿಯುವವರು, ಕೊಲ್ಲುವವರು, ಕಾಯುವವರು ಎಲ್ಲರೂ ಇದ್ದಾರೆ. ಒಂದು ಪ್ರಯತ್ನವಾಗಿ “ಆರ’ ಮೆಚ್ಚುಗೆಗೆ ಪಾತ್ರವಾಗುವ ಚಿತ್ರ.

ನಾಯಕ ರೋಹಿತ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿ, ಗಮನ ಸೆಳೆದಿದ್ದಾರೆ. ಇನ್ನು ಚಿತ್ರದಲ್ಲಿ ನಟಿಸಿರುವ ಆನಂದ್‌ ನೀನಾಸಂ ಸೇರಿದಂತೆ ಇತರರು ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.

ಆರ್‌.ಪಿ.ರೈ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sidlingu 2 Movie Review

Sidlingu 2 Review ಫ್ಯಾಮಿಲಿ ಡ್ರಾಮಾದಲ್ಲಿ ವಿಜಯ ಪ್ರಸಾದ

Raju James Bond Review

Raju James Bond Review: ಕಾಸಿಗಾಗಿ ಜೇಮ್ಸ್‌ ಜೂಟಾಟ

Bhuvanam Gaganam Review

Bhuvanam Gaganam Review: ಪ್ರೇಮದ ಹಾದಿಯಲ್ಲಿ ಸುಮ ಘಮ

Mr.Rani movie review: ನಾನು ಅವಳಲ್ಲ ಅವನು!

Mr.Rani movie review: ನಾನು ಅವಳಲ್ಲ ಅವನು!

Gajarama Movie Review

Gajarama Movie Review: ಪ್ರೀತಿ ಮಧುರ ತ್ಯಾಗ ಅಮರ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.