C Movie Reciew; ಭಾವನೆ ಅರಳಿಸುವ ಬಾಂಧವ್ಯ


Team Udayavani, Aug 24, 2024, 12:15 PM IST

C Movie Reciew; ಭಾವನೆ ಅರಳಿಸುವ ಬಾಂಧವ್ಯ

ಚಂದನವನದಲ್ಲಿ ಹೊಸ ಪ್ರತಿಭೆಗಳಿಗೇನು ಕಮ್ಮಿ ಇಲ್ಲ. ದೊಡ್ಡ ಚಿತ್ರಗಳ ನಡುವೆಯೂ ಅಲ್ಲಲ್ಲಿ ಬರುವ ಹೊಸಬರ ಸಿನಿಮಾಗಳು ತಮ್ಮ ಕಥೆಗಳಿಂದ ಸದ್ದು ಮಾಡುತ್ತಿವೆ. ಕಥೆ ಸರಳವಾಗಿದ್ದರೂ ಅದನ್ನು ಭಿನ್ನ, ವಿಶೇಷವಾಗಿ ನಿರೂಪಿಸುವ ಖಯಾಲಿ ಹೊಸ ಪೀಳಿಗೆಯ ನಿರ್ದೇಶಕರದ್ದು. ಹೀಗೆ ಕನ್ನಡಕ್ಕೆ ಬಂದ ಹೊಸ ಕಥೆಯೇ “ಸಿ’.

ಅವರಿಬ್ಬರು ತಂದೆ ಮಗಳಲ್ಲ. ಆದರೂ ಆತ ಕಣ್ಣ ರೆಪ್ಪೆಯಂತೆ ಆಕೆಯನ್ನು ಜೋಪಾನ ಮಾಡುತ್ತಾನೆ. ಈಕೆಯೂ ಮಗಳಂತೆ ಅಕ್ಕರೆ ತೋರುತ್ತಾಳೆ. ಇವರಿಬ್ಬರ ಭೇಟಿ ಆಕಸ್ಮಿಕ. ದೃಷ್ಟಿ ಕಳೆದುಕೊಂಡ ಮಗುವೊಂದನ್ನು ಹೆತ್ತವರಿಗಿಂತ ಹೆಚ್ಚಾಗಿ ಸಾಕಿ ಸಲಹುತ್ತಾನೆ. ಅವಳಿಗೆ ದೃಷ್ಟಿ ಮರಳಿಸಲು ಆತ ಪಡುವ ಪಾಡು ಅಷ್ಟಿಷ್ಟಲ್ಲ. ಅಷ್ಟಕ್ಕೂ ಆತ ಯಾರು? ಆ ಮಗು ಯಾರು? ಎಂದು ತಿಳಿಯಲು “ಸಿ’ ಚಿತ್ರ ನೋಡಬೇಕು. “ಸಿ’ ಶೀರ್ಷಿಕೆಯಿಂದಲೇ ಈ ಚಿತ್ರ ಹೊಸತೆನಿಸುತ್ತದೆ. ಇಲ್ಲಿ ತಂದೆ-ಮಗಳ ಬಾಂಧವ್ಯವಿದೆ, ಕಥೆ ಸಾಗುತ್ತಿದ್ದಂತೆ ಮುಂದೆನಾಗುತ್ತದೆ ಎಂಬ ಕುತೂಹಲ ಅಂಶಗಳಿವೆ, ಮನ ತಟ್ಟುವ ಕಥೆ, ಅದಕ್ಕೆ ತಕ್ಕ ಅಭಿನಯವೂ ಇದೆ. ಮೆಡಿಕಲ್‌ ಮಾಫಿಯಾ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲುತ್ತದೆ ಈ ಚಿತ್ರ.

ನಿರ್ದೇಶನ ಹಾಗೂ ನಾಯಕ ನಟ ಎರಡೂ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿರುವ ಕಿರಣ್‌ ಸುಬ್ರಮಣಿ ಭರವಸೆ ಮೂಡಿಸಿದ್ದಾರೆ. ಬಾಲನಟಿ ಸಾನ್ವಿಕಾ ಅಭಿನಯ ಚಿತ್ರದ ಇನ್ನೊಂದು ಹೈಲೈಟ್‌. ಎ.ಬಿ. ಮುರಳೀಧರನ್‌ ಅವರ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಗಮನ ಸೆಳೆಯುತ್ತವೆ. ಉಳಿದಂತೆ ಪ್ರಶಾಂತ್‌ ನಟನ, ಶ್ರೀಧರ ರಾಮ್‌ ಮಧುಮಿತಾ, ನಿರ್ಮಲಾ, ಆರ್ಯ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ನಿತೀಶ ಡಂಬಳ

ಟಾಪ್ ನ್ಯೂಸ್

TAX ಸಮಪಾಲು ಕೊಡಿ: ಕೇಂದ್ರಕ್ಕೆ ಆಗ್ರಹ; ತೆರಿಗೆ ಪಾಲನ್ನು ಶೇ. 50ಕ್ಕೆ ಏರಿಸಲು ಒತ್ತಾಯ

TAX ಸಮಪಾಲು ಕೊಡಿ: ಕೇಂದ್ರಕ್ಕೆ ಆಗ್ರಹ; ತೆರಿಗೆ ಪಾಲನ್ನು ಶೇ. 50ಕ್ಕೆ ಏರಿಸಲು ಒತ್ತಾಯ

Mescom

Mescom: ವಿದ್ಯುತ್‌ ಬಾಕಿ ಉಳಿಸಿಕೊಂಡಿರುವ ಸರಕಾರಿ ಸಂಸ್ಥೆಗಳು

Pocso

Uppinangady: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

1-horoscope

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಶುಭಫಲಗಳೇ ಅಧಿಕ

Nagamangala Case: ಗಣೇಶ ವಿಸರ್ಜನೆ ವೇಳೆ 6 ಅಂಗಡಿ ಭಸ್ಮ,7 ಬೈಕ್‌ ಹಾನಿ,1 ಕಾರು ಜಖಂ

Nagamangala Case: ಗಣೇಶ ವಿಸರ್ಜನೆ ವೇಳೆ 6 ಅಂಗಡಿ ಭಸ್ಮ,7 ಬೈಕ್‌ ಹಾನಿ,1 ಕಾರು ಜಖಂ

Mangaluru

Mangaluru: ಬಸ್ಸಿನ ಫುಟ್‌ಬೋರ್ಡ್‌ನಿಂದ ಬಿದ್ದ ವಿದ್ಯಾರ್ಥಿ: ಅಪಾಯದಿಂದ ಪಾರು

MUDA ಕೇಸ್‌: ತೀರ್ಪು ಮೀಸಲು: ಮಧ್ಯಾಂತರ ಆದೇಶ ವಿಸ್ತರಣೆ; ಸಿದ್ದರಾಮಯ್ಯ ಸದ್ಯ ನಿರಾಳ

MUDA ಕೇಸ್‌: ತೀರ್ಪು ಮೀಸಲು: ಮಧ್ಯಾಂತರ ಆದೇಶ ವಿಸ್ತರಣೆ; ಸಿದ್ದರಾಮಯ್ಯ ಸದ್ಯ ನಿರಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ibbani tabbida ileyali movie review

Ibbani Tabbida Ileyali Review; ತಾಜಾ ಪ್ರೀತಿಯ ಭಾವ ಲಹರಿ

My Hero Movie Review

My Hero Movie Review; ಸೂಕ್ಷ್ಮ ಸಂದೇಶದ ಆಪ್ತ ಸಿನಿಮಾ

Taekwondo girl Review

Taekwondo girl Review; ಹಠದಲ್ಲಿ ಅರಳಿದ ಪ್ರತಿಭೆ

Laughing Buddha Review; ಬುದ್ಧನ ಕಾಮಿಡಿ ಪುರಾಣ

Laughing Buddha Review; ಬುದ್ಧನ ಕಾಮಿಡಿ ಪುರಾಣ

pepe movie review

Pepe Movie Review: ತೊರೆಯಲ್ಲಿ ಹರಿದ ನೆತ್ತರ ಕಥೆಯಿದು…

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

TAX ಸಮಪಾಲು ಕೊಡಿ: ಕೇಂದ್ರಕ್ಕೆ ಆಗ್ರಹ; ತೆರಿಗೆ ಪಾಲನ್ನು ಶೇ. 50ಕ್ಕೆ ಏರಿಸಲು ಒತ್ತಾಯ

TAX ಸಮಪಾಲು ಕೊಡಿ: ಕೇಂದ್ರಕ್ಕೆ ಆಗ್ರಹ; ತೆರಿಗೆ ಪಾಲನ್ನು ಶೇ. 50ಕ್ಕೆ ಏರಿಸಲು ಒತ್ತಾಯ

Mescom

Mescom: ವಿದ್ಯುತ್‌ ಬಾಕಿ ಉಳಿಸಿಕೊಂಡಿರುವ ಸರಕಾರಿ ಸಂಸ್ಥೆಗಳು

Pocso

Uppinangady: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

1-horoscope

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಶುಭಫಲಗಳೇ ಅಧಿಕ

Nagamangala Case: ಗಣೇಶ ವಿಸರ್ಜನೆ ವೇಳೆ 6 ಅಂಗಡಿ ಭಸ್ಮ,7 ಬೈಕ್‌ ಹಾನಿ,1 ಕಾರು ಜಖಂ

Nagamangala Case: ಗಣೇಶ ವಿಸರ್ಜನೆ ವೇಳೆ 6 ಅಂಗಡಿ ಭಸ್ಮ,7 ಬೈಕ್‌ ಹಾನಿ,1 ಕಾರು ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.