ಮಾನ್ಸೂನ್‌ ರಾಗ ಚಿತ್ರ ವಿಮರ್ಶೆ: ಮಾನ್ಸೂನ್‌ ನಲ್ಲಿ ಅರಳಿದ ಕ್ಲಾಸ್‌ ಲವ್‌ ಸ್ಟೋರಿ


Team Udayavani, Sep 17, 2022, 10:04 AM IST

ಮಾನ್ಸೂನ್‌ ರಾಗ ಚಿತ್ರ ವಿಮರ್ಶೆ: ಮಾನ್ಸೂನ್‌ ನಲ್ಲಿ ಅರಳಿದ ಕ್ಲಾಸ್‌ ಲವ್‌ ಸ್ಟೋರಿ

ಅಲ್ಲೊಂದು ನಿಷ್ಕಲ್ಮಶ ಪ್ರೀತಿ ಇದೆ.. ಆದರೆ, ಆ ಪ್ರೀತಿ ಯ ಸುತ್ತ ಜಾತಿಯ ಬೇಲಿ ಸುತ್ತಿಕೊಂಡಿದೆ. ಹೆಚ್ಚು ಸದ್ದು ಮಾಡದೆಯೇ ಪ್ರೀತಿಯನ್ನು ಚುಚ್ಚಿ ಸಾಯಿಸುವಂತಹ ವಿಷ ಮುಳ್ಳು ಆ ಬೇಲಿ ತುಂಬಾ ತುಂಬಿವೆ.. ಹಂತ ಹಂತವಾಗಿ “ಚಿಗುರೊಡೆಯುವ’ ಪ್ರೀತಿಯನ್ನು ಆ ಮುಳ್ಳು ಸಾಯಿಸುತ್ತಾ ಅಥವಾ ಮುಳ್ಳನ್ನು ಬಗ್ಗಿಸಿ ಪ್ರೀತಿ ಗೆಲ್ಲುತ್ತಾ.. ಈ ಕುತೂಹಲವಿದ್ದರೆ ನೀವು “ಮಾನ್ಸೂನ್‌ ರಾಗ’ ಸಿನಿಮಾ ನೋಡಬಹುದು.

ಅತಿಯಾದ ಬಿಲ್ಡಪ್‌, ಸುಖಾಸುಮ್ಮನೆ ಡೈಲಾಗ್‌, ಹೀರೋಯಿಸಂ ಇಲ್ಲದೇ ನೀಟಾಗಿ ಸಾಗುವ ಒಂದು ಕ್ಲಾಸ್‌ ಸಿನಿಮಾವನ್ನು ನೋಡಬೇಕೆಂದು ಬಯಸುವವರಿಗೆ “ಮಾನ್ಸೂನ್‌ ರಾಗ’ ಒಂದು ಒಳ್ಳೆಯ ಆಯ್ಕೆ. ಆ ಮಟ್ಟಿಗೆ ನಿರ್ದೇಶಕರು ಇಡೀ ಸಿನಿಮಾವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ. ನಾಲ್ಕು ಕಥೆಗಳೊಂದಿಗೆ ಸಾಗುವ ಸಿನಿಮಾದಲ್ಲಿ ವಿವಿಧ ಹಂತಗಳಲ್ಲಿನ ಪ್ರೀತಿಯನ್ನು ಹೇಳುತ್ತಾ ಹೋಗಲಾಗಿದೆ. ಜಾತಿ, ಧರ್ಮ, ಆಸ್ತಿ, ಅಂತಸ್ತು, ವಯಸ್ಸು, ಸಮಾಜದ ದೃಷ್ಟಿ… ಇಂತಹ ಅಂಶಗಳೊಂದಿಗೆ ಸಾಗುವ ನಾಲ್ಕು ಕಥೆಗಳು ಅಂತಿಮವಾಗಿ ಒಂದು ಮೂಲರೂಪವಾಗುತ್ತದೆ. ಅದೇ ಸಿನಿಮಾದ ಹೈಲೈಟ್‌. ಆ ಕುತೂಹಲವನ್ನು ನಿರ್ದೇಶಕರು ಕೊನೆವರೆಗೂ ಉಳಿಸಿಕೊಂಡು, ಕುತೂಹಲ ಕಾಯ್ದಿರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಜನೌಷಧಿ ಕೇಂದ್ರದಲ್ಲಿ ಲಭ್ಯವಾಗಲಿದೆ “ಸಿಟಾಗ್ಲಿಪ್ಟಿನ್‌’

ಇಲ್ಲಿ ಬರುವ ಪ್ರತಿ ಕಥೆಗಳನ್ನು ವಿಭಿನ್ನ ಪರಿಸರದಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ, ಎಲ್ಲದಕ್ಕೂ ಇರುವ ಒಂದು ಸಾಮಾನ್ಯ ಅಂಶವೆಂದರೆ ಮಳೆ. ಹೆಸರಿಗೆ ತಕ್ಕಂತೆ ಇಡೀ ಸಿನಿಮಾ ಮಳೆಯ ಮಧ್ಯೆಯೇ ನಡೆಯುತ್ತದೆ. ಮೊದಲೇ ಹೇಳಿದಂತೆ ನಿರ್ದೇಶಕರು ಇಡೀ ಸಿನಿಮಾವನ್ನು ಕ್ಲಾಸ್‌ ಆಗಿ ಕಟ್ಟಿಕೊಟ್ಟಿದ್ದಾರೆ. ಸಿದ್ಧಸೂತ್ರಗಳಿಂದ ಮುಕ್ತವಾಗಿರುವ ಸಿನಿಮಾವಾದ್ದರಿಂದ ಹೊಸ ಶೈಲಿಯ ಸಿನಿಮಾ ಬಯಸುವವರಿಗೆ “ಮಾನ್ಸೂನ್‌ ರಾಗ’ ಇಷ್ಟವಾಗಬಹುದು. ಇಡೀ ಸಿನಿಮಾವನ್ನು ತುಂಬಾ ಸಾವಧಾನವಾಗಿ ಕಟ್ಟಿಕೊಟ್ಟಿದ್ದರಿಂದ ಇಲ್ಲಿ ವೇಗದ ನಿರೂಪಣೆ ಬಯಸುವಂತಿಲ್ಲ.

ಚಿತ್ರದಲ್ಲಿ ರಚಿತಾ-ಧನಂಜಯ್‌, ಅಚ್ಯುತ್‌- ಸುಹಾಸಿನಿ ಜೊತೆಗೆ ಇನ್ನೂ ಎರಡು ಜೋಡಿಗಳಿವೆ. ಒಬ್ಬೊಬ್ಬರದ್ದು ಒಂದೊಂದು ಕಥೆ. ಅದರಲ್ಲೂ ಅಚ್ಯುತ್‌-ಸುಹಾಸಿನಿ ದೃಶ್ಯಗಳು ಬೇಗನೇ ಆಪ್ತವಾಗುತ್ತವೆ. ಇನ್ನು, ಧನಂಜಯ್‌ ಹೊಸ ಇಮೇಜ್‌, ಹೊಸ ಪಾತ್ರದಲ್ಲಿ ಇಷ್ಟವಾಗುತ್ತಾರೆ. ನಾಯಕಿ ರಚಿತಾ ರಾಮ್‌ ಕೂಡಾ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ.

ಉಳಿದಂತೆ ಶೋಭರಾಜ್‌, ಯಶಾ ಶಿವಕುಮಾರ್‌, ಶಿವಾಂಕ್‌ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಗುರು ಕಶ್ಯಪ್‌ ಸಂಭಾಷಣೆ ಕೂಡಾ ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಅನೂಪ್‌ ಸೀಳೀನ್‌ ಸಂಗೀತ, ಹಿನ್ನೆಲೆ ಸಂಗೀತ ಹಾಗೂ ಚಿತ್ರದ ಸಾಹಿತ್ಯ ಕಥೆಯ ಆಶಯಕ್ಕೆ ತಕ್ಕುದಾಗಿದೆ

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sidlingu 2 Movie Review

Sidlingu 2 Review ಫ್ಯಾಮಿಲಿ ಡ್ರಾಮಾದಲ್ಲಿ ವಿಜಯ ಪ್ರಸಾದ

Raju James Bond Review

Raju James Bond Review: ಕಾಸಿಗಾಗಿ ಜೇಮ್ಸ್‌ ಜೂಟಾಟ

Bhuvanam Gaganam Review

Bhuvanam Gaganam Review: ಪ್ರೇಮದ ಹಾದಿಯಲ್ಲಿ ಸುಮ ಘಮ

Mr.Rani movie review: ನಾನು ಅವಳಲ್ಲ ಅವನು!

Mr.Rani movie review: ನಾನು ಅವಳಲ್ಲ ಅವನು!

Gajarama Movie Review

Gajarama Movie Review: ಪ್ರೀತಿ ಮಧುರ ತ್ಯಾಗ ಅಮರ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.