ಸಂಶಯ ಫ‌ಲ ಮತ್ತು ಸುಂದರಾಂಗ ಜಾಣೆ


Team Udayavani, Jun 16, 2018, 5:34 PM IST

megha.jpg

ಇವರ್ ವೈಫ್ ಈಸ್‌ ವೆರಿ ಸೆಕ್ಸಿ … ಹಾಗಂತ ಒಂದು ಎಸ್‌.ಎಂ.ಎಸ್‌ ಅವನ ಫೋನ್‌ಗೆ ಬರುತ್ತದೆ. ಅದನ್ನು ನೋಡುತ್ತಿದ್ದಂತೆಯೇ ಒಮ್ಮೆ ಶೇಕ್‌ ಆಗುತ್ತಾನೆ ಅವನು. ಕ್ರಮೇಣ ಅಂತಹ ಮೆಸೇಜ್‌ಗಳು ಜಾಸ್ತಿ ಆಗುತ್ತದೆ. ಮೆಸೇಜ್‌ ಕಳಿಸುತ್ತಿರುವವರು ತನ್ನ ಹೆಂಡತಿಗೆ ಪರಿಚಯವಿರಬಹುದಾ, ಅವಳ ಹಳೆಯ ಬಾಯ್‌ಫ್ರೆಂಡ್‌ ಇರಬಹುದಾ, ತನ್ನ ಹೆಂಡತಿಗೆ ಬೇರೊಬ್ಬನ ಜೊತೆಗೆ ಅಫೇರ್‌ ಇರಬಹುದಾ … ಇಂಥಾ ನೂರೆಂಟು ಸಂಶಯಗಳು ಅವನನ್ನು ಎಡಬಿಡದೆ ಕಾಡುತ್ತದೆ.

ಆದರೆ, ಹೆಂಡತಿಗೆ ಇವನ್ನೆಲ್ಲಾ ಹೇಳಿಕೊಳ್ಳುವುದಕ್ಕಾಗುವುದಿಲ್ಲ. ಹಾಗಂತ ಇದನ್ನು ಬಿಟ್ಟಾಕುವ ಹಾಗೂ ಇಲ್ಲ. ಕೊನೆಗೆ ಅವನ ಸ್ನೇಹಿತ ಒಂದು ಉಪಾಯ ಹೇಳಿಕೊಡುತ್ತಾನೆ. ಇದೆಲ್ಲಾ ಆಗುವುದಕ್ಕಿಂತ ಮುನ್ನ, ಅವನಿಗೊಂದು ಪತ್ರ ಬಂದಿರುತ್ತದೆ. ಅದರಲ್ಲಿ ಯಾರೋ ಹನಿಮೂನ್‌ ಪ್ಯಾಕೇಜ್‌ ಗಿಫ್ಟ್ ಮಾಡಿರುತ್ತಾರೆ. ಬಹುಶಃ ಹನಿಮೂನ್‌ಗೆ ಕಳಿಸುತ್ತಿರುವವರೇ ಇವೆಲ್ಲಾ ಮಾಡುತ್ತಿರಬಹುದು ಎಂಬ ಗುಮಾನಿಯ ಮೇಲೆ ಹನಿಮೂನ್‌ಗೆ ಹೋಗುವುದಕ್ಕೆ ಹೇಳುತ್ತಾನೆ.

ಅಲ್ಲಿ ಅವನನ್ನು ಕಾಡುತ್ತಿರುವವರು ಸಿಕ್ಕರೂ ಸಿಗಬಹುದು ಎಂದು ಹನಿಮೂನ್‌ಗೆ ಕಳಿಸುತ್ತಾನೆ. ಹೀಗೆ ಆ ನವದಂಪತಿ ಬೈನೇಕಾಡು ಎಂಬ ರೆಸಾರ್ಟ್‌ಗೆ ಹನಿಮೂನ್‌ಗೆಂದು ಹೋಗುತ್ತಾರೆ … ಇದನ್ನು ಓದುವಾಗ ಕುತೂಹಲ ಜಾಸ್ತಿ ಆಗಬಹುದು. ಯಾರು ಈ ರೀತಿ ಮಾಡುತ್ತಿರಬಹುದು ಎಂದು ಆಶ್ಚರ್ಯವಾಗಬಹುದು. ಗಂಡನ ತರಹವೇ ಪ್ರೇಕ್ಷಕರಿಗೂ, ಇದು ಆಕೆಯ ಹಳೆಯ ಬಾಯ್‌ಫ್ರೆಂಡ್‌ ಇರಬಹುದಾ, ಬೇರೊಬ್ಬನ ಜೊತೆಗೆ ಅಫೇರ್‌ ಇರಬಹುದಾ … ಇಂಥಾ ನೂರೆಂಟು ಸಂಶಯಗಳು ಕಾಡಬಹುದು.

“ಮೇಘ ಅಲಿಯಾಸ್‌ ಮ್ಯಾಗಿ’ ಚಿತ್ರದ ಹೈಲೈಟ್‌ ಇದು ಎಂದರೆ ತಪ್ಪಿಲ್ಲ. ಚಿತ್ರದ ಹೆಸರಿಗೂ, ಮೊದಲಾರ್ಧದಲ್ಲಿ ನಡೆಯುವ ಕಥೆಗೂ ಸಂಬಂಧವೇ ಇಲ್ಲ. ಮೊದಲಾರ್ಧವೆಲ್ಲಾ ಇಂಥದ್ದೊಂದು ಸಸ್ಪೆನ್ಸ್‌ನೊಂದಿಗೆ ನೋಡಿಸಿಕೊಂಡು ಹೋಗುವ ಚಿತ್ರ, ಕ್ರಮೇಣ ಹಿಡಿತ ಕಳೆದುಕೊಳ್ಳುತ್ತದೆ. ಹಾಗೆ ನೋಡಿದರೆ, ವಿಶಾಲ್‌ ಪುಟ್ಟಣ್ಣ ತನ್ನ ಮೊದಲ ಚಿತ್ರವನ್ನು ವಿಪರೀತ ಎಳೆದಾಡಿಲ್ಲ ಅಥವಾ ಬೇಡದ್ದನ್ನು ತುರುಕುವುದಕ್ಕೆ ಹೋಗಿಲ್ಲ. ಚಿತ್ರಕ್ಕೆ ಎಷ್ಟು ಬೇಕೋ, ಏನು ಬೇಕೋ ಅದನ್ನೇ ಹೇಳುತ್ತಾ ಹೋಗಿದ್ದಾರೆ.

ಆದರೆ, ಇವನ್ನೆಲ್ಲಾ ಯಾರು ಮಾಡುತ್ತಿರಬಹುದು ಎಂಬ ರಹಸ್ಯ ಬಯಲಾದಾಗ, ಚಿತ್ರ ಕ್ರಮೇಣ ನಿಧಾನವಾಗುತ್ತದೆ. ಈ ಸಂದರ್ಭದಲ್ಲಿ ಒಂದಿಷ್ಟು ಥ್ರಿಲ್‌ನ ಅವಶ್ಯಕತೆ ಇತ್ತು. ಆದರೆ, ಮೇಲಿಂದ ಮೇಲೆ ಒಂದೇ ವಿಷಯ ರಿಪೀಟ್‌ ಆಗಿ ಚಿತ್ರ ಬಹಳ ನೀರಸವಾಗಿ ಮುಕ್ತಾಯವಾಗಿ ಹೋಗುತ್ತದೆ. ಬಹುಶಃ ಈ ಹಂತದಲ್ಲಿ ನಿರ್ದೇಶಕರು ಇನ್ನಷ್ಟು ಚುರುಕಾಗಿ ಚಿತ್ರವನ್ನು ನಿರೂಪಿಸಿದ್ದರೆ ಚಿತ್ರ ಕೆಲವರಿಗಾದರೂ ಇಷ್ಟವಾಗುತಿತ್ತೋ ಏನೋ? ಒಟ್ಟಾರೆ ಈ ಚಿತ್ರದ ಮೂಲಕ ಹುಡುಗರಿಗೂ ಇಷ್ಟ-ಕಷ್ಟಗಳಿರುತ್ತವೆ,

ಅವರಿಗೂ ತಮ್ಮ ಕನಸಿನ ಹುಡುಗಿ ಹೀಗ್ಹೀಗೆ ಇರಬೇಕೆಂಬ ಕಲ್ಪನೆಗಳು ಇರುತ್ತವೆ ಮತ್ತು ಅದಕ್ಕೆ ಹುಡುಗಿಯರು ಸ್ಪಂದಿಸದಿದ್ದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಇದನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದರೆ, ವಿಶಾಲ್‌ ಮೊದಲ ಪ್ರಯತ್ನದಲ್ಲೇ ಸೈ ಎನಿಸಿಕೊಳ್ಳುತ್ತಿದ್ದರು. ಇಡೀ ಚಿತ್ರದ ಹೈಲೈಟ್‌ ಎಂದರೆ ಅದು ಸುಕೃತಾ ಮಾಡಿರುವ ಮ್ಯಾಗಿ ಪಾತ್ರ. ಸುಕೃತ ತಮ್ಮ ಶಕ್ತಿಮೀರಿ ಆ ಪಾತ್ರವನ್ನು ಚೆನ್ನಾಗಿ ಮಾಡುವ ಪ್ರಯತ್ನ ಪಾಡಿದ್ದಾರೆ.

ಆದರೆ, ಅದನ್ನು ಇನ್ನಷ್ಟು ಸಮರ್ಥವಾಗಿ ಕಟ್ಟಿಕೊಡುವ ಅವಶ್ಯಕತೆ ಇತ್ತು. ಏಕೆಂದರೆ, ಸುಕೃತ ಅಭಿನಯ ಬಹಳಷ್ಟು ಕಡೆ ಕೃತಕವಷ್ಟೇ ಅಲ್ಲ, ಪ್ರಯತ್ನಪೂರ್ವಕವಾಗಿ ಮಾಡುತ್ತಿದ್ದಾರೆ ಎಂದನಿಸುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಜಾಗ್ರತೆ ವಹಿಸಬೇಕಿತ್ತು. ಇನ್ನು ತೇಜ್‌ ಗೌಡ ಮತ್ತು ನೀತು ಬಾಲ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅತೀಶಯ ಜೈನ್‌ ಅವರ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಪೈಕಟ್ಟು ಮತ್ತು ಜಯಪ್ರಕಾಶ್‌ ಅವರ ಛಾಯಾಗ್ರಹಣದಲ್ಲಿ ಕತ್ತಲು-ಬೆಳಕಿನಾಟ ಚೆನ್ನಾಗಿದೆ.

ಚಿತ್ರ: ಮೇಘ ಅಲಿಯಾಸ್‌ ಮ್ಯಾಗಿ
ನಿರ್ಮಾಣ: ವಿನಯ್‌ ಕುಮಾರ್‌
ನಿರ್ದೇಶನ: ವಿಶಾಲ್‌ ಪುಟ್ಟಣ್ಣ
ತಾರಾಗಣ: ಸುಕೃತ ವಾಗ್ಲೆ, ತೇಜ್‌ ಗೌಡ, ನೀತು ಬಾಲ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.