ಹೆಣ್ಮಕ್ಳೆ ಸ್ಟ್ರಾಂಗು ಗುರು!


Team Udayavani, Feb 23, 2018, 5:36 PM IST

ganda-urige.jpg

ಗಂಡಂದಿರು ಮನೆಬಿಟ್ಟ ಪರ ಊರಿನತ್ತ ಮುಖ ಮಾಡುತ್ತಿದ್ದಂತೆ ಪತ್ನಿಯರ ಗೆಟಪ್‌ ಬದಲಾಗುತ್ತದೆ. ಹೋಮ್ಲಿಯಾಗಿದ್ದವರ ಪಕ್ಕಾ ಹಾಟ್‌ ಗೆಟಪ್‌ಗೆ ಬದಲಾಗುತ್ತಾರೆ. ಮನೆಬಿಟ್ಟು ಹೊರಬರುತ್ತಾರೆ. ಓಪನ್‌ ಜೀಪ್‌ನಲ್ಲಿ “ಸಮಾನ ಮನಸ್ಕ’ ಹೆಂಡ್ತಿಯರ ಮೋಜು ಮಸ್ತಿ ಮಾಡುತ್ತಾ ತೋಟದ ಮನೆ ಸೇರುತ್ತಾರೆ. ಅಲ್ಲಿ ಅವರದ್ದೇ ಲೋಕ. ಬಾಟಲುಗಳ ಸದ್ದು, ಫ‌ಸ್ಟ್‌ನೈಟ್‌ ಸ್ಟೋರಿಗಳು ಜೋರಾಗಿಯೇ ಕೇಳಿಬರುತ್ತವೆ.

ಈ ನಡುವೆಯೇ ಒಂದೊಂದೇ ಘಟನೆಗಳು ನಡೆಯುತ್ತಾ ಹೋಗುತ್ತದೆ. ಏನಾಗುತ್ತಿದೆ, ಯಾರಿಂದ ಇವೆಲ್ಲಾ ನಡೆಯುತ್ತಿದೆ ಎಂಬ ಅಂಶ ತಿಳಿಯಬೇಕಾದರೆ ನೀವು “ಗಂಡ ಊರಿಗೆ ಹೋದಾಗ’ ಸಿನಿಮಾ ನೋಡಿ. ಚಿತ್ರದ ಟೈಟಲ್‌ ಹೇಳಿದಾಗ ಏನು ಹೇಳಿರಬಹುದು, ಅಶ್ಲೀಲತೆ ಇರಬಹುದಾ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಆದರೆ, ಚಿತ್ರದಲ್ಲಿ ಅಶ್ಲೀಲ ಅಥವಾ ಮುಜುಗರ ತರುವಂತಹ ದೃಶ್ಯಗಳೇನಿಲ್ಲ.

ಆದರೆ, ಡಬಲ್‌ ಮೀನಿಂಗ್‌ ಮಾತುಗಳಿಗೇನು ಕೊರತೆಯಿಲ್ಲ. ಹೆಣ್ಣು ಮಕ್ಕಳು ಒಟ್ಟಿಗೆ ಸೇರಿಕೊಂಡು ಬಿಂದಾಸ್‌ ಆಗಿ ಮಾತನಾಡುವ ದೃಶ್ಯಗಳು, ಅವರವರ ಫ‌ಸ್ಟ್‌ನೈಟ್‌ ವಿವರಿಸುವ ಸಂದರ್ಭಗಳ ಮೂಲಕ ಪಡ್ಡೆಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸಾಯಿಕೃಷ್ಣ. ಹಾಗಾಗಿ, ಇಲ್ಲಿ ಕಥೆಯ ಹಂಗುಬಿಟ್ಟು ಸೀಟಿಗೆ ಒರಗಬಹುದು. ನಿರ್ದೇಶಕ ಸಾಯಿಕೃಷ್ಣ ಅವರು ಮಾಡಿಕೊಂಡಿರುವ ಒನ್‌ಲೈನ್‌ ಕಥೆಯಲ್ಲಿ ಹೇಳಿಕೊಳ್ಳುವಂತಹ ಅದ್ಭುತ ಅಂಶಗಳೇನೂ ಇಲ್ಲ.

ಅದೇ ಕಾರಣಕ್ಕಾಗಿ ಅವರು ಫ‌ನ್ನಿ ಸನ್ನಿವೇಶಗಳ ಮೂಲಕ ಬಹುತೇಕ ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಹಾಗಾಗಿ, ಇಲ್ಲಿ ಹೆಚ್ಚಿನದ್ದೇನನ್ನೂ ನೀವು ನಿರೀಕ್ಷಿಸುವಂತಿಲ್ಲ. ಇಲ್ಲಿ ಹೆಣ್ಮಕ್ಳು ತೆಲುಗು ಸಿನಿಮಾಗಳ ರೇಂಜ್‌ಗೆ ಫೈಟ್‌ ಮಾಡೋದನ್ನು ನೀವು ನೋಡಬಹುದು. ಬಹುತೇಕ ಸಿನಿಮಾವನ್ನು ಒಂದು ಮನೆಯೊಳಗೆ ಮುಗಿಸಿದ್ದಾರೆ. ಆದರೆ, ಸಿನಿಮಾ ಸೀರಿಯಸ್‌ ಆಗುತ್ತಾ ಸಾಗೋದು ದ್ವಿತೀಯಾರ್ಧದಲ್ಲಿ.

ಇಲ್ಲಿ ನಿರ್ದೇಶಕರು ಹಾರರ್‌ ಸಿನಿಮಾದ ಫೀಲ್‌ ಕೊಟ್ಟಿದ್ದಾರೆ. ಹೆಣ್ಮಕ್ಳ ತಂಡಕ್ಕೆ ದೆವ್ವ ಸೇರಿಕೊಂಡಿತಾ ಎಂಬ ಸಂದೇಹ ಬರುವ ಮಟ್ಟಕ್ಕೆ ಅವರು ಹಿನ್ನೆಲೆ ಸಂಗೀತ, ಮಬ್ಬು ಬೆಳಕನ್ನು ಬಳಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂಟಿ ಮನೆ, ಪಾರ್ಟಿ, ಕೊಲೆ ಎಂದಾಗ ಸಹಜವಾಗಿಯೇ ದೆವ್ವದ ಕಾಟ ಅಥವಾ ಇನ್ಯಾರಧ್ದೋ ಕೈವಾಡವಾಗಿ ಸಿನಿಮಾಗಳು ಮುಕ್ತಾಯ ಕಾಣುತ್ತವೆ.

ಆರಂಭದಲ್ಲಿ “ಗಂಡ ಊರಿಗೆ ಹೋದಾಗ’ ಚಿತ್ರದ ಬಗ್ಗೆಯೂ ಇದೇ ಭಾವನೆ ಬರುತ್ತದೆ. ಆದರೆ, ಈ ಹಾರರ್‌ ಫೀಲ್‌ ಹೆಚ್ಚು ಒತ್ತು ಇರೋದಿಲ್ಲ. ಹಾಗೆ ನೋಡಿದರೆ ನಿರ್ದೇಶಕರು ಮಾಡಿಕೊಂಡು ಒನ್‌ಲೈನ್‌ ಚೆನ್ನಾಗಿದೆ. ಗೆಳೆತಿಯೊಬ್ಬಳ ಸಂಸಾರ ಸರಿಮಾಡಲು ಎಲ್ಲರೂ ಹೇಗೆ ಒಂದಾಗುತ್ತಾರೆ, ಏನೆಲ್ಲಾ ಪ್ಲ್ಯಾನ್‌ ಮಾಡುತ್ತಾರೆ ಎಂಬ ಅಂಶ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆದರೆ, ಆರಂಭದಿಂದ ಕೊನೆವರೆಗೆ ಮೋಜು, ಮಸ್ತಿ, ಹಾರರ್‌ ಫೀಲ್‌ನಲ್ಲೇ ಸಾಗುವ ಸಿನಿಮಾದ ನಿಜವಾದ ಟ್ವಿಸ್ಟ್‌ ಕೊನೆಯಲ್ಲಿ ತೆರೆದುಕೊಳ್ಳುತ್ತದೆ ಮತ್ತು ಒಂದು ಹಂತಕ್ಕೆ ಅದು ಇಷ್ಟವಾಗುತ್ತದೆ ಕೂಡಾ. ಚಿತ್ರದಲ್ಲಿ ಸಿಂಧು ರಾವ್‌,  ರಾಧಿಕಾ ರಾಮ್‌, ಅನು ಗೌಡ, ಶಾಲಿನಿ, ಸ್ವಪ್ನ ನಟಿಸಿದ್ದು, ಎಲ್ಲರೂ ಬೋಲ್ಡ್‌ ಆಗಿ ನಟಿಸಿದ್ದಾರೆ. ಉಳಿದಂತೆ ವಿಸಿಎನ್‌ ಮಂಜುನಾಥ್‌ ಸೇರಿದಂತೆ ಚಿತ್ರದಲ್ಲಿ ನಟಿಸಿದವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. 

ಚಿತ್ರ: ಗಂಡ ಊರಿಗೆ ಹೋದಾಗ
ನಿರ್ಮಾಣ: ಎಸ್‌ಬಿಎಲ್‌ ಎಂಟರ್‌ಪ್ರೈಸಸ್‌
ನಿರ್ದೇಶನ: ಸಾಯಿಕೃಷ್ಣ
ತಾರಾಗಣ: ಸಿಂಧು ರಾವ್‌, ರಾಧಿಕಾ ರಾಮ್‌, ಅನು ಗೌಡ, ಶಾಲಿನಿ, ಸ್ವಪ್ನ, ವಿಸಿಎನ್‌ ಮಂಜುನಾಥ್‌ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sidlingu 2 Movie Review

Sidlingu 2 Review ಫ್ಯಾಮಿಲಿ ಡ್ರಾಮಾದಲ್ಲಿ ವಿಜಯ ಪ್ರಸಾದ

Raju James Bond Review

Raju James Bond Review: ಕಾಸಿಗಾಗಿ ಜೇಮ್ಸ್‌ ಜೂಟಾಟ

Bhuvanam Gaganam Review

Bhuvanam Gaganam Review: ಪ್ರೇಮದ ಹಾದಿಯಲ್ಲಿ ಸುಮ ಘಮ

Mr.Rani movie review: ನಾನು ಅವಳಲ್ಲ ಅವನು!

Mr.Rani movie review: ನಾನು ಅವಳಲ್ಲ ಅವನು!

Gajarama Movie Review

Gajarama Movie Review: ಪ್ರೀತಿ ಮಧುರ ತ್ಯಾಗ ಅಮರ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.