ಸಾಮಾಜಿಕ ವಿಡಂಬನೆಯಲ್ಲಿ ತಿಳಿಹಾಸ್ಯ!


Team Udayavani, Feb 9, 2020, 10:35 AM IST

cinema-tdy-1

ಜಗತ್ತು ಮತ್ತು ಜನಗಳನ್ನು ದೇವರು ರಕ್ಷಿಸಿ, ಪೋಷಿಸುತ್ತಾನೆ ಎನ್ನುವ ನಂಬಿಕೆ ಬಹುತೇಕ (ಆಸ್ತಿಕ)ರದ್ದು. ಅನೇಕರು ಈ ವಿಷಯದಲ್ಲಿ ಅವರವರ ನೆಚ್ಚಿನ ದೇವರ ಮೊರೆ ಹೋಗುವುದನ್ನು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಅದರಲ್ಲೂ ಜನಗಳ ಸಂಕಷ್ಟದ ವಿಷಯದಲ್ಲಿ ವಿಘ್ನ ವಿನಾಶಕ ಗಣೇಶನಿಗೆ ಮೊದಲ ಆದ್ಯತೆ. ಆದರೆ ಇದೇ ಗಣೇಶನಿಗೇ ಸಂಕಷ್ಟ ಬಂದರೆ ಅವನು ಯಾರ ಮೊರೆ ಹೋಗಬೇಕು? ಇದು “ಮತ್ತೆ ಉದ್ಭವ’ ಚಿತ್ರದ ಕಥಾಹಂದರ.

ಸುಮಾರು 30 ವರ್ಷಗಳ ಹಿಂದೆ ತೆರೆಗೆ ಬಂದಿದ್ದ “ಉದ್ಭವ’ ಚಿತ್ರ ಅನೇಕರಿಗೆ ನೆನಪಿರಬಹುದು. ಅದರಲ್ಲಿ ಗಣೇಶ ಉದ್ಭವಿಸಿ ನೋಡುಗರಿಗೆ ತೆರೆಮೇಲೆ ಬೆರಗು ಮೂಡಿಸಲು ಯಶಸ್ವಿಯಾಗಿದ್ದ. 30 ವರ್ಷಗಳ ನಂತರ ಅದೇ ಉದ್ಭವ ಗಣೇಶ ಮತ್ತೆ ಏನೇನು ಬೆರೆಗು ಮೂಡಿಸುತ್ತಾನೆ ಅನ್ನೊದು “ಮತ್ತೆ ಉದ್ಭವ’ದಲ್ಲಿ ಮುಂದುವರೆದಿದೆ. “ಉದ್ಭವ’ ಚಿತ್ರವನ್ನು ತೆರೆಗೆ ತಂದ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರೇ ಮತ್ತೆ ಉದ್ಭವ’ವನ್ನು ತೆರೆಗೆ ತಂದಿರುವುದರಿಂದ, “ಮತ್ತೆ ಉದ್ಭವ’, “ಉದ್ಭವ’ದ ಮುಂದುವರೆದ ಭಾಗ ಎನ್ನಲು ಅಡ್ಡಿಯಿಲ್ಲ. ಇನ್ನು ತಮ್ಮ ಹಿಂದಿನ ಉದ್ಭವ’ ಚಿತ್ರದಲ್ಲಿ ನಿರ್ದೇಶಕ ಕೋಡ್ಲು ರಾಮಕೃಷ್ಣ ಪ್ರಯೋಗಿಸಿದ್ದ ಸಾಮಾಜಿಕ ವಿಡಂಬನೆ, ಧರ್ಮ-ನಂಬಿಕೆಗಳ ವ್ಯಾಖ್ಯಾನ, ಮಠ-ಮಂದಿರಗಳ ಅಧಿಕಾರ ದುರುಪಯೋಗ, ರಾಜಕಾರಣ, ಹಿತಾಸಕ್ತಿಗಳ ಹೋರಾಟ ಮತ್ತೆ ಉದ್ಭದ’ದಲ್ಲಿ ಮುಂದುವರೆದಿದೆ. ಇಡೀ ಚಿತ್ರ ಜನಸಾಮಾನ್ಯರ ಧಾರ್ಮಿಕ ನಂಬಿಕೆ-ಆಚರಣೆಯ ಬಗ್ಗೆ ಗಂಭೀರ ವಿಷಯವನ್ನು ಚರ್ಚಿಸುತ್ತಲೇ, ನೋಡುಗರನ್ನು ನಗುವಿನೊಂದಿಗೆ ಕರೆದುಕೊಂಡು ಹೋಗುತ್ತದೆ. ಕೋಡ್ಲು ಅವರು ಕಥೆ ಕಟ್ಟಿರುವ ರೀತಿ. ಹಳೆಯ ಪಾತ್ರಗಳು ಮತ್ತು ಆಶಯದ ಜೊತೆಗೆ, ಹೊಸದನ್ನೂ ಅವರು ಚೆನ್ನಾಗಿ ಬ್ಲೆಂಡ್‌ ಮಾಡಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಾದ ಕೆಲವು ನೈಜ ಘಟನೆಗಳನ್ನು ಹೆಕ್ಕಿ ತೆಗೆದಿದ್ದಾರೆ. ಆ ಘಟನೆಗಳನ್ನು ಬೇರೆ ಬೇರೆ ಪಾತ್ರಗಳ ಮೂಲಕ ತೋರಿಸುತ್ತಾ ಹೋಗಿದ್ದಾರೆ. ಯಾವುದೇ ವ್ಯಕ್ತಿಯನ್ನು ಅವರು ಪಿನ್‌ ಪಾಯಿಂಟ್‌ ಮಾಡಿ ತೋರಿಸದಿದ್ದರೂ, ಪ್ರೇಕ್ಷಕರಿಗೆ ಎಲ್ಲವೂ ಸ್ಪಷ್ಟವಾಗುತ್ತಾ ಹೋಗುತ್ತದೆ. ಆ ಮಟ್ಟಿಗೆ ಬಹಳ ಬುದ್ಧಿವಂತಿಕೆಯಿಂದ ಕಥೆ ಹಣೆದಿದ್ದಾರೆ. ಇನ್ನು ಅದನ್ನು ತೆರೆಯ ಮೇಲೆ ಅಷ್ಟೇ ನೀಟ್‌ ಆಗಿ ತೋರಿಸಿದ್ದಾರೆ. ಕೆಲವು ದೃಶ್ಯಗಳು ಅನಗತ್ಯವೆನಿಸಿದರೂ, ಒಟ್ಟಾರೆ ಚಿತ್ರ ವೇಗವಾಗಿ ನೋಡಿಸಿಕೊಂಡು ಹೋಗುತ್ತದೆ. ಚಿತ್ರದ ಗುಣಮಟ್ಟದ ಬಗ್ಗೆ ನಿರ್ದೇಶಕರು ಕಾಳಜಿ ವಹಿಸಿದ್ದರೆ ಸಿನಿಮಾ ಮತ್ತಷ್ಟು ಚೆನ್ನಾಗಿ ಮೂಡಿಬರುತ್ತಿತ್ತು. ಕೆಲವು ದೃಶ್ಯಗಳು ಅನಗತ್ಯವೆನಿಸಿದರೂ, ಒಟ್ಟಾರೆ ಚಿತ್ರ ವೇಗವಾಗಿ ನೋಡಿಸಿಕೊಂಡು ಹೋಗುತ್ತದೆ.

ಚಿತ್ರದ ಕಥಾಹಂದರ, ನಿರೂಪಣೆ ಚೆನ್ನಾಗಿದ್ದರೂ, ಪ್ರಬುದ್ಧ ಪ್ರೇಕ್ಷಕರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಿರ್ದೇಶಕರು ಚಿತ್ರವನ್ನು ತೆರೆಗೆ ತಂದಂತಿದೆ. ಇನ್ನು ಇಡೀ ಚಿತ್ರದಲ್ಲಿ ತೆರೆಮೇಲೆ ಗಮನ ಸೆಳೆಯುವುದು ರಂಗಾಯಣ ರಘು, ನಾಯಕ ಪ್ರಮೋದ ಅಭಿನಯ. ಇಬ್ಬರೂ ತಮ್ಮ ಪಾತ್ರವನ್ನು ಪ್ರೇಕ್ಷಕರಿಗೆ ಎಲ್ಲೂ ಬೋರ್‌ ಹೊಡೆಸದಂತೆ ಕರೆದುಕೊಂಡು ಹೋಗುತ್ತಾರೆ. ಉಳಿದಂತೆ ಮಿಲನ ನಾಗರಾಜ, ಅವಿನಾಶ, ಮೋಹನ ಮೊದಲಾದ ಚಿತ್ರದ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಕಲಾವಿದರ ಬೃಹತ್‌ ದಂಡೇ ಇರುವುದರಿಂದ, ಚಿತ್ರದ ಬಹುತೇಕ ಪಾತ್ರಗಳಲ್ಲಿ ಪರಿಚಿತ ಕಲಾವಿದರೆ ಬಂದು ಹೋಗುತ್ತಾರೆ. ಚಿತ್ರದ ಛಾಯಾಗ್ರಹಣ ಮತ್ತು ಸಂಕಲನದ ಕಡೆಗೆ ನಿರ್ದೇಶಕರು ಹೆಚ್ಚಿನ ಗಮನ ಕೊಡಬಹುದಿತ್ತು. ಒಟ್ಟಿನಲ್ಲಿ ಕೆಲವೊಂದು ತರ್ಕ ಹಾಗೂ ತಪ್ಪುಗಳನ್ನು ಬದಿಗಿಟ್ಟು ನೋಡಿದರೆ ಮತ್ತೆ ಉದ್ಭವ’ ನೋಡುಗರಿಗೆ ಮಿನಿಮಮ್‌ ಮನರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ. „

 

-ಜಿ.ಎಸ್‌. ಕಾರ್ತಿಕ್‌ ಸುಧನ್‌

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.