Garadi movie review: ಕುಸ್ತಿ ಆಟ ಮತ್ತು ಪ್ರೇಮಪಾಠ


Team Udayavani, Nov 12, 2023, 9:02 AM IST

garadi movie review

ಗರಡಿ ಎಂದಾಗ ಮೊದಲು ನೆನಪಾಗುವುದು ಕುಸ್ತಿ ಕಾಳಗ. ದೇಸಿ ಕ್ರೀಡೆಯಾದ ಕುಸ್ತಿಯಲ್ಲಿ ಸೆಣಸುವವರ ನೆಚ್ಚಿನ ತಾಣ “ಗರಡಿ’. ನಿರ್ದೇಶಕ ಯೋಗರಾಜ್‌ ಭಟ್‌ ಇದೇ “ಗರಡಿ’ ಮನೆಯಲ್ಲಿ ಕುಸ್ತಿ ಕಾಳಗದ ಜೊತೆ ಪ್ರೇಮಯಾನವನ್ನು ಮಾಡಿಸಿದ್ದಾರೆ. ಆ ಮಟ್ಟಿಗೆ “ಗರಡಿ’ ಒಂದು ಪಕ್ಕಾ ಕಮರ್ಷಿಯಲ್‌ ಚಿತ್ರ. ಈ ವಾರ ತೆರೆಕಂಡಿರುವ “ಗರಡಿ’ ಚಿತ್ರದಲ್ಲಿ ಏನಿದೆ ಎಂದು ಕೇಳಿದರೆ ಮಾಸ್‌ಗೆ ಬೇಕಾದ ಭರ್ಜರಿ ಫೈಟ್‌, ಡೈಲಾಗ್‌, ಕ್ಲಾಸ್‌ಗೆ ಸೆಂಟಿಮೆಂಟ್‌, ಲವ್‌, ಕಾಮಿಡಿ, ಚೆಂದದ ಹಾಡುಗಳಿವೆ. ಈ ಮೂಲಕ “ಗರಡಿ’ಯಲ್ಲಿ ಎರಡೂ ವರ್ಗಗಳನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ ಭಟ್ಟರು.

ಲವ್‌ಸ್ಟೋರಿ, ಫ‌ನ್‌ ಸಿನಿಮಾಗಳನ್ನು ಮಾಡುವಲ್ಲಿ ಭಟ್ಟರು ಎತ್ತಿದ ಕೈ. ಆದರೆ, ಈ ಬಾರಿ ತಮ್ಮದಲ್ಲದ ಹೊಸ ಜಾನರ್‌ ಅನ್ನು ಕೈಗೆತ್ತಿಕೊಂಡು ಅದನ್ನು ಸಮರ್ಥವಾಗಿ ಕಟ್ಟಿಕೊಡುವಲ್ಲಿ ಭಟ್ಟರು ಯಶಸ್ವಿಯಾಗಿದ್ದಾರೆ. ಆ ಮೂಲಕ ಕ್ರೀಡೆ ಹಿನ್ನೆಲೆಯ “ಗರಡಿ’ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.

ಎಲ್ಲಾ ಓಕೆ, ಸಿನಿಮಾ ಕಥೆಯೇನು ಎಂದು ನೀವು ಕೇಳಬಹುದು. “ಗರಡಿ’ ಮನೆಯಲ್ಲೇ ಬೆಳೆದ ಹುಡುಗನೊಬ್ಬನಿಗೆ ಕುಸ್ತಿ ಕಲಿಯಲು ಅವಕಾಶ ಸಿಗುವುದಿಲ್ಲ. ಅದಕ್ಕೊಂದು ಕಾರಣವಿದೆ. ಹೀಗಿರುವಾಗ ಆ ಹುಡುಗ ಏನು ಮಾಡುತ್ತಾನೆ, ತನ್ನ ಆಸೆಯನ್ನು ಈಡೇರಿಸಿಕೊಂಡು ಜಯಿಸುತ್ತಾನಾ ಅಥವಾ ಬೇರೆ ಹಾದಿ ಹಿಡಿಯುತ್ತಾನಾ.. ಇದು ಸಿನಿಮಾದ ಮೂಲ ಅಂಶ. ಇದನ್ನು ಒಂದಷ್ಟು “ಪ್ರಭಾವಳಿ’ಯೊಂದಿಗೆ ಕಲರ್‌ಫ‌ುಲ್‌ ಆಗಿ ಕಟ್ಟಿಕೊಡಲಾಗಿದೆ.

ಈ ಹಾದಿಯಲ್ಲಿ ಮೋಸ, ದ್ವೇಷ, ಪ್ರೀತಿ, ಪ್ರೇಮ, ಹೊಡೆದಾಟ ಎಲ್ಲವೂ ಬಂದು ಹೋಗುತ್ತದೆ. ಕ್ರೀಡೆ ಹಿನ್ನೆಲೆಯ ಸಿನಿಮಾ ಎಂದಾಕ್ಷಣ ಅದನ್ನು ಗಂಭೀರವಾಗಿಯೇ ಹೇಳಿದರೆ ಪ್ರೇಕ್ಷಕರಿಗೆ ಬೋರ್‌ ಆಗಬಹುದು ಎಂಬ ಅರಿವು ಭಟ್ಟರಿಗೆ ಚೆನ್ನಾಗಿಯೇ ಇದ್ದ ಕಾರಣ ಅಲ್ಲಲ್ಲಿ ಕಲರ್‌ಫ‌ುಲ್‌ ಹಾಡು, ಡೈಲಾಗ್‌ ಹಾಗೂ ಫ‌ನ್‌ ಅಂಶಗಳನ್ನು ಸೇರಿಸಿದ್ದಾರೆ.

ಮೊದಲರ್ಧ ಎಲ್ಲಾ ಸಿನಿಮಾಗಳಂತೆ ಪಾತ್ರ, ಪರಿಚಯ ಸೇರಿದಂತೆ ಇತರ ಅಂಶಗಳೊಂದಿಗೆ ಸಾಗುತ್ತದೆ. ಆದರೆ, ಸಿನಿಮಾದ ಕಥೆ ಹಾಗೂ ಟ್ವಿಸ್ಟ್‌-ಟರ್ನ್ಗಳು ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಈ ಮೂಲಕ ಪ್ರೇಕ್ಷಕರ ಕುತೂಹಲ ಕೂಡಾ ತೆರೆದುಕೊಳ್ಳುತ್ತದೆ. ಇನ್ನು ಸಿನಿಮಾದ ಹೈಲೈಟ್‌ಗಳಲ್ಲಿ ದರ್ಶನ್‌ ಅವರ ಎಂಟ್ರಿ ಕೂಡಾ ಒಂದು. ಸಖತ್‌ ರಗಡ್‌ ಎಂಟ್ರಿ ಮೂಲಕ ಮಾಸ್‌ ಪ್ರೇಕ್ಷಕರಿಗೆ ಖುಷಿ ನೀಡುತ್ತಾರೆ. ಅವರ ಎಂಟ್ರಿಗೊಂದು ಕಾರಣವಿದೆ. ಅದನ್ನು ತೆರೆಮೇಲೆಯೇ ನೋಡಿದರೆ ಚೆಂದ.

ನಾಯಕ ಯಶಸ್‌ ಸೂರ್ಯ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿ ಮತ್ತೂಮ್ಮೆ ಭರವಸೆ ಮೂಡಿಸಿದ್ದಾರೆ. ಗರಡಿ ಮನೆಯಲ್ಲಿ ಬೆಳೆದ ಹುಡುಗನಿಂದ ಹಿಡಿದು ಹುಡುಗಿ ಹಿಂದೆ ಬೀಳುವ ಲವರ್‌ಬಾಯ್‌ ಶೇಡ್‌ನ‌ಲ್ಲೂ ಯಶಸ್‌ ಇಷ್ಟವಾಗುತ್ತಾರೆ. ನಾಯಕಿ ಸೋನಾಲ್‌ ಪಾತ್ರಕ್ಕೊಂದು ತೂಕವಿದೆ. ಗರಡಿ ಮನೆಯ ಗುರುವಾಗಿ ನಟಿಸಿರುವ ಬಿ.ಸಿ.ಪಾಟೀಲ್‌ ಪಾತ್ರದ ತೂಕ ಹೆಚ್ಚಿಸಿದ್ದಾರೆ. ಅವರ ಖಡಕ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಉಳಿದಂತೆ ರವಿಶಂಕರ್‌, ಸುಜಯ್‌ ಸೇರಿದಂತೆ ಇತರರು ನಟಿಸಿದ್ದಾರೆ. ಹಾಡೊಂದರಲ್ಲಿ ನಿಶ್ವಿ‌ಕಾ ನಾಯ್ಡು ಬೋಲ್ಡ್‌ ಸ್ಟೆಪ್‌ ಹಾಕಿದ್ದಾರೆ.

 ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

Gopilola Movie Review

Gopilola Movie Review: ಹೆಣ್ಣು ಮಣ್ಣಿನ ಮಧ್ಯೆ ಗೋಪಿ ಆಟ

Bhairadevi Review; ಅಘೋರಿ ಹಿಂದೆ ಘೋರ ಕಥನ

Bhairadevi Review; ಅಘೋರಿ ಹಿಂದೆ ಘೋರ ಕಥನ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.