ಒಳ್ಳೆಯ ಉದ್ದೇಶ ಪ್ರಯತ್ನ ವಿಫ‌ಲ


Team Udayavani, Nov 3, 2018, 11:12 AM IST

kannada-deshadol.jpg

ಅಚಾನಕ್ಕಾಗಿ ಸಿಗುವ “ಕನ್ನಡ ದೇಶದೊಳ್‌’ ಎಂಬ ಪುರಾತನ ತಾಳೆಗರಿ ಗ್ರಂಥದಲ್ಲಿ ಕನ್ನಡ ನಾಡು-ನುಡಿ, ಜನ-ಮನಕ್ಕೆ ಸಂಬಂಧಿಸಿದ ಹತ್ತಾರು ಸಂಗತಿಗಳು ಅಡಕವಾಗಿರುತ್ತದೆ. ಈ ನಿಗೂಢ ಸಂಗತಿಗಳ ಅಧ್ಯಯನಕ್ಕೆ ಇಳಿಯುವ ಕನ್ನಡ ಸಂಶೋಧಕ ಒಂದೊಂದೆ ದೃಶ್ಯದಲ್ಲಿ ಗ್ರಂಥದ ಅಸಲಿಯತ್ತನ ತೆರೆದಿಡುತ್ತಾ ಹೋಗುತ್ತಾನೆ. ಇದರ ನಡುವೆಯೇ ಕರ್ನಾಟಕವನ್ನು ಕಣ್ತುಂಬಿಕೊಳ್ಳಲು ಇಂಗ್ಲೆಂಡ್‌ನಿಂದ ಬರುವ ಪ್ರವಾಸಿ ಜೋಡಿಯೊಂದಕ್ಕೆ, ಆಟೋರಿಕ್ಷಾ ಚಾಲಕನೊಬ್ಬ ಜೊತೆಯಾಗುತ್ತಾನೆ.

ಅವನೊಂದಿಗೆ ಆಟೋರಿಕ್ಷಾ ಏರುವ ವಿದೇಶಿಗರಿಗೆ, ಆ ಚಾಲಕ ಪ್ರಯಾಣದ ನಡುವೆಯೇ ಕರ್ನಾಟಕ ದರ್ಶನ ಮಾಡಿಸುತ್ತಾನೆ! ಮತ್ತೂಂದೆಡೆ ಕನ್ನಡ ಪರವಾಗಿ ಹೋರಾಟ ಮಾಡುವ ಯುವಕನೊಬ್ಬ ಕನ್ನಡಕ್ಕಾಗಿ ಕೈ ಎತ್ತಿದಾಗಲೆಲ್ಲ, ಒದೆ ತಿನ್ನುತ್ತಿರುತ್ತಾನೆ. ಯಾಕೆ ಹೀಗಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಬೀದರ್‌ನಿಂದ ಚಾಮರಾಜನಗರ, ಕಾರವಾರದಿಂದ ಕೋಲಾರದವರೆಗೆ ಇಡೀ ಕರ್ನಾಟಕ ತೆರೆಮೇಲೆ ಬಂದು ಹೋಗಿರುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಕನ್ನಡ ದೇಶದೊಳ್‌’ ಚಿತ್ರದ ಸಂಕ್ಷಿಪ್ತ ಚಿತ್ರಣ. 

ಸುಮಾರು ಮೂರು ವರ್ಷಗಳಿಂದ ಕಾರು, ಬಸ್ಸು, ಆಟೋರಿಕ್ಷಾಗಳ ಮೇಲೆ ರಾರಾಜಿಸುತ್ತಿದ್ದ “ಕನ್ನಡ ದೇಶದೊಳ್‌’ ಎಂಬ ಶೀರ್ಷಿಕೆ ಚಲನಚಿತ್ರಕ್ಕೆ ಸಂಬಂಧಿಸಿದ್ದು, ಎಂದು ಪ್ರೇಕ್ಷಕರಿಗೆ ಗೋತ್ತಾಗುವ ಮುನ್ನವೇ, ಚಿತ್ರ ತೆರೆಗೆ ಬಂದಿದೆ. ಇಡೀ ಚಿತ್ರದಲ್ಲಿ ಕನ್ನಡನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಚಿತ್ರಣವನ್ನು ಚಿತ್ರದ ಮೂಲಕ ತೆರೆಮೇಲೆ ತಂದಿರುವ ಚಿತ್ರತಂಡದ ಉದ್ದೇಶ ಉತ್ತಮವಾಗಿದ್ದರೂ, ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಅದರಲ್ಲೂ ಕನ್ನಡ ಎಂದರೆ ಅದರ ಹಿಂದೆ ನೂರಾರು ಸಂಗತಿಗಳು ಎಳೆಎಳೆಯಾಗಿ ತೆರೆದುಕೊಳ್ಳುತ್ತವೆ.

ಅನುಭವಕ್ಕೆ ಬರುವ, ತರ್ಕಕ್ಕೆ ನಿಲುಕದ ಅದೆಷ್ಟೋ ಅಸಂಗತ ಸತ್ಯಗಳಿರುತ್ತವೆ. ಇಂದಿಗೂ ಚರ್ಚೆಯಾಗುತ್ತಿರುವ ಅಸಂಖ್ಯಾತ ಸಂಕೀರ್ಣ, ಸೂಕ್ಷ್ಮ ಸಂವೇದನೆಗಳಿವೆ. ಅವೆಲ್ಲವನ್ನೂ ಚಲನಚಿತ್ರದ ಮೂಲಕ ಎರಡೂವರೆ ಗಂಟೆಗಳಲ್ಲಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಎಡವಿದ್ದಾರೆ. ಅದರಲ್ಲೂ ಚಲನಚಿತ್ರ ಎಂಬುದಕ್ಕೆ ಅದರದ್ದೇ ಆದ ವ್ಯಾಕರಣವಿರುತ್ತದೆ. ಅಲ್ಲಿ ಎಷ್ಟು ವಾಸ್ತವ, ಸತ್ಯ ಸಂಗತಿಗಳನ್ನು ಚಿತ್ರಿಸುತ್ತೀರಿ ಎನ್ನುವುದಕ್ಕಿಂತ, ಎಷ್ಟು ಪರಿಣಾಮಕಾರಿಯಾಗಿ ನಿರೂಪಿಸುತ್ತೀರಿ ಎಂಬುದೇ ಮುಖ್ಯವಾಗುತ್ತದೆ.

ಸ್ವಲ್ಪ ವ್ಯಾಕರಣ ತಪ್ಪಿದರೂ, ಚಲನಚಿತ್ರ ಎಂಬುದು ಸಾಕ್ಷ್ಯಚಿತ್ರ ಎನ್ನುವ ಹಣೆಪಟ್ಟಿಕಟ್ಟಿಕೊಳ್ಳುವ ಅಪಾಯವಿರುತ್ತದೆ. ಜೊತೆಗೆ ಈ ತರಹದ ಕಥೆಗಳನ್ನು ಚಿತ್ರವಾಗಿ ನೋಡಬೇಕೆ, ಚರ್ಚೆಯಾಗಿ ನೋಡಬೇಕೆ ಎಂಬ ಗೊಂದಲಗಳಿಗೆ ಉತ್ತರವೇ ಸಿಗುವುದಿಲ್ಲ. ಇನ್ನು “ಕನ್ನಡ ದೇಶದೊಳ್‌’ ಚಿತ್ರದ ನಿರೂಪಣೆ, ಕಲಾವಿದರ ಅಭಿನಯ ಯಾವುದೂ ಪ್ರೇಕ್ಷಕರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯುವುದಿಲ್ಲ. ಕನ್ನಡದ ಹೆಸರಿನಲ್ಲಿ ಕೆಲವು ದೃಶ್ಯಗಳು ಮತ್ತು ಪಾತ್ರಗಳ ಅತಿಯಾದ ವೈಭವೀಕರಣ, ಕೆಲವು ಕಡೆಗಳಲ್ಲಿ ನೋಡುಗರನ್ನು ನಗಿಸಲೇಬೇಕೆಂಬ ನಿರ್ದೇಶಕರ ಹಠ ಚಿತ್ರವನ್ನು ಹಳಿ ತಪ್ಪಿಸಿದೆ. ಇಡೀ ಕರ್ನಾಟಕವನ್ನು ತೆರೆಮೇಲೆ ತೋರಿಸುವ ಉತ್ಸಾಹದಲ್ಲಿ ಚಿತ್ರತಂಡ ಚಿತ್ರಕಥೆಯ ಕಡೆಗೆ ಗಮನಕೊಟ್ಟಿಲ್ಲ.

ಚಿತ್ರ: ಕನ್ನಡ ದೇಶದೊಳ್‌
ನಿರ್ದೇಶನ: ಅವಿರಾಮ್‌ ಕಂಠೀರವ
ನಿರ್ಮಾಣ: ಜೆ.ಎಸ್‌.ಎಂ ಪ್ರೊಡಕ್ಷನ್ಸ್‌, 
ತಾರಾಗಣ: ಸುಚೇಂದ್ರ ಪ್ರಸಾದ್‌, ತಾರಕ್‌ ಪೊನ್ನಪ್ಪ, ಜೆನ್‌ ವೋಲ್ಕೋವಾ, ಹರೀಶ್‌ ಅರಸು, ನಜØರ್‌ ಅಲಿ, ಟೆನ್ನಿಸ್‌ ಕೃಷ್ಣ, ವೈಜನಾಥ್‌ ಬಿರಾದಾರ್‌, ಸನತ್‌, ಶಿವು ಇತರರು. 

* ಜಿ.ಎಸ್‌ ಕಾರ್ತಿಕ ಸುಧನ್‌ 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ibbani tabbida ileyali movie review

Ibbani Tabbida Ileyali Review; ತಾಜಾ ಪ್ರೀತಿಯ ಭಾವ ಲಹರಿ

My Hero Movie Review

My Hero Movie Review; ಸೂಕ್ಷ್ಮ ಸಂದೇಶದ ಆಪ್ತ ಸಿನಿಮಾ

Taekwondo girl Review

Taekwondo girl Review; ಹಠದಲ್ಲಿ ಅರಳಿದ ಪ್ರತಿಭೆ

Laughing Buddha Review; ಬುದ್ಧನ ಕಾಮಿಡಿ ಪುರಾಣ

Laughing Buddha Review; ಬುದ್ಧನ ಕಾಮಿಡಿ ಪುರಾಣ

pepe movie review

Pepe Movie Review: ತೊರೆಯಲ್ಲಿ ಹರಿದ ನೆತ್ತರ ಕಥೆಯಿದು…

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.