Gowri Movie Review; ಪ್ರೀತಿ-ಪ್ರತಿಭೆಗಳ ಸಂಗಮ


Team Udayavani, Aug 16, 2024, 10:38 AM IST

gowri

ಸಾಧಕರ ಪಯಣ ಎಂದೂ ಸುಲಭದ್ದಾಗಿರುವುದಿಲ್ಲ. ಅಲ್ಲಿ ನೂರಾರು ಅಡೆ-ತಡೆ, ಏಳು-ಬೀಳು ಎಲ್ಲವೂ ಇರುತ್ತದೆ. ಎಲ್ಲ ಮಿತಿಗಳನ್ನು ಮೀರಿ ಸಾಧಿಸುವುದರ ಜತೆಗೆ ಮತ್ತೂಬ್ಬರಿಗೆ ಪ್ರೇರಣೆಯಾಗುವುದು ಜೀವನದ ಸಾರ್ಥಕ ಕ್ಷಣವೆನ್ನಬಹುದು. ಇದೇ ಅಂಶವನ್ನಿಟ್ಟುಕೊಂಡು ತೆರೆಕಂಡ ಸಿನಿಮಾ “ಗೌರಿ’

ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳದೆ, ತನ್ನ ನ್ಯೂನತೆಯನ್ನು ಮೀರಿ ಹಿರಿದಾದ ಗುರಿ ಸಾಧಿಸಲು ಹೊರಡುವ ನಾಯಕ ಒಂದೆಡೆ ಯಾದರೆ, ತನ್ನ ಪ್ರಿಯಕರನ ಕೊನೆ ಯಾಸೆ ಪೂರೈಸು ವುದರಲ್ಲೇ ವ್ಯಸ್ಥಳಾ ಗುವ ನಾಯಕಿ ಇನ್ನೊಂ ದೆಡೆ. ಇವರಿಬ್ಬರ ಭೇಟಿ ಆಕಸ್ಮಿಕ. ನಾಯಕನ ಬಾಳಲ್ಲಿ ಎದುರಾಗುವ ಸನ್ನಿವೇಶ, ನಾಯಕಿಯ ಜೀವನದಲ್ಲಾದ ವಿಷಾದದ ಘಟನೆ ಹೀಗೆ ಕಥೆ ಸಾಗುತ್ತದೆ. ಅಂತಿಮವಾಗಿ ಇಬ್ಬರೂ ಸೇರಿ ಹೊಸ ಸಾಧನೆಯ ಮುನ್ನುಡಿ ಬರೆಯುತ್ತಾರೆ. ಅದೇನೆಂದು ನೀವು ಸಿನಿಮಾ ನೋಡಿಯೇ ತಿಳಿಯಬೇಕು.

ಸಂಗೀತ ಲೋಕದ ಕಾಣದ ಮುಖವೊಂದು ಇಲ್ಲಿ ಅನಾವರಣಗೊಂಡಿರುವುದು, ಪ್ರೇಕ್ಷಕನ ಮನಸ್ಸು ತಟ್ಟುತ್ತದೆ. ಚಿತ್ರದಲ್ಲಿ ಒಂದಿಷ್ಟು ನೈಜ ಘಟನೆಗಳು ಅಡಕವಾಗಿವೆ. ಸಾಧಿಸುವವನಿಗೆ ಯಾವುದೂ ಅಡ್ಡಿಯಲ್ಲ ಎಂಬ ಧ್ಯೇಯವನ್ನು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಇಲ್ಲಿ ಪ್ರಬಲವಾಗಿ ಬಿಂಬಿಸಿದ್ದಾರೆ. ಸರಳ ಕಥೆಯಲ್ಲೇ ಅನೇಕ ವಿಶೇಷತೆಗಳನ್ನು ನಿರ್ದೇಶಕರು ಇಲ್ಲಿ ತೋರಿಸಿದ್ದಾರೆ. ವರ್ಣರಂಜಿತ ನಿರೂಪಣಾ ಶೈಲಿ ಸಿನಿಮಾದ ಹೈಲೈಟ್‌ ಎನ್ನಬಹುದು

ನಾಯಕ ನಟನಿಗಿರಬೇಕಾದ ಸಾಮರ್ಥ್ಯ ಹೊಂದಿರುವ ಸಮರ್ಜಿತ್‌ ಲಂಕೇಶ್‌, ತಮ್ಮ ಚೊಚ್ಚಲ ಚಿತ್ರದಲ್ಲೇ ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮಗನ ನಟನೆಗೆ ತಂದೆಯೇ ಆ್ಯಕ್ಷನ್‌-ಕಟ್‌ ಹೇಳಿರುವುದು ವಿಶೇಷವಾಗಿದ್ದು, ಅಪ್ಪ-ಮಗನ ಜೋಡಿ ಚಿತ್ರದ ತೂಕ ಹೆಚ್ಚಿಸಿದೆ.

ಇನ್ನೂ ಭರವಸೆಯ ಹೆಜ್ಜೆಯೊಂದಿಗೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಾನ್ಯಾ ಅಯ್ಯರ್‌, ಪ್ರಬುದ್ಧ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪತ್‌ ಕುಮಾರ್‌ ಹಾಗೂ ಮಾನಸಿ ಸುಧೀರ್‌ ಅವರ ನಟನೆ ಗಮನ ಸೆಳೆಯುತ್ತದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ಬಂದು ಹೋಗುವ ಪ್ರಿಯಾಂಕಾ ಉಪೇಂದ್ರ, ಮುಖ್ಯಮಂತ್ರಿ ಚಂದ್ರು, ಯೋಗೇಶ್‌, ಸುಚೇಂದ್ರ ಪ್ರಸಾದ್‌ ರಿಕ್ಕಿ ಕೇಜ್‌, ಸಂಜನಾ ಆನಂದ್‌, ಅಕುಲ್‌ ಬಾಲಾಜಿ ಈ ತಾರಾ ಕಲಾವಿದರ ಅತಿಥಿ ಪಾತ್ರಗಳು ಸಿನಿಮಾವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.

ಸಂಗೀತವೇ ಚಿತ್ರದ ಮೂಲ ವಸ್ತು ವಿಷಯವಾದ್ದರಿಂದ, ಇಲ್ಲಿನ ಹಾಡುಗಳು ಹೊಸ ಇಂಪು ತಂದಿವೆ. ಎ.ವಿ. ಕೃಷ್ಣ ಕುಮಾರ್‌ ಅವರ ಛಾಯಾಗ್ರಹಣದಲ್ಲಿ ಚಿತ್ರದ ದೃಶ್ಯಗಳು ಸುಂದರ. ಚಿತ್ರದ ಅಂತ್ಯಕ್ಕೆ ಪ್ರೇಕ್ಷಕರಲ್ಲಿ ಸ್ಫೂ³ರ್ತಿಯ ಛಾಯೆ ಅರಳುವುದಂತೂ ಖಂಡಿತ.

ನಿತೀಶ ಡಂಬಳ

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shalivahana Shake Movie Review

Shalivahana Shake Movie Review: ಟೈಮ್‌ ಲೂಪ್‌ ಕಥೆಯ ʼಶಾಲಿವಾಹನ ಶಕೆ’

Vikasa Parva Movie Review

Vikasa Parva Movie Review: ಜೀವನ ಪಾಠದ ‘ವಿಕಾಸ ಯಾತ್ರೆ’

kaalapatthar

Kaalapatthar movie review: ಶಿಲೆಯ ಸುತ್ತದ ಸೆಳೆತವಿದು..

Ronny

Ronny Movie Review: ಬಣ್ಣದ ಕನಸಿಗೆ ರಕ್ತ ಲೇಪನ

ibbani tabbida ileyali movie review

Ibbani Tabbida Ileyali Review; ತಾಜಾ ಪ್ರೀತಿಯ ಭಾವ ಲಹರಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.