Hostel Hudugaru Bekagiddare Review; ಹುಡುಗರ ಜಾಲಿರೈಡ್‌


Team Udayavani, Jul 22, 2023, 11:56 AM IST

Hostel hudugaru bekagiddare review

ಕೆಲವು ಸಿನಿಮಾಗಳ ಪರಮ ಉದ್ದೇಶ ಪ್ರೇಕ್ಷಕರನ್ನು ನಗಿಸಬೇಕು, ಹೆಚ್ಚು ಆಲೋಚಿಸಲು ಅವಕಾಶ ಕೊಡದೇ ನಗೆಬುಗ್ಗೆಯೊಂದಿಗೆ ಕಚಗುಳಿ ಇಡುತ್ತಲೇ ಸಾಗಬೇಕು ಎಂಬುದು. ಇಂತಹ ಸಿನಿಮಾಗಳನ್ನು ಪ್ರೇಕ್ಷಕ ಕೂಡಾ ಎಂಜಾಯ್‌ ಮಾಡುವುದರಲ್ಲಿ ಎರಡು ಮಾತಿಲ್ಲ. ಸದ್ಯ “ನಗೆಹಬ್ಬ’ವನ್ನು ಹಮ್ಮಿಕೊಂಡಿರುವುದು “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರ.

ಈ ವಾರ ತೆರೆಕಂಡಿರುವ ಈ ಚಿತ್ರದಲ್ಲಿ ಏನಿದೆ ಎಂದರೆ ಒಂದು ಜಾಲಿರೈಡ್‌ ಇದೆ, ಪಕ್ಕಾ ತರೆಲ ಹುಡುಗರ ಜೊತೆ ಒಂದು ಲಾಂಗ್‌ಟ್ರಿಪ್‌ ಹೋದಾಗ ಸಿಗುವಂತಹ ಖುಷಿ, ಮಜ ಈ ಚಿತ್ರದಲ್ಲಿದೆ. ಆ ಮಟ್ಟಿಗೆ “ಹಾಸ್ಟೆಲ್‌ ಹುಡುಗರ ಬೇಕಾಗಿದ್ದಾರೆ’ ಒಂದು ಫ‌ನ್‌ರೈಡ್‌.

ಹೆಸರಿಗೆ ತಕ್ಕಂತೆ ಇದು ಹಾಸ್ಟೆಲ್‌ನಲ್ಲಿ ನಡೆಯುವ ಕಥೆ. ಒಂದು ರಾತ್ರಿಯೊಳಗೆ ನಡೆಯುವ ಕಥೆಯಲ್ಲಿ ಕಾಮಿಡಿ ತುಂಬಿ ತುಳುಕಿದೆ. ಹಾಸ್ಟೆಲ್‌ ಹುಡುಗರ ತರೆಲ ತಾಪತ್ರಯ, ಅವರು ಮಾಡುವ ಕಿತಾಪತಿ, ಅದರಿಂದ ಎದುರಾಗುವ ತೊಂದರೆ, ತರೆಲ ಹುಡುಗರಿಗೆ ಸಿಗುವ ಖಡಕ್‌ ವಾರ್ಡನ್‌, ಅವರ ನಡುವಿನ ಜಗಳ, ಜೊತೆಗೆ ಶಾರ್ಟ್‌ μಲಂ ಮಾಡಲು ಹೊರಟವನಿಂದ ಆಗುವ ಅವಾಂತರ… ಇವೆಲ್ಲವೂ “ಹುಡುಗರ’ ಕಥೆಯನ್ನು ಚೆಂದಗಾಣಿಸಿದೆ. ಆರಂಭದಿಂದ ಕೊನೆಯವರೆಗೂ ಸಾಗಿಬರುವ ಹುಡುಗರ ತರೆಲ ತಮಾಷೆಗಳೇ ಈ ಸಿನಿಮಾದ “ಮೂಲ ವಸ್ತು’.

ಇತ್ತೀಚೆಗೆ ಬರುವ ಹೊಸಬರ ಸಿನಿಮಾಗಳು ಸಿದ್ಧಸೂತ್ರಗಳನ್ನು ಬದಿಗೊತ್ತಿ ಹೊಸ ನಿರೂಪಣೆಯಲ್ಲಿ ಸಾಗುತ್ತವೆ. ಹಾಸ್ಟೆಲ್‌ ಹುಡುಗರದ್ದು ಕೂಡಾ ಇದೇ ಹಾದಿ. ಸಿನಿಮಾದ ತುಂಬಾ ಮಾತು ತುಂಬಿಕೊಂಡಿದೆ. ಹಾಗಾಗಿ, ಸಂಭಾಷಣೆ ಕೂಡಾ ಈ ಚಿತ್ರದ ಒಂದು “ಶಕ್ತಿಕೇಂದ್ರ’ ಎನ್ನಬಹುದು. ಇಂದಿನ ಯುವಕರನ್ನು ಗಮನದಲ್ಲಿಟ್ಟುಕೊಂಡು ಬರೆದಿರುವ ಸಂಭಾಷಣೆ ಆಗಾಗ “ಡಬಲ್‌’ ಆಗುತ್ತದೆ!

ಚಿತ್ರದಲ್ಲಿ ರಮ್ಯಾ, ರಿಷಭ್‌ ಕೂಡಾ ಕಾಣಿಸಿಕೊಂಡಿದ್ದಾರೆ. ಅದು ಹೇಗೆ ಎಂಬ ಕುತೂಹಲಕ್ಕೆ ಚಿತ್ರಮಂದಿರದಲ್ಲಿ ಉತ್ತರ ಸಿಗಲಿದೆ. ಉಳಿದಂತೆ ಪ್ರಜ್ವಲ್‌, ಮಂಜುನಾಥ್‌ ನಾಯಕ್‌, ಚೇತನ್‌ ದುರ್ಗ ಸೇರಿ ಚಿತ್ರದಲ್ಲಿ ಸಿಕ್ಕಾಪಟ್ಟೆ ಪಾತ್ರಗಳು ಬಂದು ಹೋಗುತ್ತವೆ. ಒಂದಕ್ಕಿಂತ ಒಂದು “ವಿಭಿನ್ನ’. ಎಲ್ಲಾ ಟೆನ್ಶನ್‌ ಗಳನ್ನು ಬದಿಗಿಟ್ಟು, ಲಾಜಿಕ್‌ ಹುಡುಕದೇ ಸುಖಾಸುಮ್ಮನೆ ಬಾಯ್ತುಂಬ ನಕ್ಕು ಬರಬೇಕೆಂದುಕೊಂಡವರಿಗೆ “ಹುಡುಗರು’ ಒಳ್ಳೆಯ ಆಯ್ಕೆ.

ಆರ್‌.ಪಿ

ಟಾಪ್ ನ್ಯೂಸ್

Threats: ವಡೋದರಾ, ರಾಜ್‌ಕೋಟ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ, ಹೈ ಅಲರ್ಟ್

Threats: ವಡೋದರಾ, ರಾಜ್‌ಕೋಟ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ, ಹೈ ಅಲರ್ಟ್

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Mysore Dasara: ನೆನಪುಗಳ ಹಂದರ ನಮ್ಮೂರ ದಸರಾ- ಅರಮನೆ ನಗರಿ ಮೈಸೂರಿನ ಬೀದಿಯಿಂದ…

Mysore Dasara: ನೆನಪುಗಳ ಹಂದರ ನಮ್ಮೂರ ದಸರಾ- ಅರಮನೆ ನಗರಿ ಮೈಸೂರಿನ ಬೀದಿಯಿಂದ…

7-gundlupete

Gundlupete: ಬ್ರೇಕ್ ಫೇಲ್ ಆದ ಪರಿಣಾಮ ಲಾರಿ ಪಲ್ಟಿ: ಚಾಲಕನಿಗೆ ತೀವ್ರ ಗಾಯ

Raichur: ಜಾತಿಗಣತಿ ತಕ್ಷಣಕ್ಕೆ ಜಾರಿಯಿಲ್ಲ, ಬರೀ ಚರ್ಚೆಯಷ್ಟೇ: ಸಿಎಂ ಸಿದ್ದರಾಮಯ್ಯ

Raichur: ಜಾತಿಗಣತಿ ತಕ್ಷಣಕ್ಕೆ ಜಾರಿಯಿಲ್ಲ, ಬರೀ ಚರ್ಚೆಯಷ್ಟೇ: ಸಿಎಂ ಸಿದ್ದರಾಮಯ್ಯ

6-kadaba

Kadaba: ಕಾರು – ಬೈಕ್‌ ಅಪಘಾತ; ಸವಾರ ಮೃತ್ಯು

Jammu-Kashmir: ಇಬ್ಬರು ಉಗ್ರರ ಹತ್ಯೆ… ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ

Jammu-Kashmir: ಇಬ್ಬರು ಉಗ್ರರ ಹತ್ಯೆ… ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gopilola Movie Review

Gopilola Movie Review: ಹೆಣ್ಣು ಮಣ್ಣಿನ ಮಧ್ಯೆ ಗೋಪಿ ಆಟ

Bhairadevi Review; ಅಘೋರಿ ಹಿಂದೆ ಘೋರ ಕಥನ

Bhairadevi Review; ಅಘೋರಿ ಹಿಂದೆ ಘೋರ ಕಥನ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Nite Road Movie Review:

Nite Road Movie Review: ಪಾಪ ಕರ್ಮಗಳ ಲೆಕ್ಕಾಚಾರ!

Sanju Movie Review

Sanju Movie Review: ಪ್ರೀತಿ ಪಯಣದಲ್ಲೊಂದು ವಿಷ ಘಳಿಗೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

9-bng

Bengaluru: 2.5 ಕೋಟಿ ರೂ. ಮೌಲ್ಯದ ಕೆರೆ ಒತ್ತುವರಿ ಜಾಗ ತೆರವು ಕಾರ್ಯಾಚರಣೆ

Threats: ವಡೋದರಾ, ರಾಜ್‌ಕೋಟ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ, ಹೈ ಅಲರ್ಟ್

Threats: ವಡೋದರಾ, ರಾಜ್‌ಕೋಟ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ, ಹೈ ಅಲರ್ಟ್

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

8-bng

Bengaluru: ಚರ್ಚ್‌ ಸ್ಟ್ರೀಟ್‌ ನಲ್ಲಿದ್ದ 50 ಅನಧಿಕೃತ ಅಂಗಡಿ ತೆರವು

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.