Kaalapatthar movie review: ಶಿಲೆಯ ಸುತ್ತದ ಸೆಳೆತವಿದು..


Team Udayavani, Sep 14, 2024, 11:22 AM IST

kaalapatthar

ಹೊಸ ಬಗೆಯ ಕಥೆ ಮೂಲಕ ಪ್ರೇಕ್ಷಕರನ್ನು ಸೆಳೆಯಬೇಕೆಂಬ ಹಂಬಲ ಸಿನಿಮಾ ಮಂದಿಯದ್ದು. ಅದರಲ್ಲೂ ಹೊಸ ನಿರ್ದೇಶಕರಲ್ಲಿ ಆ ತುಡಿತ ಹೆಚ್ಚು. ಈ ವಿಷಯದಲ್ಲಿ ನಿರ್ದೇಶಕ ವಿಕ್ಕಿ ಕೂಡಾ ಒಂದು ಹೊಸ ಪ್ರಯತ್ನ ಮಾಡಿದ್ದಾರೆ. ಅದು “ಕಾಲಾಪತ್ಥರ್‌’ ಮೂಲಕ. ಈ ವಾರ ತೆರೆಕಂಡಿರುವ ಈ ಸಿನಿಮಾದಲ್ಲಿ ಒಂದಷ್ಟು ಹೊಸ ಬಗೆಯ ವಿಚಾರದ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುವ ಪ್ರಯತ್ನ ಮಾಡಿದ್ದಾರೆ ವಿಕ್ಕಿ.

ಚಿತ್ರದ ಬಗ್ಗೆ ಹೇಳಬೇಕಾದರೆ ಇಲ್ಲೊಬ್ಬ ಯೋಧನಿದ್ದಾನೆ, ಅಣ್ಣಾವ್ರ ಅಭಿಮಾನವಿದೆ, ಕಪ್ಪು ಶಿಲೆಯ ಪುತ್ಥಳಿ ಇದೆ, ಊರ ಮಂದಿಯ ಹೆಮ್ಮೆ ಇದೆ, ಜೊತೆಗೆ ಆತಂಕವೂ ಇದೆ, ಉರಿದುಬೀಳುವ ಎಂಎಲ್‌ಎ ಇದ್ದಾನೆ.. ಈ ಎಲ್ಲಾ ಅಂಶಗಳ ಒಟ್ಟು ಸಮ್ಮಿಲನವೇ ಕಾಲಾಪತ್ಥರ್‌. ಇಲ್ಲಿ ನಾಯಕ ಸೇನಾನಿ. ಎದುರಾಳಿಗಳನ್ನು ಸದೆಬಡಿದು ದೇಶಾದ್ಯಂತ ಖ್ಯಾತಿ ಪಡೆದು ಊರಿಗೆ ಮರಳುವ ಹೆಮ್ಮೆಯ ಮಗ. ಊರ ಜನರ ಪ್ರೀತಿಯ ಪ್ರತೀಕವಾಗಿ ಪುತ್ಥಳಿ. ಅಲ್ಲಿಂದ ಸಮಸ್ಯೆ ಶುರು. ಅದೇನು ಎಂಬುದನ್ನು ತೆರೆಮೇಲೆಯೇ ನೋಡಿ.

ಈ ಸಿನಿಮಾದಲ್ಲಿ ಮನಸ್ಸಿಗೆ ಆಪ್ತವಾಗುವ ಹಲವು ಅಂಶಗಳಿವೆ. ಮುಖ್ಯವಾಗಿ ಡಾ.ರಾಜ್‌ಕುಮಾರ್‌ ಮೇಲಿನ ನಾಯಕ ಅಭಿಮಾನ. ರಾಜ್‌ಕುಮಾರ್‌ ಹಾಡುಗಳನ್ನು ಹಾಡುತ್ತಾ, ಅವರ ಫೋಟೋ ಇಟ್ಟು ಅಭಿಮಾನಿಸುತ್ತಾ, ತನ್ನ ಮನಸ್ಸಿನ ವಿಚಾರಗಳನ್ನು ಅವರಲ್ಲಿ ಹೇಳಿಕೊಳ್ಳುತ್ತಾ ಖುಷಿಯಾಗುವ ಅಂಶಗಳು ಈ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು. ಇಲ್ಲಿ ವೇದನೆ, ತಳಮಳ, ಸಂಕಟ… ನಾಯಕನ ಮನಸ್ಸಿನ ಭಾವನೆಗಳು ವ್ಯಕ್ತವಾಗುವ ಮೂಲಕ ಸಿನಿಮಾದ ಕಲರ್‌ ಕೂಡಾ ಬದಲಾಗುತ್ತಾ ಹೋಗುತ್ತದೆ.

ನಾಯಕನಾಗಿ ನಟಿಸುವ ಜೊತೆಗೆ ಈ ಸಿನಿಮಾವನ್ನು ನಿರ್ದೇಶಿಸಿರುವ ವಿಕ್ಕಿ ವರುಣ್‌ ಡಬಲ್‌ ಶೇಡ್‌ನ‌ಲ್ಲಿ ಗೆದ್ದಿದ್ದಾರೆ. ಪಾತ್ರಕ್ಕೆ ಹೊಂದಿಕೊಳ್ಳುವ ಜೊತೆಗೆ ಯಾವುದನ್ನು ಎಷ್ಟು ಹೇಳಬೇಕು ಮತ್ತು ಹೇಗೆ ಹೇಳಬೇಕು ಎಂಬ ಸ್ಪಷ್ಟ ಕಲ್ಪನೆ ಅವರಿಗಿದ್ದ ಕಾರಣ ಸಿನಿಮಾದ ಸರಾಗವಾಗಿ ಸಾಗುತ್ತದೆ. ಉಳಿ ದಂತೆ ನಾಯಕಿ ಧನ್ಯಾ, ನಾಗಾಭರಣ, ರಾಜೇಶ್‌ ನಟ ರಂಗ, ಅಚ್ಯುತ್‌ ಕುಮಾರ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಟಾಪ್ ನ್ಯೂಸ್

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Kapu-Kalahasti

Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shalivahana Shake Movie Review

Shalivahana Shake Movie Review: ಟೈಮ್‌ ಲೂಪ್‌ ಕಥೆಯ ʼಶಾಲಿವಾಹನ ಶಕೆ’

Vikasa Parva Movie Review

Vikasa Parva Movie Review: ಜೀವನ ಪಾಠದ ‘ವಿಕಾಸ ಯಾತ್ರೆ’

Ronny

Ronny Movie Review: ಬಣ್ಣದ ಕನಸಿಗೆ ರಕ್ತ ಲೇಪನ

ibbani tabbida ileyali movie review

Ibbani Tabbida Ileyali Review; ತಾಜಾ ಪ್ರೀತಿಯ ಭಾವ ಲಹರಿ

My Hero Movie Review

My Hero Movie Review; ಸೂಕ್ಷ್ಮ ಸಂದೇಶದ ಆಪ್ತ ಸಿನಿಮಾ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.