‘ಅಬ್ಬರ’ ಚಿತ್ರ ವಿಮರ್ಶೆ: ನಾನಾ ಅವತಾರಗಳಲ್ಲಿ ಪ್ರಜ್ವಲ್‌ ಅಬ್ಬರ


Team Udayavani, Nov 19, 2022, 10:09 AM IST

abbara

ಮೂರು ವಿಭಿನ್ನ ಗೆಟಪ್‌ಗ್ಳಲ್ಲಿ ಕಾಣುವ ನಾಯಕ ಮೂವರು ನಾಯಕಿಯರನ್ನೂ ಒಲಿಸಿಕೊಳ್ಳುತ್ತಾನೆ. ಮೂವರ ಜೊತೆಗೂ ಮಾತುಕತೆ, ಸಾಂಗ್‌, ಡ್ಯಾನ್ಸ್‌, ಕಾಮಿಡಿ ಎಲ್ಲವೂ ಆಗುತ್ತದೆ. ಈ ಮಧ್ಯೆಯಲ್ಲಿ ಹೀರೋ ಸೂಪರ್‌ ಮ್ಯಾನ್‌ ಆಗುತ್ತಾನೆ, ಬಾಬಾ ಆಗುತ್ತಾನೆ. ಅದಕ್ಕೆಲ್ಲ ಕಾರಣ 25 ವರ್ಷಗಳ ಹಿಂದಿನ ರಿವೇಂಜ್‌ ಸ್ಟೋರಿ. ಒಬ್ಬನೇ ವ್ಯಕ್ತಿ ಹೇಗೆ ಇಷ್ಟೆಲ್ಲ ಅವತಾರವೆತ್ತಿ ಎದುರಾಳಿಗಳಿಗೆ ಅವಾಂತರ ಮಾಡುತ್ತಾನೆ ಅನ್ನೋದು “ಅಬ್ಬರ’ ಸಿನಿಮಾದ ಕಥಾವಸ್ತು. ಅದು ತೆರೆಮೇಲೆ ಹೇಗೆ ಬಂದಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ, ಖಂಡಿತವಾಗಿಯೂ ಥಿಯೇಟರ್‌ನಲ್ಲಿ ಈ ವಾರ ತೆರೆಗೆ ಬಂದಿರುವ “ಅಬ್ಬರ’ಕ್ಕೆ ಮುಖಮಾಡಿ ಕೂರಬಹುದು.

“ಅಬ್ಬರ’ ಎಂಬ ಟೈಟಲ್‌ ಇಟ್ಟುಕೊಂಡ ಮೇಲೆ ಸಿನಿಮಾದಲ್ಲಿ ಎಲ್ಲವೂ “ಅಬ್ಬರ’ವಾಗಿರಬಹುದು ಎಂಬುದು ಪ್ರೇಕ್ಷಕರ ಸಾಮಾನ್ಯ ನಿರೀಕ್ಷೆ. ಆ ನಿರೀಕ್ಷೆಯನ್ನು ಈಡೇರಿಸಲು ನಿರ್ದೇಶಕ ರಾಮ್‌ ನಾರಾಯಣ್‌ ತಮ್ಮ ಶಕ್ತಿಮೀರಿ ಪರಿಶ್ರಮ ಹಾಕಿರುವುದು ತೆರೆಮೇಲೆ ಕಾಣುತ್ತದೆ. ನಾಯಕ ಪ್ರಜ್ವಲ್‌ ದೇವರಾಜ್‌ಗೆ ಮೂವರು ಹೀರೋಯಿನ್ಸ್‌, ನಾಲ್ಕಾರು ವಿಲನ್ಸ್‌, ಡಜನ್‌ನಷ್ಟು ಸಪೋರ್ಟಿಂಗ್‌ ಆರ್ಟಿಸ್ಟ್‌ ಹೀಗೆ ಬೃಹತ್‌ ಕಲಾವಿದರ “ಅಬ್ಬರ’ ಒಂದೆಡೆಯಾದರೆ, ಅದಕ್ಕೆ ತಕ್ಕಂತೆ ಬ್ಯಾಕ್‌ ಟು ಬ್ಯಾಕ್‌ ಫೈಟ್ಸ್‌, ಖಡಕ್‌ ಡೈಲಾಗ್ಸ್‌, ಮಾಸ್‌ ಸಾಂಗ್ಸ್‌, ಮಸ್ತ್ ಡ್ಯಾನ್ಸ್‌ “ಅಬ್ಬರ’ ಮತ್ತೂಂದು ಕಡೆ. ಇದಿಷ್ಟೂ “ಅಬ್ಬರ’ ಸಿನಿಮಾದ ಹೈಲೈಟ್ಸ್‌ ಎಂದರೂ ತಪ್ಪಾಗಲಾರದು.

ಇನ್ನು ನಾಯಕ ಪ್ರಜ್ವಲ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಿಮಿಕಾ ರತ್ನಾಕರ್‌, ಲೇಖಾಚಂದ್ರ ಮತ್ತು ರಾಜಶ್ರೀ ಮೂವರೂ ಹೀರೋಯಿನ್ಸ್‌ ಕೂಡ ಅಂದ ಮತ್ತು ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಮೂವರಿಗೂ ಪ್ರತ್ಯೇಕ ಹಾಡು ಕೊಟ್ಟು ಪ್ರಜ್ವಲ್‌ ಜೊತೆ ಹೆಜ್ಜೆ ಹಾಕಲು “ಸಮಾನ’ ಅವಕಾಶ ನೀಡಿದ್ದಾರೆ ನಿರ್ದೇಶಕರು. ಖಳನಟನಾಗಿ ರವಿಶಂಕರ್‌, ಶೋಭರಾಜ್‌, ಕೋಟೆ ಪ್ರಭಾಕರ್‌ ತಮ್ಮ ಪಾತ್ರಕ್ಕೆ ಫ‌ುಲ್‌ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಉಳಿದ ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಹಾಡುಗಳು ಕಿವಿಯಲ್ಲಿ ಹೆಚ್ಚು ಹೊತ್ತು ಕೂರದಿದ್ದರೂ, ಸಿನಿಮಾದ ಛಾಯಾಗ್ರಹಣ ಮತ್ತು ಸಂಕಲನ ತಾಂತ್ರಿಕ ಕಾರ್ಯಗಳು ಕಣ್ತುಂಬಿಕೊಳ್ಳುವಂತಿದೆ.

ಮಾಸ್‌ ಆಡಿಯನ್ಸ್‌ಗೆ ಒಪ್ಪುವಂಥ ಕಥೆಯ ಎಳೆಯೊಂದಿಗೆ ಪಕ್ಕಾ ಕಮರ್ಷಿಯಲ್‌ ಎಂಟರ್‌ ಟೈನ್ಮೆಂಟ್‌ ಪ್ಯಾಕೇಜ್‌ನಂತಿರುವ “ಅಬ್ಬರ’ವನ್ನು ಒಮ್ಮೆ ನೋಡಿಬರಬಹುದು.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

Gopilola Movie Review

Gopilola Movie Review: ಹೆಣ್ಣು ಮಣ್ಣಿನ ಮಧ್ಯೆ ಗೋಪಿ ಆಟ

Bhairadevi Review; ಅಘೋರಿ ಹಿಂದೆ ಘೋರ ಕಥನ

Bhairadevi Review; ಅಘೋರಿ ಹಿಂದೆ ಘೋರ ಕಥನ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.