ಚಿತ್ರ ವಿಮರ್ಶೆ: ‘ಕಸ್ತೂರಿ ಮಹಲ್‌’ನಲ್ಲಿ ಥ್ರಿಲ್ಲಿಂಗ್‌ ಅನುಭವ


Team Udayavani, May 14, 2022, 11:24 AM IST

ಚಿತ್ರ ವಿಮರ್ಶೆ: ‘ಕಸ್ತೂರಿ ಮಹಲ್‌’ನಲ್ಲಿ ಥ್ರಿಲ್ಲಿಂಗ್‌ ಅನುಭವ

ಕಳೆದ ಕೆಲ ವಾರಗಳಿಂದ ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್‌, ಪ್ಯಾನ್‌ ಇಂಡಿಯಾ, ಫ್ಯಾಮಿಲಿ ಡ್ರಾಮ, ಸಾಮಾಜಿಕ ಕಳಕಳಿ, ಇಂತಹ ಸಿನಿಮಾಗಳೇ ಹೆಚ್ಚಾಗಿದ್ದವು. ಹೀಗಾಗಿ ಹಾರರ್‌-ಥ್ರಿಲ್ಲರ್‌ ಸಬ್ಜೆಕ್ಟ್ ಸಿನಿಮಾಗಳು ಅಪರೂಪ ಎಂಬಂತಾಗಿದ್ದವು. ಈ ಅಪರೂಪಕ್ಕೆ ಎಂಬಂತೆ ಔಟ್‌ ಆ್ಯಂಡ್‌ ಔಟ್‌ ಹಾರರ್‌-ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರದ “ಕಸ್ತೂರಿ ಮಹಲ್‌’ ಸಿನಿಮಾ ತೆರೆಗೆ ಬಂದಿದೆ.

ಪುರಾತತ್ವ ಶಾಸ್ತ್ರ ಇಲಾಖೆಯಲ್ಲಿ ಕೆಲಸ ಮಾಡುವ ಮೇಘಾಳಿಗೆ, ತಾನು ಸ್ಥಳ ಪರೀಶಿಲನೆಗೆ ಹೋದ ಕಡೆಯಲ್ಲಾ ಒಂದೊಂದು ವಸ್ತುವನ್ನು ಕದ್ದು ತರುವ ಅಭ್ಯಾಸ. ಹೀಗೆ ಅಭ್ಯಾಸ ಬಲದಿಂದ ಒಂದು ಅರಮನೆಯಿಂದ ಮೇಘಾ ಡೈರಿಯೊಂದನ್ನು ತರುತ್ತಾಳೆ. ಕಥೆ ಪ್ರಾರಂಭವಾಗುವುದೇ ಆ ಡೈರಿ ಮನೆಗೆ ಬಂದ ಮೇಲೆ. ಹಾಗಾದರೆ ಆ ಡೈರಿ ಬಂದ ಮೇಲೆ ಎನೆಲ್ಲಾ ಆಗುತ್ತದೆ. ಆ ಡೈರಿ ಅಲ್ಲಿ ಅಂತದ್ದೇನಿದೆ ಅನ್ನುವ ಅಂಶ ತಿಳಿಯಲು ಸಿನಿಮಾವನ್ನು ನೋಡಬೇಕು.

“ಕಸ್ತೂರಿ ಮಹಲ್‌’ ಹಾರರ್‌-ಸಸ್ಪೆನ್ಸ್‌ ಸಿನಿಮಾವಾಗಿದ್ದು, ಸಾಮಾನ್ಯ ಹಾರರ್‌ ಸಿನಿಮಾಗಳಂತೆ ಇಲ್ಲು ಒಂದಷ್ಟು ದಶಕಗಳ ಇತಿಹಾಸ, ದೌರ್ಜನ್ಯ, ಹೂತಿಟ್ಟ ಸೇಡು, ಮರೆಯಾದ ಪ್ರೀತಿ, ಎಲ್ಲವು ಇದೆ. ಇತರ ಹಾರರ್‌ ಸಬ್ಜೆಕ್ಟ್ ಗಿಂತ ಹೊಸದಾಗಿದೆ ಎಂದು ಅನಿಸದಿದ್ದರೂ, ಮುಂದೆ ಏನಾಗಬಹುದು ಅನ್ನೋ ಕುತೂಹಲವಂತೂ ಸಿನಿಮಾದ ಉದ್ದಕ್ಕೂ ಇದೆ. ಸಿನಿಮಾದ ಓಪನಿಂಗ್‌ ಶಾಟ್‌ನಿಂದಲೇ ಪ್ರಾರಂಭವಾದ ಹಾರರ್‌ ಪಯಣ ಸಿನಿಮಾದ ಕೊನೆಯವರೆಗೂ ನೋಡುಗರಿಗೆ ಕಾಣಸಿಗುತ್ತದೆ.

ಹಿರಿಯ ನಿರ್ದೇಶಕ ದಿನೇಶ್‌ ಬಾಬು ಅವರ “ಕಸ್ತೂರಿ ಮಹಲ್‌’ ಪ್ರಯತ್ನ ಮೆಚ್ಚುವಂತದ್ದು. ಸಿನಿಮಾದಲ್ಲಿನ ಎಲ್ಲಾ ಪಾತ್ರಗಳು ಒಂದಕ್ಕೊಂದು ಲಿಂಕ್‌ ಇಟ್ಟುಕೊಂಡಿದ್ದು, ಕಥೆಯ ಬಂಡಿಯನ್ನು ಕ್ಲೈಮ್ಯಾಕ್ಸ್‌ ದಡಕ್ಕೆ ಸೇರಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ.

ಇನ್ನು ಇಡೀ ಸಿನಿಮಾದ ಕೇಂದ್ರ ಬಿಂದು ನಾಯಕಿ ಶಾನ್ವಿ ಶ್ರೀವಾಸ್ತವ್‌. ತೆರೆ ಮೇಲೆ ಎರಡು ಶೇಡ್‌ನ‌ಲ್ಲಿ ಶಾನ್ವಿ ಕಾಣಿಸಿಕೊಂಡಿದ್ದು, ತದ್ವಿರುದ್ಧದ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಇನ್ನು ರಂಗಾಯಣ ರಘು ನಟನೆ ಚಿತ್ರಕ್ಕೆ ಬೂಸ್ಟ್‌ ನೀಡುವಂತಿದೆ. ಅಲ್ಲಲ್ಲಿ ಬರುವ ರಂಗಾಯಣ ರಘು ಪಂಚಿಂಗ್‌ ಕಾಮಿಡಿ ಪ್ರೇಕ್ಷಕರ ಮೊಗದಲ್ಲಿ ಒಂದು ಕ್ಷಣ ನಗು ತರಿಸುತ್ತದೆ. ಉಳಿದಂತೆ ಸ್ಕಂದ, ಶ್ರುತಿ ಪ್ರಕಾಶ್‌, ಕೆಂಪೇಗೌಡ ಹಾಗೂ ಇತರ ಪಾತ್ರಗಳು ಕಥೆಗೆ ಪೂರಕವಾಗಿದೆ. ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿಕೆಎಚ್‌ ದಾಸ್‌ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ ಮನಸ್ಸಿಗೆ ಮುದ ನೀಡುತ್ತದೆ.

ವಾಣಿ ಭಟ್ಟ

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sidlingu 2 Movie Review

Sidlingu 2 Review ಫ್ಯಾಮಿಲಿ ಡ್ರಾಮಾದಲ್ಲಿ ವಿಜಯ ಪ್ರಸಾದ

Raju James Bond Review

Raju James Bond Review: ಕಾಸಿಗಾಗಿ ಜೇಮ್ಸ್‌ ಜೂಟಾಟ

Bhuvanam Gaganam Review

Bhuvanam Gaganam Review: ಪ್ರೇಮದ ಹಾದಿಯಲ್ಲಿ ಸುಮ ಘಮ

Mr.Rani movie review: ನಾನು ಅವಳಲ್ಲ ಅವನು!

Mr.Rani movie review: ನಾನು ಅವಳಲ್ಲ ಅವನು!

Gajarama Movie Review

Gajarama Movie Review: ಪ್ರೀತಿ ಮಧುರ ತ್ಯಾಗ ಅಮರ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.