Roopanthara review; ನೋಡ ನೋಡುತ್ತಲೇ ಕಾಡುವ ರೂಪ!


Team Udayavani, Jul 27, 2024, 12:15 PM IST

Mithilesh edavalath’s Roopanthara movie review

ಜೀವಲೋಕದ ಸೃಷ್ಟಿಯೇ ಒಂದು ಅಚ್ಚರಿ. ಒಂದು ಹುಳ ಅನೇಕ ಹಂತದ ವಿಕಾಸದ ನಂತರ ಸುಂದರ ಚಿಟ್ಟೆಯಾಗಿ ಬದಲಾಗುತ್ತದೆ. ಈ ವಿಕಾಸದ ಹಾದಿಯಲ್ಲಿ ಅದಕ್ಕಿರುವ ನೋವು, ಸಂಕಟ ನೂರಾರು. ಇದನ್ನೇ ವಿಷಯವಸ್ತುವಾಗಿಸಿ ಅದಕ್ಕೆ ಮನುಷ್ಯ ಸ್ವರೂಪ ಕೊಟ್ಟು ಹೇಳುವ ಕಥೆಯೇ “ರೂಪಾಂತರ’.  ನಾಲ್ಕು ಭಿನ್ನ ಕಥೆಗಳಲ್ಲಿ ಬರುವ ನಾಲ್ಕು ಪ್ರಮುಖ ಪಾತ್ರಗಳು ಹೇಗೆ ತಮ್ಮ ಮನಸ್ಸು, ಆಲೋಚನೆ ಬದಲಿಸಿಕೊಳ್ಳುತ್ತವೆ ಎಂಬುದನ್ನು ತಿಳಿಯಬೇಕಾದರೆ ನೀವು “ರೂಪಾಂತರ’ (Roopanthara) ನೋಡಬೇಕು.

ಬೇರೊಂದು ಲೋಕಕ್ಕೆ ಕೊಂಡೊಯ್ಯುವ ಚಿತ್ರದ ಆರಂಭ, ಅಲ್ಲಿಂದಲೇ ಚಿತ್ರ ವಿಭಿನ್ನವೆನಿಸುತ್ತದೆ. ಅಲೆಮಾರಿಯೊಬ್ಬ ಹೇಳುವ ಕಥೆಗೆ ಕಿವಿಗೊಡುವ ಜನರು, ಅಲ್ಲಿಂದ ಅಸಲಿ ಸಿನಿಮಾ ಶುರು. ಹಣಕ್ಕಾಗಿ ಹೊಡೆದಾಡುವ ಲೋಕಲ್‌ ರೌಡಿ, ಹೆಂಡತಿಯ ಆಸೆಯಂತೆ ಅವಳನ್ನು ಪಟ್ಟಣಕ್ಕೆ ಕರೆತರುವ ಹಳ್ಳಿಯ ಮುದುಕ, ಅಮಾಯಕ ಭಿಕ್ಷುಕಿಯನ್ನು ರಕ್ಷಿಸುವ ಪೇದೆ, ಸೈಬರ್‌ ಜಾಲಕ್ಕೆ ಬಲಿಯಾಗಿ ಕುಕೃತ್ಯವೆಸಗಲು ಹೊರಟಿದ್ದ ಯುವಕ – ಈ ನಾಲ್ಕು ಪಾತ್ರಗಳ ಸುತ್ತ ಸಾಗುತ್ತದೆ “ರೂಪಾಂತರ’.

ಕಥೆ ಸಾಗುತ್ತಿದ್ದಂತೆ ಪ್ರೇಕ್ಷಕನ ಮನಸ್ಸಿನಲ್ಲಿ, ಮುಂದೇನಾಗುತ್ತದೆ ಎಂಬ ಯೋಚನೆಯ ಕಿಡಿ ಹೊತ್ತುತ್ತದೆ. ಮಧ್ಯಂತರದ ನಂತರ ಮತ್ತಷ್ಟು ಗಾಢವಾಗುವ ಕಥೆಯಲ್ಲಿ ನಾಲ್ಕೂ ಪಾತ್ರಗಳು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತವೆ. ಅಲ್ಲಿಂದ ಅವರು ಹೊರಬರುತ್ತಾರೊ? ಇಲ್ಲವೊ? ಎಂಬುದೇ ಚಿತ್ರದ ಹೂರಣ.

“ರೂಪಾಂತರ’ದಲ್ಲಿ ಚಿತ್ರಕಥೆಯೇ ಹೀರೋ ಎನ್ನಬಹುದು. ಕಥೆಯ ನಿರೂಪಣೆ, ಕಲಾವಿದರ ಅಭಿನಯದಿಂದ ಚಿತ್ರ ಮುಗಿದ ನಂತರವೂ ಪ್ರತಿ ಪಾತ್ರ ಮನಸ್ಸಿನಲ್ಲಿ ಬೇರೂರುತ್ತವೆ. ನಿರ್ದೇಶಕ ಮಿಥಿಲೇಶ್‌ ಎಡವಲತ್‌ ಹಾಗೂ ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಬರೆದಿರುವ ರಾಜ್‌ ಬಿ. ಶೆಟ್ಟಿ ಇವರ ಜೋಡಿಯೇ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌. ಮಿಥುನ್‌ ಮುಕುಂದನ್‌ ಸಂಗೀತ ಚಿತ್ರದ ನಿರೂಪಣೆಗೆ ಸೂಕ್ತವೆನಿಸುತ್ತದೆ. ಮುಖ್ಯ ಭೂಮಿಕೆಯಲ್ಲಿರುವ ರಾಜ್‌ ಬಿ. ಶೆಟ್ಟಿ ಮತ್ತೆ ತಮ್ಮ ನಟನೆಯಿಂದ ಗಮನ ಸೆಳೆಯುತ್ತಾರೆ.

ನಿತೀಶ ಡಂಬಳ

ಟಾಪ್ ನ್ಯೂಸ್

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ibbani tabbida ileyali movie review

Ibbani Tabbida Ileyali Review; ತಾಜಾ ಪ್ರೀತಿಯ ಭಾವ ಲಹರಿ

My Hero Movie Review

My Hero Movie Review; ಸೂಕ್ಷ್ಮ ಸಂದೇಶದ ಆಪ್ತ ಸಿನಿಮಾ

Taekwondo girl Review

Taekwondo girl Review; ಹಠದಲ್ಲಿ ಅರಳಿದ ಪ್ರತಿಭೆ

Laughing Buddha Review; ಬುದ್ಧನ ಕಾಮಿಡಿ ಪುರಾಣ

Laughing Buddha Review; ಬುದ್ಧನ ಕಾಮಿಡಿ ಪುರಾಣ

pepe movie review

Pepe Movie Review: ತೊರೆಯಲ್ಲಿ ಹರಿದ ನೆತ್ತರ ಕಥೆಯಿದು…

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.