Murphy Review: ಅಲೆಗಳ ಅಬ್ಬರದಲ್ಲಿ ಪ್ರೇಮ ನಿನಾದ


Team Udayavani, Oct 19, 2024, 10:56 AM IST

Murphy movie review

ಒಂದು ಕಡೆ ಅಲೆಗಳ ಭೋರ್ಗರೆತ, ಇನ್ನೊಂದು ಕಡೆ ಮಳೆಯ ಆರ್ಭಟ, ಇದರ ನಡುವೆ ಇಂಪೆನಿಸುವ ಒಂದು ಪ್ರೇಮ ಕಾವ್ಯ… ಮಾತು, ಮೌನ, ಪ್ರೀತಿ, ಶೃಂಗಾರ, ವಿರಹ ಜೊತೆಗೊಂದಿಷ್ಟು ಕೌತುಕ, ರೋಚಕತೆ ಇವುಗಳ ಸಂಗಮವೇ ಮರ್ಫಿ.

ಈ ವಾರ ತೆರೆಕಂಡ ಮರ್ಫಿ ಸಿನಿಮಾ, ಕಡಲ ಅಲೆಗಳ ನಡುವೆ ದೋಣಿ ಸಾಗುವಂತೆ ಪ್ರೇಕ್ಷಕರನ್ನು ಸಂಬಂಧಗಳ ಅಲೆಯಲ್ಲಿ ತೇಲಿಸುತ್ತದೆ. ಚಿತ್ರ ಮುಗಿದ ಮೇಲೂ ಮರ್ಫಿಯ ಪಾತ್ರಗಳು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ.

ನೋಡುವ ದೃಶ್ಯ, ಕೇಳುವ ಸಂಭಾಷಣೆ, ಕಥೆ ಸಾಗುವ ಹಾದಿ ಎಲ್ಲವೂ ರೋಮಾಂಚನ. ಚಿತ್ರಕ್ಕೆ ಕಥೆ ಬರೆದಿರುವ ಪ್ರಭು ಮುಂಡ್ಕೂರ್‌ ಅವರೇ ನಾಯಕನ ಸ್ಥಾನ ಅಲಂಕರಿಸಿದ್ದರಿಂದ ಚಿತ್ರವನ್ನು ಅತ್ಯಾಪ್ತವಾಗಿ ಪ್ರಸ್ತುತಪಡಿಸಿದ್ದಾರೆ. ಇದನ್ನು ಕಥೆ ಎನ್ನುವುದಕ್ಕಿಂತ ಕಾಡುವ ಪ್ರೇಮ ಕಾವ್ಯ ಎಂದರೆ ಬಹು ಸೂಕ್ತ. ಡೆವಿಡ್‌, ಜನನಿ, ಜೊಸೆಫ್ ಕಥೆಯ ಮುಖ್ಯ ಪಾತ್ರಗಳು.

ಇಲ್ಲಿ ಮರ್ಫಿ ಹೆಸರು ಸಾಂದರ್ಭಿಕ. ಇಲ್ಲೊಂದು ವಿಶೇಷ ವಸ್ತುವಿದೆ. ಈ ಮೂರು ಪಾತ್ರಗಳಿಗೆ ಕೊಂಡಿಯಾಗಿ, ಹೃದಯದ ಸಂವಹನಕ್ಕೆ ಕಿವಿಯಾಗಿರುವ ಆ ವಸ್ತು, ಚಿತ್ರವನ್ನು ಮುನ್ನಡೆಸುವ ಒಂದು ಮುಖ್ಯ ಪಾತ್ರವಾಗಿದೆ. ಆ ವಸ್ತು ಏನೆಂಬುದನ್ನು ಸಿನಿಮಾದಲ್ಲಿ ನೋಡಿದರೆ ಚೆನ್ನ.

ಸದಾ ಭೋರ್ಗರೆವ ಅಲೆಗಳು ಒಮ್ಮೆಲೆ ಶಾಂತವಾದಾಗ ಆವರಿಸುವ ಗಾಢ ಮೌನವೇ ಚಿತ್ರದ ಮಧ್ಯಂತರ. ಅಪ್ಪನ ಪ್ರೀತಿಗೆ ನೆರವಾಗುವ ಮಗ, ಮಗನ ಪ್ರೀತಿಗೆ ಪ್ರಿಯಕರನನ್ನು ತ್ಯಜಿಸುವ ಅಮ್ಮ, ಕಥೆಗೆ ತಿರುವು ನೀಡುವ ಅಪಘಾತ… ಎಲ್ಲ ಅಸ್ಪಷ್ಟಗಳಿಗೆ ಚಿತ್ರಾಂತ್ಯದಲ್ಲಿ ಉತ್ತರ ದೊರೆಯುತ್ತದೆ.

ಮಾತು-ಮೌನಗಳ ನಡುವೆ ಮರ್ಫಿ ಬರ್ಫಿಯಂತೆ ಸಿಹಿ ನೆನಪುಗಳನ್ನು ಬಿಚ್ಚಿಡುತ್ತದೆ. ಪ್ರಭು ಮುಂಡ್ಕೂರ್‌, ರೋಶನಿ ಪ್ರಕಾಶ್‌ ಅವರ ಅಭಿನಯ ಇಷ್ಟವಾಗುವ ಜೊತೆಗೆ ಪಾತ್ರದ ತೀವ್ರತೆ ಹೆಚ್ಚಿಸುತ್ತದೆ.. ಪಾತ್ರಗಳ ಭಾವೋದ್ವೆಗ, ರಮ್ಯತೆ, ರೋಚಕತೆಗಳನ್ನು ರಸವತ್ತಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಇಳಾ ಹಾಗೂ ದತ್ತಣ್ಣ ಅವರ ಪಾತ್ರಗಳೂ ಗಮನ ಸೆಳೆಯುತ್ತವೆ. ಚಿತ್ರ ಸಾಗುವ ಹಾದಿಯಲ್ಲಿ ನಡುವೆ ಅರಳುವ ಕಾವ್ಯದ ಮಾತುಗಳು, ಕೊಂಕಣಿ ಸಂಭಾಷಣೆಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಆದರ್ಶ ಅವರ ಛಾಯಾಗ್ರಹಣ ಚಿತ್ರಕ್ಕೆ ಮೆರಗು ತಂದಿದೆ. ಕಥೆಗೆ ತಕ್ಕ ಪ್ರಕೃತಿಯ ಸೊಬಗು ಇಲ್ಲಿ ಅನಾವರಣವಾಗಿದೆ. ಕಾಡುವ ಕಥೆಯೊಂದನ್ನು ಕಣ್ತುಂಬಿಕೊಳ್ಳಬೇಕೆಂದರೆ “ಮರ್ಫಿ’ ಉತ್ತಮ ಆಯ್ಕೆ.

ನಿತೀಶ ಡಂಬಳ

ಟಾಪ್ ನ್ಯೂಸ್

11-malpe

Malpe: ಮನೆ ಬಿಟ್ಟು ಬಂದಿರುವ ಅಪ್ರಾಪ್ತ ಬಾಲಕಿಯರ ರಕ್ಷಣೆ

Kalaburagi jail corruption case: Suspension of two jailers

Kalaburagi ಕಾರಾಗೃಹದಲ್ಲಿ ರಾಜಾತಿಥ್ಯ ಪ್ರಕರಣ: ಇಬ್ಬರು ಜೈಲಾಧಿಕಾರಿಗಳ ಅಮಾನತ್ತು

Gandhi Jayanti: ಆ ದಿನಗಳು ಮತ್ತೇ ಮರಳಲಾರವು…ಮತ್ತೇ ಬಾ ಬಾಪು!

Gandhi Jayanti: ಆ ದಿನಗಳು ಮತ್ತೇ ಮರಳಲಾರವು…ಮತ್ತೇ ಬಾ ಬಾಪು!

ByPoll: No worries about Channapatnam constituency; committed to NDA decision: Nikhil Kumaraswamy

ByPoll: ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಹಪಾಹಪಿ ಇಲ್ಲ; ಎನ್‌ಡಿಎ ನಿರ್ಧಾರಕ್ಕೆ ಬದ್ಧ: ನಿಖಿಲ್

Success: ಯಶಸ್ಸಿನ ಮೆಟ್ಟಿಲೇರಲು ಮಾರ್ಗದರ್ಶಕರು ಬೇಕು!

Success: ಯಶಸ್ಸಿನ ಮೆಟ್ಟಿಲೇರಲು ಮಾರ್ಗದರ್ಶಕರು ಬೇಕು!

Murphy movie review

Murphy Review: ಅಲೆಗಳ ಅಬ್ಬರದಲ್ಲಿ ಪ್ರೇಮ ನಿನಾದ

INDvsNZ: Sarfaraz’s impressive century helped India in trouble

INDvsNZ: ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನೆರವಾದ ಸರ್ಫರಾಜ್‌ ಆಕರ್ಷಕ ಶತಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Simha Roopini Movie Review

Simha Roopini Movie: ಮಾರಮ್ಮದೇವಿಯ ಸಿಂಹರೂಪ

Mantrika Movie Review

Mantrika Movie Review: ಮೂಢನಂಬಿಕೆಯ ಸುತ್ತ ಮಾಂತ್ರಿಕ

Prakarana Tanikha Hantadallide Review

Prakarana Tanikha Hantadallide Review: ಕುತೂಹಲ ಘಟ್ಟದಲ್ಲಿ ಪ್ರಕರಣದ ತನಿಖೆ

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

11-malpe

Malpe: ಮನೆ ಬಿಟ್ಟು ಬಂದಿರುವ ಅಪ್ರಾಪ್ತ ಬಾಲಕಿಯರ ರಕ್ಷಣೆ

10-gundlupete

Gundlupete: ಬೈಕ್ ಸವಾರನ ಮೇಲೆ ದಾಳಿಗೆ ಮುಂದಾದ ಕಾಡಾನೆ

Simha Roopini Movie Review

Simha Roopini Movie: ಮಾರಮ್ಮದೇವಿಯ ಸಿಂಹರೂಪ

MUDA Case: Siddaramaiah should resign and face investigation: MP Yaduveer

MUDA Case: ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಸಂಸದ ಯದುವೀರ್

Kalaburagi jail corruption case: Suspension of two jailers

Kalaburagi ಕಾರಾಗೃಹದಲ್ಲಿ ರಾಜಾತಿಥ್ಯ ಪ್ರಕರಣ: ಇಬ್ಬರು ಜೈಲಾಧಿಕಾರಿಗಳ ಅಮಾನತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.