Rajayoga movie review; ರಾಜಯೋಗ ಜಾತಕದಿಂದಲ್ಲ, ಪ್ರಯತ್ನದಿಂದ


Team Udayavani, Nov 18, 2023, 1:16 PM IST

Rajayoga movie review

ಆತ ಗ್ರಾಮೀಣ ಪ್ರದೇಶದ ಕೆಳಮಧ್ಯಮ ಕುಟುಂಬದ ಬಿ. ಎ ಪದವಿಧರ ಪ್ರಾಣೇಶ. ಕೆಎಎಸ್‌ ಪಾಸ್‌ ಮಾಡಿ ತಹಶೀಲ್ದಾರ್‌ ಆಗಬೇಕೆಂಬುದು ಪ್ರಾಣೇಶನ ಜೀವನದ ಏಕೈಕ ಗುರಿ. ಪ್ರತಿ ಬಾರಿ ಪರೀಕ್ಷೆಯಲ್ಲಿ ಫೇಲ್‌ ಆದರೂ ಮತ್ತೆ ಮತ್ತೆ ಪರೀಕ್ಷೆ ಕಟ್ಟಿ ಬರೆಯುವ “ಛಲದಂಕ ಮಲ್ಲ’. ಊರಿನವರ ಕಣ್ಣಲ್ಲಿ ಅಪಶಕುನ, ಅಪ್ರಯೋಜಕ, ಅಯೋಗ್ಯ ಎಂದೆಲ್ಲ ಹತ್ತಾರು ವಿಶೇಷಣಗಳನ್ನು ಮುಡಿಗೇರಿಸಿಕೊಂಡ ಪ್ರಾಣೇಶನಿಗೆ, ಬಾಲ್ಯದಿಂದಲೂ ಮನೆಯಲ್ಲಿ ತಂದೆ-ಬಂಧುಗಳೇ ಹಿತಶತ್ರುಗಳು. ಇಂಥ ವಾತಾವರಣದಲ್ಲಿರುವ ಪ್ರಾಣೇಶನಿಗೆ ಎದುರಾಗುವ ಅನೇಕ ಅನಿರೀಕ್ಷಿತ ಸವಾಲುಗಳನ್ನು ಆತ ಹೇಗೆ ಎದುರಿಸುತ್ತಾನೆ? ಅಂತಿಮವಾಗಿ ಪ್ರಾಣೇಶ ಕೆಎಎಸ್‌ ಪಾಸ್‌ ಮಾಡಿ ತಹಶೀಲ್ದಾರ್‌ ಆಗುತ್ತಾನಾ? ಅಥವಾ ಆಡಿಕೊಳ್ಳುವವರ ಮುಂದೆ ಮಂಡಿಯೂರುತ್ತಾನಾ? ಇದು ಈ ವಾರ ತೆರೆಗೆ ಬಂದಿರುವ “ರಾಜಯೋಗ’ ಸಿನಿಮಾದ ಕಥಾಹಂದರ.

ಸಿನಿಮಾದ ಹೆಸರೇ ಹೇಳುವಂತೆ, “ರಾಜಯೋಗ’ವನ್ನು ನಿರೀಕ್ಷಿಸುವವರ ಮತ್ತು ಅದರ ಬೆನ್ನುಹತ್ತುವವರ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಔಟ್‌ ಆ್ಯಂಡ್‌ ಔಟ್‌ ಕಾಮಿಡಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಗಂಭೀರ ವಿಷಯವನ್ನು ಮನಮುಟ್ಟುವಂತೆ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕರು. ಪ್ರೀತಿ, ಪ್ರೇಮ, ಸ್ನೇಹ, ಬಾಂಧವ್ಯ, ಆಸೆ, ಅಸೂಯೆ ಹೀಗೆ ಜನಸಾಮಾನ್ಯನ ಮನಸ್ಸಿನ ಎಲ್ಲ ಗುಣಾವಗುಣಗಳನ್ನು ಪಾತ್ರಗಳು ಮತ್ತು ಸನ್ನಿವೇಶಗಳ ಮೂಲಕ ಕಟ್ಟಿಕೊಟ್ಟಿರುವುದು ಸಿನಿಮಾದ ದೊಡ್ಡ ಹೈಲೈಟ್‌.

ನಟ ಧರ್ಮಣ್ಣ ಕಡೂರು, ನಾಯಕಿ ನಿರೀಕ್ಷಾ ಜೋಡಿ ಕೆಮಿಸ್ಟ್ರಿ ತೆರೆಮೇಲೆ ವರ್ಕೌಟ್‌ ಆಗಿದೆ. ನಾಗೇಂದ್ರ ಶಾ, ಶ್ರೀನಿವಾಸ ಗೌಡರ ಪಾತ್ರಗಳು ಮನಮುಟ್ಟುತ್ತವೆ. ಹಾಡು, ಕಾಮಿಡಿ, ಲವ್‌, ಸೆಂಟಿಮೆಂಟ್‌ ಹೀಗೆ ಎಲ್ಲಾ ಥರದ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಅಂಶಗಳಿರುವ “ರಾಜಯೋಗ’ ಇಡೀ ಕುಟುಂಬ ಕೂತು ಆಸ್ವಾಧಿಸಬಹುದಾದ ಸಿನಿಮಾ ಎನ್ನಲು ಅಡ್ಡಿಯಿಲ್ಲ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

By Election: ಮುಂದುವರಿದ ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ಕಗ್ಗಂಟು

By Election: ಮುಂದುವರಿದ ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ಕಗ್ಗಂಟು

Crime

Mangaluru: ಬಸ್‌ ನಿರ್ವಾಹಕನ ಕೊಲೆ; ಆರೋಪಿಗಳ ಸುಳಿವು ಲಭ್ಯ?

1-horoscope

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಅನಿರೀಕ್ಷಿತ ಧನಾಗಮ ಸಂಭವ

Krishna-Mata-Udupi

Udupi: ಇಂದು ಶ್ರೀ ಕೃಷ್ಣ ಮಠದಲ್ಲಿ 100 ನೃತ್ಯಗಾರರಿಂದ 14 ಗಂಟೆ ನೃತ್ಯ ಪ್ರದರ್ಶನ

Sulya13

Guttigaru: ವೃದ್ಧರನ್ನು ಹೊತ್ತುಕೊಂಡು ಆಸ್ಪತ್ರೆಗೆ ಕೊಂಡೊಯ್ದರು!

Cabinet approves: ರೈತಗೆ ಬಂಪರ್‌; ಹಿಂಗಾರು ಬೆಳೆಗೆ ಬೆಂಬಲ ಬೆಲೆ ಹೆಚ್ಚಳ

Cabinet approves: ರೈತಗೆ ಬಂಪರ್‌; ಹಿಂಗಾರು ಬೆಳೆಗೆ ಬೆಂಬಲ ಬೆಲೆ ಹೆಚ್ಚಳ

Mangaluru-VV

Research: ಮಂಗಳೂರು ವಿಶ್ವವಿದ್ಯಾನಿಲಯ “ಪೇಟೆಂಟ್‌’ ಮಹತ್ವದ ಮೈಲುಗಲ್ಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

Gopilola Movie Review

Gopilola Movie Review: ಹೆಣ್ಣು ಮಣ್ಣಿನ ಮಧ್ಯೆ ಗೋಪಿ ಆಟ

Bhairadevi Review; ಅಘೋರಿ ಹಿಂದೆ ಘೋರ ಕಥನ

Bhairadevi Review; ಅಘೋರಿ ಹಿಂದೆ ಘೋರ ಕಥನ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

By Election: ಮುಂದುವರಿದ ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ಕಗ್ಗಂಟು

By Election: ಮುಂದುವರಿದ ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ಕಗ್ಗಂಟು

kalla

Koni: ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನ- ಹೈದರಾಬಾದ್‌ನಿಂದ ಎಚ್ಚರಿಸಿದ ಸೆಕ್ಯುರಿಟಿ ಸಂಸ್ಥೆ

Crime

Mangaluru: ಬಸ್‌ ನಿರ್ವಾಹಕನ ಕೊಲೆ; ಆರೋಪಿಗಳ ಸುಳಿವು ಲಭ್ಯ?

1-horoscope

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಅನಿರೀಕ್ಷಿತ ಧನಾಗಮ ಸಂಭವ

Krishna-Mata-Udupi

Udupi: ಇಂದು ಶ್ರೀ ಕೃಷ್ಣ ಮಠದಲ್ಲಿ 100 ನೃತ್ಯಗಾರರಿಂದ 14 ಗಂಟೆ ನೃತ್ಯ ಪ್ರದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.