Sambhavami Yuge Yuge Review; ಊರು ಗೆದ್ದ ಹಳ್ಳಿಹೈದ


Team Udayavani, Jun 22, 2024, 3:35 PM IST

Sambhavami Yuge Yuge Review

ಆಶ್ರಯ ನೀಡಿ, ಬದುಕು ಕಟ್ಟಿಕೊಳ್ಳಲು ಕಾರಣವಾದ ಊರಿಗೆ ಮಗ ಸೇವೆ ಮಾಡಬೇಕು. ಈ ಮೂಲಕ ಊರ ಜನರ ಕಷ್ಟಕ್ಕೆ ಮಗ ಆಗಬೇಕು ಎಂದು ಕನಸು ಕಾಣುವ ತಾಯಿ. ಒಳ್ಳೆಯ ವಿದ್ಯಾವಂತನಾದರೂ ತಾಯಿಯ ಆಸೆಯಂತೆ ಸಿಟಿಯ ಕನಸು ಬಿಟ್ಟು ಹಳ್ಳಿ ಜನರ ಸೇವೆಗೆ ಮುಂದಾಗುವ ಮಗ. ಬಹುಬೇಗನೇ ಊರಮಂದಿಯ ಮೆಚ್ಚುಗೆ ಪಡೆಯುತ್ತಲೇ ಒಂದಷ್ಟು ಮಂದಿಯ ದ್ವೇಷಕ್ಕೂ ಕಾರಣನಾಗುತ್ತಾನೆ. ಅಲ್ಲಿಂದ ಆಟ ಶುರು. ಆ ಆಟ ಏನು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು.

ಹೌದು, ಈ ವಾರ ತೆರೆಕಂಡಿರುವ “ಸಂಭವಾಮಿ ಯುಗೇ ಯುಗೇ’ ಚಿತ್ರ ಒಂದು ಹಳ್ಳಿ ಕಥಾನಕ. ಊರು ಉದ್ಧಾರ ಮಾಡಲೆಂದು ಹಳ್ಳಿಯಲ್ಲೇ ಉಳಿದು, ಪಂಚಾಯತ್‌ ಅಧ್ಯಕ್ಷನಾಗುವ ಯುವಕನ ಒಳ್ಳೆತನ ಒಂದು ಕಡೆಯಾದರೆ, ಅವ್ಯವಹಾರದಲ್ಲಿ ತೊಡಗಿರುವ ಗುಂಪಿನ ಆಟ ಮತ್ತೂಂದು ಕಡೆ. ಇದರಲ್ಲಿ ಹೀರೋ ಹೇಗೆ ಜಯಿಸುತ್ತಾನೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಇಡೀ ಸಿನಿಮಾದ ಚಿತ್ರೀಕರಣ ಮಂಡ್ಯ, ಚನ್ನಪಟ್ಟಣ ಸುತ್ತಮುತ್ತ ನಡೆದಿರುವುದರಿಂದ ಅಲ್ಲಿನ ಪರಿಸರ ಕಥೆಯ ಜೊತೆಗೆ ಸಾಗಿದೆ.

ನಿರ್ದೇಶಕರು ಮೂಲ ಕಥೆಯ ಆಶಯಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಊರಿನ ರಾಜಕೀಯ, ಜನರ ನಿರೀಕ್ಷೆ ಈ ನಡುವೆಯೇ ಚಿಗುರೊಡೆಯುವ ಪ್ರೀತಿ.. ಇಂತಹ ಅಂಶಗಳ ಮೂಲಕ ಸಿನಿಮಾ ಸಾಗಿಬರುತ್ತದೆ. ಶಿಕ್ಷಣ ಪಡೆದ ಯುವಕರೆಲ್ಲಾ ಹಳ್ಳಿ ಬಿಟ್ಟು ಸಿಟಿ ಸೇರಿದರೆ ಹಳ್ಳಿಯನ್ನು ಉದ್ಧಾರ ಮಾಡುವವರು ಯಾರು? ಹಳ್ಳಿಯಲ್ಲೇ ಒಳ್ಳೆಯ ಅವಕಾಶಗಳು ಸೃಷ್ಟಿಯಾಗಬೇಕು ಮತ್ತು ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂಬ ಸಂದೇಶವೂ ಈ ಸಿನಿಮಾದಲ್ಲಿದೆ. ಮೊದಲೇ ಹೇಳಿದಂತೆ ಈ ಚಿತ್ರದಲ್ಲೊಂದು ಸಂದೇಶವಿದೆ, ಜೊತೆಗೆ ಒಂದು

ಥ್ರಿಲ್ಲರ್‌ ಅಂಶವೂ ಇದೆ. ಇದನ್ನು ನಿರ್ದೇಶಕರು ಸುದೀರ್ಘ‌ವಾಗಿ ಹೇಳಲು ಪ್ರಯತ್ನಿಸಿದ್ದಾರೆ. ಅದೇ ಕಾರಣದಿಂದ ಸಿನಿಮಾದ ಅವಧಿ ಹೆಚ್ಚಿದೆ. ಒಂದಷ್ಟು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಇನ್ನು ಸಿನಿಮಾದ ಹೈಲೈಟ್‌ ಎಂದರೆ ಅದು ಕ್ಲೈಮ್ಯಾಕ್ಸ್‌. ಇಲ್ಲೊಂದು ಊಹಿಸಲಾಗದ ಟ್ವಿಸ್ಟ್‌ ಕೊಡಲಾಗಿದೆ.

ನಾಯಕ ಜಯ್‌ ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಸೆಂಟಿಮೆಂಟ್‌ ದೃಶ್ಯಗಳಲ್ಲಿ ಅವರು ಪಳಗಬೇಕು. ಉಳಿದಂತೆ ಸುಧಾರಾಣಿ, ವೆಂಕಟೇಶ್‌, ಅಶ್ವಿ‌ನ್‌ ಹಾಸನ್‌ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಆರ್‌.ಪಿ.ರೈ

ಟಾಪ್ ನ್ಯೂಸ್

10-honanvar

ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

7-sirsi

ತುಂಬಿ‌ ಹರಿಯುತ್ತಿರುವ ಚಂಡಿಕಾ‌ನದಿ‌;ಶಿರಸಿಯಿಂದ ತೆರಳುವ ವಾಹನಗಳಿಗೆ ಬದಲಿ ‌ಮಾರ್ಗ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

love li movie review

Love Li movie review: ಪ್ರೀತಿ, ದ್ವೇಷ ಮತ್ತು ಅವನು!

Shivamma movie review;

Shivamma movie review; ಗಟ್ಟಿಗಿತ್ತಿಯ ಬದುಕಿನ ಕನಸು

Kotee movie review: ಕೋಟಿ ಲೆಕ್ಕ ಹುಲಿಬೇಟೆ ಪಕ್ಕಾ

Kotee movie review: ಕೋಟಿ ಲೆಕ್ಕ ಹುಲಿಬೇಟೆ ಪಕ್ಕಾ

Anartha Movie Review

Anartha Movie Review; ‘ಅನರ್ಥ’ದಿಂದ ಅರ್ಥದೆಡೆಗೆ ಸಸ್ಪೆನ್ಸ್‌ ಯಾನ

Evidence movie review

Evidence movie review: ತ್ರಿಕೋನ ಪ್ರೇಮದ ಕರಾಳ ಮುಖ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Bengaluru: ನಡುರಸ್ತೆಯಲ್ಲೇ ಖಾಸಗಿ ಉದ್ಯೋಗಿ ಹತ್ಯೆ

Bengaluru: ನಡುರಸ್ತೆಯಲ್ಲೇ ಖಾಸಗಿ ಉದ್ಯೋಗಿ ಹತ್ಯೆ

10-honanvar

ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.