![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 17, 2021, 11:05 AM IST
ಒಂದು ಲವ್ಸ್ಟೋರಿ ಇಷ್ಟವಾಗಲು ಏನೇನು ಇರಬೇಕೆಂದು ಕೇಳಿದರೆ ಒಂದೊಳ್ಳೆಯ ಕಥೆ, ಸುಂದರವಾದ ಲೊಕೇಶನ್, ಇಂಪಾದ ಹಾಡುಗಳು, ಅಲ್ಲಲ್ಲಿ ಕಚಗುಳಿ ಇಡುವ ಕಾಮಿಡಿ ಜೊತೆಗೆ ಒಂದಷ್ಟು ಟ್ವಿಸ್ಟ್-ಟರ್ನ್… ಇಷ್ಟಿದ್ದರೆ ಒಂದು ಲವ್ ಸ್ಟೋರಿಯನ್ನು ಖುಷಿಯಿಂದ ನೋಡಬಹುದು. ಶುಕ್ರವಾರ ತೆರೆಕಂಡಿರುವ “ಶ್ರೀಕೃಷ್ಣ ಅಟ್ ಜಿಮೇಲ್. ಕಾಂ’ ಸಿನಿಮಾದಲ್ಲಿ ಈ ಎಲ್ಲಾ ಅಂಶಗಳು ಇವೆ.
ನಿರ್ದೇಶಕ ನಾಗಶೇಖರ್ ಲವ್ಸ್ಟೋರಿಯನ್ನು ಕಟ್ಟಿಕೊಡುವಲ್ಲಿ ಎತ್ತಿದ ಕೈ. ಅದರಲ್ಲೂ ಭಾವನೆಗಳನ್ನು ತುಂಬಿಸಿ, ಟ್ವಿಸ್ಟ್-ಟರ್ನ್ ಕೊಟ್ಟು ಕಟ್ಟಿಕೊಡೋದನ್ನು ನಾಗಶೇಖರ್ಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಹಾಗಾಗಿಯೇ ಈ ಚಿತ್ರ ಒಂದು ಲವ್ಸ್ಟೋರಿ ಕಂ ಫ್ಯಾಮಿಲಿ ಎಂಟರ್ಟೈನರ್ ಆಗಿ ಇಷ್ಟವಾಗುತ್ತದೆ. “ಶ್ರೀಕೃಷ್ಣ ಅಟ್ ಜಿಮೇಲ್.ಕಾಂ’
ಇದನ್ನೂ ಓದಿ:ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು
ನಾಯಕ ಹೋಟೆಲ್ ಸಪ್ಲೈಯರ್ ಆದರೆ, ನಾಯಕಿ ಶ್ರೀಮಂತ ಲಾಯರ್. ಇವರಿಬ್ಬರ ಮಧ್ಯೆ ಒಂದು ಆತ್ಮೀಯತೆ, ಸ್ನೇಹ ಹಾಗೂ ಅನುರಾಗ ಬೆಳೆಯಲು ಒಂದು ಘಟನೆ ಕಾರಣವಾಗುತ್ತದೆ. ಅನಿವಾರ್ಯತೆಯಿಂದ ಆರಂಭವಾಗುವ ಪರಿಚಯ ಮತ್ತೂಂದು ಹಂತಕ್ಕೆ ಸಾಗುತ್ತದೆ ಎನ್ನುವಷ್ಟರಲ್ಲಿ ನಿರ್ದೇಶಕರು ಒಂದಷ್ಟು ಟ್ವಿಸ್ಟ್ಗಳನ್ನು ಕೊಟ್ಟಿದ್ದಾರೆ. ಚಿತ್ರ ಪ್ರೀತಿ, ಬೇಸರ, ಸಂಕಟ… ಹೀಗೆ ಹಲವು ಅಂಶಗಳನ್ನು ಹೇಳುತ್ತಾ, ಅಲ್ಲಲ್ಲಿ ಕಾಡುತ್ತಾ ಹೋಗುತ್ತದೆ. ಸಹಜವಾಗಿಯೇ ಸಿನಿಮಾದಲ್ಲಿ ಒಂದಷ್ಟು ತಪ್ಪುಗಳು, ಲಾಜಿಕ್ ಮಿಸ್ ಆಗಿವೆ. ಜೊತೆಗೆ ತಾಂತ್ರಿಕವಾಗಿ ಒಂದಷ್ಟು ಸಮಸ್ಯೆಗಳಿವೆ. ಅದರಾಚೆ ಇದೊಂದು ನೀಟಾದ ಸಿನಿಮಾ.
ನಾಯಕ ಡಾರ್ಲಿಂಗ್ ಕೃಷ್ಣ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಮತ್ತು ಒಳ್ಳೆಯ ಸ್ಕೋರ್ ಮಾಡಿದ್ದಾರೆ. ನಾಯಕಿ ಭಾವನಾ ಎಂದಿನಂತೆ ನಟನೆಯಲ್ಲಿ ಮಿಂಚಿದ್ದಾರೆ.
ಉಳಿದಂತೆ ದತ್ತಣ್ಣ ಸೇರಿದಂತೆ ಇತರ ಪಾತ್ರಗಳು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಹಾಗೂ ಸತ್ಯ ಹೆಗಡೆ ಛಾಯಾಗ್ರಹಣದಲ್ಲಿ “ಕೃಷ್ಣ’ ಸುಂದರ.
– ರವಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.