ಕೆಜಿಎಫ್ 2 ವಿಮರ್ಶೆ: ವಿಲನ್ ಗಳ ಬಿರುಗಾಳಿ ಎದುರು ನಿಂತ ರಾಕಿ ಸುಲ್ತಾನನೆಂಬ ಚಂಡಮಾರುತ


Team Udayavani, Apr 14, 2022, 2:51 PM IST

ಕೆಜಿಎಫ್ 2 ವಿಮರ್ಶೆ: ವಿಲನ್ ಗಳ ಬಿರುಗಾಳಿ ಎದುರು ನಿಂತ ರಾಕಿ ಸುಲ್ತಾನನೆಂಬ ಚಂಡಮಾರುತ

ನರಾಚಿಗೆ ಎಂಟ್ರಿ ಕೊಟ್ಟ ರಾಕಿ (ಯಶ್) ಕೊನೆಯವರೆಗೂ ರಾಜನ ಹಾಗೆಯೇ ಉಳಿದನೇ ಎನ್ನುವುದನ್ನು ಇಂದು ತೆರೆಕಂಡ ಕೆಜಿಎಫ್ ಚಾಪ್ಟರ್ 2 ಚಿತ್ರದ ಒನ್ ಲೈನ್. ಆಕ್ಷನ್ ಸಿನಿಮಾದಲ್ಲಿ ಕೆಲವೊಂದು ಸನ್ನಿವೇಶದಲ್ಲಿ ರೋಮಾಂಚನಕಾರಿ ದೃಶ್ಯಗಳು ಇರುವುದು ಸಾಮಾನ್ಯ. ಆದರೆ ಇಲ್ಲಿ ಗೂಸ್ ಬಂಪ್ ಬರಬಹುದಾದ ದೃಶ್ಯಗಳೇ ತುಂಬಿದೆ. ನಿರ್ದೇಶಕ ಪ್ರಶಾಂತ್ ನೀಲ್ ತನ್ನ ಕಥೆಯ ನರಾಚಿ ಜಗತ್ತನ್ನು ತುಂಬ ಅದ್ದೂರಿಯಾಗಿ ಪ್ರೇಕ್ಷಕನ ಮುಂದಿರಿಸಿದ್ದಾರೆ.

ಬರವಣಿಗೆ ವಿಚಾರದಲ್ಲಿ ಮೊದಲ ಭಾಗದ ಮಾದರಿಯಲ್ಲಿ ಕಂಡುಬಂದರೂ, ರಬ್ಬರ್ ಬ್ಯಾಂಡ್ ಎಫೆಕ್ಟ್ ರೀತಿಯ ಚಿತ್ರಕಥೆ ಅದನ್ನೆಲ್ಲ ಮರೆಸಿ ಬಿಡುತ್ತದೆ.

ರಾಕಿಯ ಪ್ರತಿಯೊಂದು ಬಿಲ್ಡ್ ಅಪ್ ಸನ್ನಿವೇಶಗಳು ಮಾಸ್ ಆಗಿದೆ. ಇದಕ್ಕೆ ಮುಖ್ಯ ಕಾರಣ ಯಶ್ ಪಾತ್ರಕ್ಕೆ ಕೊಡುವ ಬಿಲ್ಡಪ್. ರಾಕಿ ಯಾರಿಗೂ ಕಡಿಮೆಯಿಲ್ಲ ಎಂದು ಪ್ರತಿ ದೃಶ್ಯದಲ್ಲೂ ಕಟ್ಟಿಕೊಟ್ಟಿದ್ದಾರೆ ಡೈರೆಕ್ಟರ್ ನೀಲ್.

ಕೆಜಿಎಫ್ ಚಾಪ್ಟರ್ 2 ಚಿತ್ರದ ದೊಡ್ಡ ಪ್ಲಸ್ ಸ್ಟೇಜಿಂಗ್. ಪ್ರತಿಯೊಂದು ಹಂತದಲ್ಲೂ ಪ್ರೇಕ್ಷಕನಿಗೆ ಹೀರೋಯಿಸಂ ಫೀಲ್‌ ಕೊಡುವ ನಿರ್ದೇಶನವೇ ಇಲ್ಲಿ ಮಾಸ್ಟರ್.

ಮೊದಲ ಭಾಗದ ಫ್ರೆಶ್ ನೆಸ್ ಮತ್ತು ರೋಚಕತೆ ಕಡಿಮೆಯಿದ್ದರೂ, ಇಲ್ಲಿ ರಾಕಿ ಭಾಯ್ ಹವಾ ಇಲ್ಲಿ ಹೆಚ್ಚಿದೆ. ಚಿತ್ರದ ಎಲ್ಲಾ ಬಹುಪಾಲು ಯಶ್ ಅಕ್ರಮಿಸಿದ್ದು ಅವರಿಗೆ ಬಿಟ್ಟರೆ ಇಲ್ಲಿ ‌ಬೇರೆಯವರಿಗೆ ಅಷ್ಟು ಸ್ಕೋಪ್ ಇಲ್ಲ. ಫೋರ್ ಶ್ಯಾಡೋ ನಂತಹ ತಂತ್ರಗಳನ್ನು ಚಿತ್ರಕಥೆಯಲ್ಲಿ ಉತ್ತಮವಾಗಿ ಬಳಸಲಾಗಿದೆ.

ಸುಲ್ತಾನನ ಅಬ್ಬರದ ಮಧ್ಯೆ ಭಾವನೆಗಳನ್ನು ಮಿಳಿತಗೊಳಿಸಿದ್ದು, ಚಿತ್ರದ ಅತೀ ದೊಡ್ಡ ಪ್ಲಸ್. ಅಂತೆಯೇ ರಾಕಿ ಭಾಯ್ ಅಬ್ಬರಕ್ಕೆ ಬ್ರೇಕ್ ಹಾಕುವುದೂ ಇದೇ ಭಾವನೆಗಳು.

ಪ್ರತಿಯೊಂದು ತಂತ್ರಜ್ಞಾನ ವಿಭಾಗವು ಮಾನ್ ಸ್ಟರ್ ರೀತಿಯಲ್ಲಿ ಕೆಲಸ ಮಾಡಿದೆ. ರಾಕಿಯ ಸಾಮ್ರಾಜ್ಯ ನಿರ್ಮಾಣದಲ್ಲಿ ಛಾಯಾಗ್ರಹಕ ಭುವನ್ ತನ್ನ ಎಲ್ಲಾ ಜಾಣ್ಮೆ ಉಪಯೋಗಿಸಿದ್ದಾರೆ. ಕೆಜಿಎಫ್ 2 ಚಿತ್ರದ ನಿಜವಾದ ಸುಲ್ತಾನ್ ರವಿ ಬಸ್ರೂರ್. ಇವರ ಸೌಂಡ್ ಡಿಸೈನ್ ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಬೂಸ್ಟ್ ನೀಡಿದೆ. ಎಲ್ಲಾ ತಂತ್ರಜ್ಞರು ಅದ್ಭುತ ರೀತಿಯಲ್ಲಿ ಕೆಲಸ ಮಾಡಿದ್ದು, ಪ್ರಶಾಂತ್ ನೀಲ್ ಕನಸಿಗೆ ಜೀವ ತುಂಬಿದ್ದಾರೆ.

ಇದನ್ನೂ ಓದಿ:ತೂಫಾನ್ ಎಬ್ಬಿಸಿದ ‘ಕೆಜಿಎಫ್ ಚಾಪ್ಟರ್ 2’; ಸಿನಿಮಾ ನೋಡಿದ ಅಭಿಮಾನಿಗಳು ಏನಂತಾರೆ?

ಕೆಜಿಎಫ್ ಪ್ರಪಂಚದ ರಕ್ತಸಿಕ್ತ ಅಧ್ಯಾಯದ ನಡುವೆ ಸುಂದರ ಹೂವಿನಂತೆ ನಾಯಕಿ ಶ್ರೀನಿಧಿ ಶೆಟ್ಟಿ ಮಿಂಚಿದ್ದಾರೆ. ಅಧೀರ ಪಾತ್ರದಲ್ಲಿ ಸಂಜಯ್ ದತ್, ಪ್ರಧಾನಿ ಪಾತ್ರದಲ್ಲಿ ರವೀನಾ ಟಂಡನ್ ಗಮನ ಸೆಳೆಯುತ್ತಾರೆ. ಉಳಿದಂತೆ ಪ್ರಕಾಶ್ ರೈ, ಮಾಳವಿಕಾ, ನಾಗಭರಣ, ರಾವ್ ರಮೇಶ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಚಿತ್ರಕಥೆ ರೋಚಕವಾಗಿದ್ದರೂ ಅನೇಕ‌ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಮುಖ್ಯವಾಗಿ ಪ್ರಿ ಕ್ಲೈಮ್ಯಾಕ್ಸ್ ದೃಶ್ಯಗಳು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ.

ಗರುಡನನ್ನು ಕೊಂದು ಕೆಜಿಎಫ್ ನ ಸಾಮ್ರಾಜ್ಯದಲ್ಲಿ ಹೊಸ ರಾಜನಾದ ರಾಕಿ ಭಾಯ್, ಅಮ್ಮ ಹೇಳಿದ ಮಾತನ್ನು ಉಳಿಸಿಕೊಳ್ಳಲು ಹೇಗೆಲ್ಲ ಹೋರಾಡಿದ? ಈ ಹೋರಾಟದ ಹಾದಿಯಲ್ಲಿ ರಾಕಿ ಭಾಯ್ ಸೃಷ್ಟಿಸಿದ ತೂಫಾನ್ ನ ಅಬ್ಬರ ಹೇಗಿದೆ? ತನ್ನ ಸಾಮ್ರಾಜ್ಯವನ್ನು ನಾಶ ಮಾಡಲು ಬರುವ ಬಿರುಗಾಳಿಯಂತಹ ವಿಲನ್‌ಗಳ ಎದುರು ರಾಕಿಯ ಚಂಡಮಾರುತ ಹೇಗಿದೆ ಎನ್ನುವುದನ್ನು ನೀವು ಚಲನಚಿತ್ರ ಮಂದಿರಲ್ಲೇ ನೋಡಬೇಕು.

ಆದರೆ ಒಂದು ವಿಚಾರ, ಚಿತ್ರ ಮುಗಿಯಿತು ಎಂದು ಮೊದಲೇ ಎದ್ದು ಬರಬೇಡಿ, ದೊಡ್ಡದೊಂದು ಟ್ವಿಸ್ಟ್ ಕೊನೆಯಲ್ಲಿದೆ.

ಮನೋಷ್ ಕುಮಾರ್ ಎನ್ ಬಸ್ರೀಕಟ್ಟೆ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sidlingu 2 Movie Review

Sidlingu 2 Review ಫ್ಯಾಮಿಲಿ ಡ್ರಾಮಾದಲ್ಲಿ ವಿಜಯ ಪ್ರಸಾದ

Raju James Bond Review

Raju James Bond Review: ಕಾಸಿಗಾಗಿ ಜೇಮ್ಸ್‌ ಜೂಟಾಟ

Bhuvanam Gaganam Review

Bhuvanam Gaganam Review: ಪ್ರೇಮದ ಹಾದಿಯಲ್ಲಿ ಸುಮ ಘಮ

Mr.Rani movie review: ನಾನು ಅವಳಲ್ಲ ಅವನು!

Mr.Rani movie review: ನಾನು ಅವಳಲ್ಲ ಅವನು!

Gajarama Movie Review

Gajarama Movie Review: ಪ್ರೀತಿ ಮಧುರ ತ್ಯಾಗ ಅಮರ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.