BBK10: ಬಿಗ್ ಬಾಸ್ ಮನೆಯಿಂದ ಔಟಾದರೂ ಫಿನಾಲೆಗೆ ಪ್ರತಾಪ್.! ಇಲ್ಲಿದೆ ಕಾರಣ
Team Udayavani, Jan 26, 2024, 8:20 AM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಫಿನಾಲೆ ಇದೇ ವಾರದಲ್ಲಿ ನಡೆಯಲಿದೆ. ನೂರಕ್ಕೂ ಹೆಚ್ಚಿನ ದಿನಗಳ ದೊಡ್ಡನೆ ಜರ್ನಿ ಮುಕ್ತಾಯ ಹಂತಕ್ಕೆ ಬಂದಿದ್ದು, ವೋಟಿನ ಆಧಾರದ ಮೇಲೆ ವಿಜೇತರ ಘೋಷಣೆ ನಡೆಯಲಿದೆ.
ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮ ಕಿರುತೆರೆಯಲ್ಲಿ ಮಾತ್ರ ಸೌಂಡ್ ಮಾಡದೆ, ಮನೆಯ ಹೊರಗೂ ಸ್ಪರ್ಧಿಗಳ ಬಗ್ಗೆ ಕೆಲವೊಂದು ವಿಚಾರಗಳು ಸುದ್ದಿಯಾಗಿದ್ದವು. ಹಾಗಾಗಿ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಪಾರ ವೀಕ್ಷಕರಿದ್ದರು.
ಫಿನಾಲೆ ಕಣದಲ್ಲಿ ಅಂತಿಮವಾಗಿ 6 ಸ್ಪರ್ಧಿಗಳಿದ್ದಾರೆ. ಈ ಪೈಕಿ ಒಬ್ಬರು ಮನೆಯಿಂದ ಹೊರಹೋಗಲಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದರು. ವಾರದ ಮಧ್ಯದಲ್ಲಿ ಎಲಿಮಿನೇಷನ್ ಆಗುತ್ತಾರೆ ಎನ್ನುವ ಮಾತಿನ ನಡುವೆಯೇ ಮನೆಯಿಂದ ಡ್ರೋನ್ ಪ್ರತಾಪ್ ಹೊರಗೆ ಹೋಗಿದ್ದಾರೆ ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಕಳೆದ ದಿನಗಳಿಂದ ಡ್ರೋನ್ ಪ್ರತಾಫ್ಪ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಎಬ್ಬಿಸಿತ್ತು.
ಎಲಿಮಿನೇಟ್ ಆದರೂ ಬಚಾವ್ ಆದ ಡ್ರೋನ್..?
ಇದೀಗ ಡ್ರೋನ್ ಪ್ರತಾಪ್ ಎಲಿಮಿನೇಟ್ ಬಗ್ಗೆ ಮತ್ತೊಂದು ಸುದ್ದಿ ಹಬ್ಬಿದೆ. ಬಿಗ್ ಬಾಸ್ ಫಿನಾಲೆಯಲ್ಲಿರುವ ಕಾರ್ತಿಕ್, ಸಂಗೀತಾ, ವಿನಯ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ಪ್ರತಾಪ್ ಅವರ ಬಳಿ ಬಿಗ್ ಬಾಸ್ ಫಿನಾಲೆಯಲ್ಲಿ ಇರಲು ಅರ್ಹತೆ ಇಲ್ಲದ ಒಬ್ಬ ಸ್ಪರ್ಧಿಯ ಹೆಸರನ್ನು ಹೇಳಿ ಎಂದಿದ್ದಾರೆ. ಇದಕ್ಕೆ ಬಹುಮತದಲ್ಲಿ ಮನೆಯ ಸದಸ್ಯರು ಪ್ರತಾಪ್ ಅವರ ಹೆಸರು ಹೇಳಿದ್ದಾರೆ.
ಆ ಬಳಿಕ ಮನೆಯ ಸದಸ್ಯರ ಅಭಿಪ್ರಾಯ ಮೇರೆಗೆ ಪ್ರತಾಪ್ ಅವರು ಮನೆಯಿಂದ ಹೊರ ಬರಲು ಸಿದ್ದರಾಗುತ್ತಾರೆ. ಉಳಿದ ಸ್ಪರ್ಧಿಗಳಿಗೆ ಒಳ್ಳೆದಾಗಲಿ ಎಂದು ಹಾರೈಸಿ ಮುಖ್ಯದ್ವಾರದ ಬಳಿ ಬರುತ್ತಾರೆ. ಆದರೆ ಮುಖ್ಯದ್ವಾರ ಓಪನ್ ಆಗುವುದಿಲ್ಲ ಬದಲಾಗಿ ಪ್ರತಾಪ್ ಅವರಿಗೆ ಒಂದು ಲಕೋಟೆ ಬರುತ್ತದೆ ಅದನ್ನು ತೆರೆದು ಒದುವಂತೆ ಹೇಳಲಾಗುತ್ತದೆ. ಅದರಲ್ಲಿ “ಈ ಮಿಡ್ ವೀಕ್ ಎಲಿಮಿನೇಷನ್ ಇರುವುದಿಲ್ಲ” ಎಂದು ಬರೆದಿರುತ್ತದೆ. ಈ ಬಾರಿ ಐವರ ಬದಲಿಗೆ 6 ಮಂದಿ ಫಿನಾಲೆಯಲ್ಲಿರುತ್ತಾರೆ. ಇದು ಸುದೀಪ್ ಅವರ ನಿರ್ಧಾರ” ಹೇಳಲಾಗುತ್ತದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK-11: ಕೊನೆಗೂ ಬಿಗ್ ಬಾಸ್ ಆ್ಯಂಕರ್ ಮುಖ ರಿವೀಲ್… ಶೋ ಆರಂಭಕ್ಕೆ ಡೇಟ್ ಫಿಕ್ಸ್
Bigg Boss 18: ಬಿಗ್ಬಾಸ್ನಲ್ಲಿ ಭಾಗಿಯಾಗಲು ನಟನಿಗೆ 5 ಕೋಟಿ ಆಫರ್; ಯಾರೀತ?
Tv Actor Varun: ಪ್ರೀತಿಸಿ ದ್ರೋಹ, ಧಮ್ಕಿ; ನಟ ವರುಣ್ ಮೇಲೆ ಕೇಸ್
Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !
BBK-11: ಕಿಚ್ಚನ ಹೆಸರು ತೆಗೆದು ಹಾಕಿದ ವಾಹಿನಿ; ಬಿಗ್ ಬಾಸ್ಗೆ ಸುದೀಪ್ ಅನುಮಾನ?
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.