BBK11: “ಮಾನಸಗೆ ಪ್ರಬುದ್ಧತೆ ಇಲ್ಲ..” ನಾಮಿನೇಷನ್ ಕಾರಣ ಕೇಳಿ ಗರಂ ಆದ ತುಕಾಲಿ ಪತ್ನಿ
Team Udayavani, Oct 22, 2024, 3:50 PM IST
ಬೆಂಗಳೂರು: ಬಿಗ್ ಬಾಸ್(Bigg Boss Kannada-11) ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಕಿಚ್ಚು ಹಚ್ಚಿದೆ. ಸ್ಪರ್ಧಿಗಳ ನಡುವೆ ನಾಮಿನೇಷನ್ ವಿಚಾರ ವಾಗ್ವಾದಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಮನೆಯ ಮುಂದಿನ ಕ್ಯಾಪ್ಟನ್ಸಿಗಾಗಿ ಟಾಸ್ಕ್ ನಡೆದಿದೆ. 7 ಜೋಡಿಗಳು ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಟಾಸ್ಕ್ನಲ್ಲಿ ಜಿದ್ದಾಜಿದ್ದಿಯ ಹೋರಾಟ ಮಾಡಿದೆ.
ಈ ನಡುವೆ ನಾಲ್ಕನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಯಾರು ನಾಮಿನೇಟ್ ಆಗುತ್ತಾರೆ ಎನ್ನುವುದಕ್ಕೆ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಕೆಲವರು ನಾಮಿನೇಷನ್ ಮಾಡಲು ಕೊಟ್ಟ ಕಾರಣ ಕೇಳಿ ವಾಗ್ವಾದಕ್ಕಿಳಿದಿದ್ದಾರೆ.
ತಿವಿಕ್ರಮ್ ಹಾಗೂ ಐಶ್ವರ್ಯಾ ಮಾನಸ ಅವರು ಅಪ್ರಬುದ್ಧತೆಯಿಂದ ಇದ್ದಾರೆ ಎನ್ನುವ ಕಾರಣ ಕೊಟ್ಟು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದನ್ನು ಕೇಳಿದ ಮಾನಸ “ನನ್ನ ಗುಣ ಡಿಸೈಡ್ ಮಾಡೋಕೆ ನೀನು ಯಾವಳೋ..” ಎಂದಿದ್ದಾರೆ. ಇದಕ್ಕೆ ಐಶ್ವರ್ಯಾ ಅವಳು ಗಿವಳು ಏನು ಬೇಡ ಅಂಥ ಮಾತನಾಡುತ್ತಾ ಮುಂದೆ ಬಂದಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಇನ್ನೊಂದು ಕಡೆ ತಿವಿಕ್ರಮ್ ಅವರು ಮಂಜು ಅವರ ಹೆಸರನ್ನು ಉಲ್ಲೇಖಿಸಿ,”ಮಂಜಣ್ಣ ಎಲ್ಲೋ ಒಂದು ಕಡೆ ಕಾರಣರಾದರು ಅಂಥ ಮನೋಭಾವನೆ ನನ್ನದು..” ಎಂದಿದ್ದಾರೆ. ಇದಕ್ಕೆ ಮಂಜು “ನಾನು ಯಾರ ಜತೆ ಕೂತ್ಕೊಂಡು ಮಾತನಾಡಬೇಕೆನ್ನುವುದು ಬಿಗ್ ಬಾಸ್ ರೂಲ್ಸ್ ಅಲ್ಲಿ ಇಲ್ಲ. ಮನರಂಜನೆ ಮಾಡಲೇಬೇಕು ಅಂಥ ಆರ್ಡರ್ ಮಾಡೋದು ಯಾವುದು ಇಲ್ಲ.. ಎಂದಿದ್ದಾರೆ. ಇದಕ್ಕೆ ನೀವು ಹುಲಿ ಅಂಥ ತೋರಿಸಿಕೊಂಡು ಈಗ ಬದಲಾದರೆ ನಾವೇನು ಮಾಡೋಕೆ ಆಗಲ್ಲ ಎಂದು ತಿವಿಕ್ರಮ್ ಹೇಳಿದಾಗ, ಮಂಜು ಮಾತು ಮುಂದುವರೆಸಿ, “ ನಿಮ್ಮ ಹತ್ರನೇ ಬರಬೇಕು.. ಹಿಡಿಕ್ಕೋಬೇಕು.. ಎಂದು ಮಂಜು ಗರಂ ಆಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಮತ್ತೆ ಮನೆಯೊಳಗೆ ಕಿಚ್ಚು ಹಚ್ಚಿದ ನಾಮಿನೇಷನ್!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/E3s082PJhR
— Colors Kannada (@ColorsKannada) October 22, 2024
ಮಂಗಳವಾರ ರಾತ್ರಿ(ಅ.22ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bigg Boss: ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ಮುಂದೆ ಆದದ್ದೇನು?
BBK11: ಹನುಮಂತು ಮೇಲೆ ಮುಗಿಬಿದ್ದ ಸ್ಪರ್ಧಿಗಳು; ನನಗೆ ಆಗ್ತಾ ಇಲ್ಲ ಅಂದ ಹಳ್ಳಿಹೈದ
BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು
BBK11: ಹೋದವರನ್ನೆಲ್ಲ ವಾಪಸ್ ಕರೆಸಿದರೆ ಹುಚ್ಚ ವೆಂಕಟ್ ಅವರನ್ನು ಸಹ ಕರೆಸಬೇಕು.. ಕಿಚ್ಚ
BBK11: ರಂಜಿತ್ ನನ್ನ ಸಹೋದರನಂತೆ.. ಮತ್ತೆ ಬಿಗ್ಬಾಸ್ ಹೋಗೋ ಬಗ್ಗೆ ಮೌನ ಮುರಿದ ಜಗದೀಶ್
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಭ್ರಷ್ಟಾಚಾರದ ಜನಕ ಎಂದಿದ್ದ ಸಿದ್ದರಾಮಯ್ಯನವರೂ ಈಗ ಭ್ರಷ್ಟ: ಕಾಗೇರಿ
Thekkatte: ಸಂಪೂರ್ಣ ಹದಗೆಟ್ಟ ಬಿದ್ಕಲ್ಕಟ್ಟೆ-ಕಂಬಿಕಲ್ಲು ರಸ್ತೆ
Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್; ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್ ಜೀವನ?
Kolluru: ವಂಡ್ಸೆ-ಹಾಲ್ಕಲ್ ರಸ್ತೆ ಹೊಂಡಕ್ಕೆ ಮುಕ್ತಿ ಎಂದು?
Hunasagi: ಕೃಷ್ಣಾನದಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.