BBK10: ಬಿಗ್ ಬಾಸ್ ಫಿನಾಲೆಯಲ್ಲಿ ಸುದ್ದಿಯಾದ ವರ್ತೂರು ಹುಲಿ ಉಗುರು
Team Udayavani, Jan 27, 2024, 8:51 PM IST
ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದ ಫಿನಾಲೆಯಲ್ಲಿ ಸ್ಪರ್ಧಿಗಳ ಅನುಭವವನ್ನು ಕೇಳಲಾಗಿದೆ.
ಆರು ಜನ ಸ್ಪರ್ಧೆಗಳಲ್ಲಿ ಫಿನಾಲೆಗೆ ಬಂದ ಕ್ಷಣ ಹಾಗೂ ಕುತೂಹಲದ ಬಗ್ಗೆ ಕೇಳಲಾಗಿದೆ. ಫಿನಾಲೆಗೆ ಬಂದಿದ್ದೇವೆ. ಈ ಮನೆಯಲ್ಲಿ ಕೊನೆಯ ದಿನ ಹಾಗೂ ಇದರ ಬಳಿಕ ಮುಂದೇನು ಎನ್ನುವ ಯೋಚನೆಯಿಂದ ಸರಿಯಾಗಿ ನಿದ್ದೆ ಬಂದಿಲ್ಲ ಎಂದು ವಿನಯ್ ಹೇಳಿದ್ದಾರೆ.
ಈ ಸೀಸನ್ ನಲ್ಲಿ ಸದ್ದು ಮಾಡಿದ ಸ್ಪರ್ಧೆಗಳಲ್ಲಿ ವರ್ತೂರು ಸಂತೋಷ್ ಕೂಡ ಒಬ್ಬರು ಅವರು ಹುಲಿ ಉಗುರು ಧರಿಸಿ, ಜೈಲು ಸೇರಿದ್ದು ಎಲ್ಲೆಡೆ ಸುದ್ದಿಯಾಗಿತ್ತು.
ಹುಲಿ ಉಗುರು ಧರಿಸಿ ಜೈಲಿಗೆ ಹೋಗಿ ಮತ್ತೆ ಬಿಗ್ ಬಾಸ್ ಮನೆಗೆ ವರ್ತೂರು ಬಂದರೂ, ಆ ವಿಚಾರ ಮಾತ್ರ ಮನೆಯೊಳಗೆ ಯಾರಿಗೂ ಗೊತ್ತಾಗಿರಲಿಲ್ಲ. ಅದನ್ನು ವರ್ತೂರು ಆಗಲಿ ಬಿಗ್ ಬಾಸ್ ಬಹಿರಂಗ ಪಡಿಸಿರಲಿಲ್ಲ.
ಫಿನಾಲೆ ವೇದಿಕೆಯಲ್ಲಿ ಈ ಬಗ್ಗೆ ವರ್ತೂರು ಅವರ ಬಳಿ ಹೇಳಿದ್ದಾರೆ. ಒಂದು ನೋವನ್ನು ಮುಚ್ಚಿಕೊಂಡು ಇದ್ದ ಆ ಕ್ಷಣ ಹಾಗೂ ನಿಜಕ್ಕೂ ಆದದ್ದೇನು ಎನ್ನುವುದರ ಬಗ್ಗೆ ವರ್ತೂರು ಅವರ ಬಳಿ ಹೇಳಿ ಎಂದು ಕಿಚ್ಚ ಹೇಳಿದ್ದಾರೆ. ಇದಕ್ಕೆ ವರ್ತೂರು ನೀವೇ ಹೇಳಿ ಎಂದು ಕಿಚ್ಚನ ಬಳಿ ಹೇಳಿದ್ದಾರೆ.
ಇದಕ್ಕೆ ಕಿಚ್ಚ ಅರಣ್ಯಾಧಿಕಾರಿಗಳು ಹುಲಿ ಉಗುರು ಧರಿಸಿದ್ದಕ್ಕೆ ಬಂಧನಕ್ಕೊಳಗಾಗಿದ್ದ ವಿಚಾರವನ್ನು ಎಲ್ಲರ ಮುಂದೆ ಹೇಳಿದರು. ನಿಮ್ಮ ವ್ಯಕ್ತಿತ್ವಕ್ಕೆ ಮೆಚ್ಚಲೇಬೇಕು ಎಂದರು.
ಮನೆಯವರು ವರ್ತೂರು ಅವರ ಈ ವಿಚಾರಕ್ಕೆ ಗೌರವ ತೋರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಂಜು ಬಿಗ್ ಬಾಸ್ ಮನೆಯ ಫಿಟ್ಟಿಂಗ್ ಮಾಸ್ಟರ್ ಎಂದ ಚೈತ್ರಾ
BBK11: ಬಿಗ್ ಬಾಸ್ ಮನೆಗೆ ಬಂದು ಧಿಕ್ಕಾರ ಹಾಕಿದ ಜನಸಾಮಾನ್ಯರು..! ಅಂಥದ್ದೇನಾಯಿತು?
BBK11: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಹೊಡೆದಾಟ; ಅರ್ಧದಲ್ಲೇ ನಿಂತೋಯಿತು ಟಾಸ್ಕ್
Kutumba Awards-2024: ವೀಕೆಂಡ್ ನಲ್ಲಿ ವೀಕ್ಷಕರಿಗೆ ಮನರಂಜನೆಯ ಸಡಗರ
BBK11: ಮಹಿಳಾ ಸ್ಪರ್ಧಿಯ ಹೊಟ್ಟೆಗೆ ಏಟು; ಉಗ್ರಂ ಮಂಜುರನ್ನು ಆಚೆ ಕರೆಸಿ ಎಂದ ನೆಟ್ಟಿಗರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.