Bigg Boss ಸ್ಪರ್ಧಿಗಳಿಗೆ ಸಿಕ್ತು ಮನೆಯವರ ಅಪ್ಪುಗೆ; ಭಾವುಕ ಕ್ಷಣಕ್ಕೆ ಸಾಕ್ಷಿಯಾದ ದೊಡ್ಮನೆ
Team Udayavani, Dec 26, 2023, 12:42 PM IST
ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 10 ಫಿನಾಲೆ ವಾರಕ್ಕೆ ಹತ್ತಿರವಾಗುತ್ತಿದೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದೆ. ಆ ನಿಟ್ಟಿನಲ್ಲಿ ಮನೆಯೊಳಗಿನ ಸ್ಪರ್ಧಿಗಳು ಕೂಡ ತನ್ನ ಗೇಮಿಂಗ್ ಸ್ಟ್ರಾಟಜಿಯನ್ನು ಚೇಂಜ್ ಮಾಡಿಕೊಳ್ಳುತ್ತಿದ್ದಾರೆ.
ಇಷ್ಟು ದಿನ ದೊಡ್ಮನೆಯಲ್ಲಿ ತನ್ನ ದೊಡ್ಡ ಧ್ವನಿಯಿಂದಲೇ ಸದ್ದು ಮಾಡಿದ ವಿನಯ್ ಹಾಗೂ ಸಂಗೀತಾ ಮತ್ತೆ ಸ್ನೇಹಿತರಾಗಿದ್ದಾರೆ. ಇನ್ಮುಂದೆ ಸಾಫ್ಟ್ ಆಗಿ ಗೇಮ್ ಆಡೋದಾಗಿ ವಿನಯ್ ಹೇಳಿರುವುದನ್ನು ಕಳೆದ ಎಪಿಸೋಡ್ ನಲ್ಲಿ ತೋರಿಸಲಾಗಿದೆ. ಈ ನಡುವೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ.
ಅಂತಿಮ ಕೆಲ ವಾರಗಳಲ್ಲಿ ದೊಡ್ಮನೆಯಲ್ಲಿ ಉಳಿದು, ವೀಕ್ಷಕರ ಮನ ಗೆಲ್ಲುವತ್ತ ಸ್ಪರ್ಧಿಗಳು ಗಮನ ಹರಿಸುತ್ತಿರುವುದು ಬಿಗ್ ಬಾಸ್ ಆಟದಲ್ಲಿ ಗೊತ್ತಾಗುತ್ತಿದೆ. ಮನೆ ಬಿಟ್ಟು, ಮೊಬೈಲ್, ಬಂಧು – ಬಳಗದಿಂದ ದೂರವಿದ್ದು ʼಬಿಗ್ ಬಾಸ್ʼ ಮನೆಯಲ್ಲಿರುವ ಸ್ಪರ್ಧಿಗಳಿಗೆ ʼಬಿಗ್ ಬಾಸ್ʼ ಸ್ವೀಟ್ ಸರ್ಪ್ರೈಸ್ ನೀಡಿದ್ದಾರೆ. ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಮನೆಗೆ ಬಂದು ತನ್ನವರಿಗೆ ಪಾಠ ಹೇಳಿದ್ದಾರೆ.
ಎಲ್ಲರೂ ನಿಂತ ಜಾಗದಲ್ಲೇ ನಿಲ್ಲುವಂತೆ ಹೇಳಿ ಮನೆಯವರನ್ನು ಕರೆಸಲಾಗಿದೆ. ವರ್ತೂರು ಸಂತೋಷ್ ಹಾಗೂ ನಮೃತಾ ಅವರ ತಾಯಿ ಬರುವುದನ್ನು ತೋರಿಸಲಾಗಿದೆ. ಮಕ್ಕಳನ್ನು ಅಪ್ಪಿಕೊಂಡು ಭಾವುಕರಾಗುವ ಕ್ಷಣವನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.
ವರ್ತೂರು ಸಂತೋಷ್ ಹಾಗೂ ನಮೃತಾ ಅವರ ತಾಯಿ ಮನೆಯ ಇತರೆ ಸದಸ್ಯರಿಗೆ ಸ್ಪೂರ್ತಿಯ ಮಾತುಗಳನ್ನು ಹೇಳಿ ಧೈರ್ಯ ತುಂಬಲಿದ್ದಾರೆ.
ಇತರೆ ಸ್ಪರ್ಧಿಗಳ ಮನೆಯವರು ಯಾರೆಲ್ಲಾ ಬರುತ್ತಾರೆ ಎನ್ನುವುದರ ಬಗ್ಗೆ ಕುತೂಹಲವನ್ನು ರಿವೀಲ್ ಮಾಡಿಲ್ಲ. ಮನೆಯವರಿಂದ ಮೂರು ವರ್ಷದಿಂದ ದೂರವಿರುವ ಪ್ರತಾಪ್ ಅವರಿಗೆ ಬಿಗ್ ಬಾಸ್ ಯಾವ ಸರ್ಪ್ರೈಸ್ ನೀಡಲಿದ್ದಾರೆ ಎನ್ನುವುದರ ಬಗ್ಗೆಯೂ ಕುತೂಹಲವನ್ನು ಹಾಗೆಯೇ ಇಡಲಾಗಿದೆ.
ಇಂದು ರಾತ್ರಿ(ಡಿ.26 ರಂದು) ಈ ಎಪಿಸೋಡ್ ಪ್ರಸಾರವಾಗಲಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK-11: ಕೊನೆಗೂ ಬಿಗ್ ಬಾಸ್ ಆ್ಯಂಕರ್ ಮುಖ ರಿವೀಲ್… ಶೋ ಆರಂಭಕ್ಕೆ ಡೇಟ್ ಫಿಕ್ಸ್
Bigg Boss 18: ಬಿಗ್ಬಾಸ್ನಲ್ಲಿ ಭಾಗಿಯಾಗಲು ನಟನಿಗೆ 5 ಕೋಟಿ ಆಫರ್; ಯಾರೀತ?
Tv Actor Varun: ಪ್ರೀತಿಸಿ ದ್ರೋಹ, ಧಮ್ಕಿ; ನಟ ವರುಣ್ ಮೇಲೆ ಕೇಸ್
Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !
BBK-11: ಕಿಚ್ಚನ ಹೆಸರು ತೆಗೆದು ಹಾಕಿದ ವಾಹಿನಿ; ಬಿಗ್ ಬಾಸ್ಗೆ ಸುದೀಪ್ ಅನುಮಾನ?
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.