![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 30, 2023, 5:22 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಇನ್ನೇನು ಕೆಲವೇ ವಾರದಲ್ಲಿ ಫಿನಾಲೆ ನಡೆಯಲಿದೆ.
ಈ ವಾರ ಬಿಗ್ ಬಾಸ್ ಮನೆಗೆ ಸ್ಪರ್ಧೆಗಳ ಮನೆಯವರು ಬಂದಿದ್ದಾರೆ. ತಮ್ಮವರ ಜೊತೆ ಸಮಯ ಕಳೆದು ಸಂತೋಷದಲ್ಲಿದ್ದ ಸ್ಪರ್ಧೆಗಳಲ್ಲಿ ನಾಮಿನೇಷನ್ ನಂತರ ಮತ್ತೆ ಚರ್ಚೆಗಳು ಆರಂಭಗೊಂಡಿದೆ. ಕಿಚ್ಚನ ಪಂಚಾಯತ್ ನಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.
ಕಳೆದ ವಾರ ಕೆಸಿಸಿ ಕಪ್ ನಿಂದ ಗೈರಾಗಿದ್ದ ಕಿಚ್ಚ ಈ ವಾರ ಸ್ಪರ್ಧಿಗಳಿಗೆ ಕಾಫಿ ಕಪ್ ನೀಡಿ ಪರೋಕ್ಷವಾಗಿ ಮನೆಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.
ಇನ್ನು ಇಂದು ಬಿಗ್ ಬಾಸ್ ಮನೆಗೆ ‘ಕಾಂತಾರ’ ನಟಿ ಸಪ್ತಮಿ ಗೌಡ ಅವರು ಆಗಮಿಸಿ ಹೆಣ್ಣುಮಕ್ಕಳಿಗೆ ಆರೋಗ್ಯ ಜಾಗೃತಿ ಮೂಡಿಸಲಿದ್ದಾರೆ.
ಕರ್ನಾಟಕ ಸರ್ಕಾರ ‘ಮೈತ್ರಿ ಮುಟ್ಟಿನ ಕಪ್’ ಯೋಜನೆಯನ್ನು ಜಾರಿ ಮಾಡಿ ಅದರ ರಾಯಭಾರಿಯಾಗಿ ಸಪ್ತಮಿ ಅವರನ್ನು ನೇಮಿಸಿದೆ. ಈ ಯೋಜನೆಯ ಬಗ್ಗೆ ಸಪ್ತಮಿ ಇಂದು ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ.
“ನಾನು ಬಿಗ್ ಬಾಸ್ ಮನೆಗೆ ಬರೋಕೆ ಕಾರಣವೆಂದರೆ, ಸರ್ಕಾರ ‘ಮೈತ್ರಿ ಮುಟ್ಟಿನ ಕಪ್’ ಎನ್ನುವ ಯೋಜನೆಯನ್ನು ಆರಂಭಿಸಿದೆ. ಶೇ. 80ರಷ್ಟು ಹೆಣ್ಣು ಮಕ್ಕಳು ಈ ʻಮುಟ್ಟಿನ ಕಪ್ʼನ್ನು ಬಳಕೆ ಮಾಡುತ್ತಿದ್ದಾರೆ. ಪ್ಯಾಡ್ಸ್ನಿಂದ ಈ ಕಪ್ ಕಡೆಗೆ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕು. ಇಲ್ಲಿ ಕೂಡ ಹೆಣ್ಣು ಮಕ್ಕಳು ಇದ್ದೀರಾ” ಎಂದು ಹೇಳಿ ಮುಟ್ಟಿನ ಕಪ್ ನ್ನು ಮಹಿಳಾ ಸ್ಪರ್ಧಿಗಳಿಗೆ ನೀಡುವುದನ್ನು ತೋರಿಸಲಾಗಿದೆ.
ಇಂದು ರಾತ್ರಿ(ಡಿ.30) ಎಪಿಸೋಡ್ ಪ್ರಸಾರವಾಗಲಿದೆ.
View this post on Instagram
Bro Gowda: ನಿಶ್ಚಿತಾರ್ಥ ಮಾಡಿಕೊಂಡ ʼಲಕ್ಷ್ಮೀ ಬಾರಮ್ಮʼ ಖ್ಯಾತಿಯ ಬ್ರೋ ಗೌಡ: ಹುಡುಗಿ ಯಾರು?
Controversy: ಅಶ್ಲೀಲ ಹೇಳಿಕೆ: 2ನೇ ಬಾರಿಗೆ ರಣವೀರ್ ಅಲಹಾಬಾದಿಯಾಗೆ ಪೊಲೀಸರ ಸಮನ್ಸ್
Zee Entertainers Comedy Awards 2025: ಜೀ ಕನ್ನಡದಲ್ಲಿ ‘ಕಾಮಿಡಿ’ ಸಮಾಗಮ!
TRP: ಟಿಆರ್ಪಿಯಲ್ಲಿ ದಾಖಲೆ ಬರೆದ ʼಬಿಗ್ ಬಾಸ್ʼ ಫಿನಾಲೆ ಸಂಚಿಕೆ; ಪಡೆದ ಟಿವಿಆರ್ ಎಷ್ಟು?
Bharjari Bachelors Show: ʼಬ್ಯಾಚುಲರ್ಸ್’ ಬದುಕಿಗೆ ಬಣ್ಣ ತುಂಬಲು ಬಂದ ಕ್ರೇಜಿ ಸ್ಟಾರ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.