BBK-11: ಬಿಗ್‌ ಬಾಸ್‌ ಮನೆಗೆ ಹೋಗೋ ಸ್ಪರ್ಧಿಗಳ ಫೋಟೋಸ್‌ ಲೀಕ್..‌ ಇವರೇ ನೋಡಿ ಅವರು..

ಖ್ಯಾತ ನಟಿಯರೂ ಇದ್ದಾರೆ ಈ ಪಟ್ಟಿಯಲ್ಲಿ..

Team Udayavani, Sep 26, 2024, 12:36 PM IST

3

ಬೆಂಗಳೂರು: ಬಿಗ್‌ ಬಾಸ್ ಕನ್ನಡ-11 (Bigg Boss Kannada-11) ಆರಂಭಕ್ಕೆ  ಮೂರೇ ದಿನ ಬಾಕಿ ಉಳಿದಿದೆ. ಪ್ರತಿ ಬಾರಿಯ ಬಿಗ್‌ ಬಾಸ್‌ ಗಿಂತ ಈ ಬಾರಿಯ ಶೋ ಕೊಂಚ ಡಿಫ್ರೆಂಟ್‌ ಆಗಿ ಇರಲಿದೆ ಎನ್ನುವ ಕಾರಣಕ್ಕೆ ಕುತೂಹಲ ಹೆಚ್ಚಾಗಿದೆ.

ಕಿಚ್ಚ ಸುದೀಪ್ (Kiccha Sudeep) ಪ್ರೋಮೊದಲ್ಲಿ ಸಖತ್‌ ಸ್ಟೈಲಿಸ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಖಡಕ್‌ ಆಗಿ ಸ್ವರ್ಗ – ನರಕಕ್ಕೆ ಬರುವ ಸ್ಪರ್ಧಿಗಳ ಸ್ವಾಗತಕ್ಕೆ ಕಿಚ್ಚ ರೆಡಿಯಾಗಿರುವಂತೆ ಕಾಣುತ್ತಿದೆ.

ಈ ಸಲಿ ಶೋ ಗ್ರ್ಯಾಂಡ್‌ ಪ್ರಿಮಿಯರ್‌ ಆಗುವ ಮುನ್ನವೇ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡುತ್ತಿರುವುದು ಬಿಗ್‌ ಬಾಸ್‌ -11ರ ಹೊಸ ಟ್ವಿಸ್ಟ್.‌

ನಿನ್ನೆಯಷ್ಟೇ(ಸೆ.25ರಂದು) ಕಲರ್ಸ್‌ ಕನ್ನಡ 11ರ ಬಿಗ್ ಬಾಸ್ ನಲ್ಲಿ ಒಂದಲ್ಲ – ಎರಡು ಮನೆ. ಸ್ವರ್ಗ – ನರಕ. ಬಿಗ್ ಬಾಸ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿ ಅಸಲಿ ಆಟ ನಿಮ್ಮಿಂದ ಶುರುವಾಗುತ್ತಿದೆ. ಮನೆಯೊಳಗೆ ಹೋಗುವ ಸ್ಪರ್ಧಿಗಳ ಹೆಸರನ್ನು ನಾವು ಹೇಳುತ್ತೇವೆ. ಅವರು ಸ್ವರ್ಗಕ್ಕೆ ಹೋಗಬೇಕಾ, ನರಕಕ್ಕೆ ಹೋಗಬೇಕಾ ಅನ್ನೋ ನಿರ್ಧಾರ ನಿಮ್ಮ ಕೈಯಲ್ಲಿದೆ ಎಂದು ಸುದೀಪ್ ಹೇಳುವ ವಿಡಿಯೋವನ್ನು ರಿಲೀಸ್‌ ಮಾಡಿತ್ತು.

ವೋಟ್‌ ಮಾಡುವ ಯಾರನ್ನು ಸ್ವರ್ಗಕ್ಕೆ, ಯಾರನ್ನು ನರಕಕ್ಕೆ ಕಳುಹಿಸಬೇಕೆನ್ನುವ ನಿರ್ಧಾರವನ್ನು ಪ್ರೇಕ್ಷಕರಿಗೆ ಬಿಡಲಾಗಿದೆ.

ಆದರೆ ರಿಲೀಸ್‌ ಆಗಿರುವ ಪ್ರೋಮೊದಲ್ಲೇ ಸ್ಪರ್ಧಿಗಳ ಫೋಟೋ ಝಲಕ್‌ ಬಿಡಲಾಗಿದೆ. ಆದರೆ ಅದು ಸ್ಪಷ್ಟವಾಗಿ ಕಾಣುವುದಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಈ ಕುರಿತ ಸ್ಕ್ರೀನ್‌ ಶಾಟ್‌ ಹರಿದಾಡುತ್ತಿದೆ.

ಕೆಂಪು ಲೈಟಿನ ಕತ್ತಲಿನ ಪ್ರೋಮೊದಲ್ಲಿ ಕೆಲ ಸ್ಪರ್ಧಿಗಳ ಮುಖವನ್ನು ಅಸ್ಪಷ್ಟವಾಗಿ ತೋರಿಸಲಾಗಿದೆ.

ರೀಲ್ಸ್‌ ಮೂಲಕ ಖ್ಯಾತಿ ಆಗಿರುವ ಭೂಮಿಕ ಬಸವರಾಜ್‌, ʼಸತ್ಯʼ ಧಾರವಾಹಿ ಖ್ಯಾತಿಯ ಗೌತಮಿ ಜಾಧವ್‌, ‘ಕನ್ನಡತಿ’ ಸೀರಿಯಲ್‌ ಖ್ಯಾತಿಯ ಕಿರಣ್ ರಾಜ್, ‘ಒಲವಿನ ನಿಲ್ದಾಣ’ ಸೀರಿಯಲ್‌ ನಟ ಅಕ್ಷಯ್ ನಾಯಕ್, ಎಸ್ ನಾರಾಯಣ್ ಅವರ ಪುತ್ರ ಪಂಕಜ್, , ನಟಿ ಭಾವನಾ ಮೆನನ್‌, ನಟಿ ಪ್ರೇಮಾ ಈ ಪ್ರೋಮೊದಲ್ಲಿ ಇದ್ದಾರೆ ಎಂದು ನೆಟ್ಟಿಗರು ಅಂದಾಜಿಸಿದ್ದಾರೆ.

ಆದರೆ ಇದನ್ನು ನೋಡಿ ಕೆಲವರು ನಭಾ ನಟೇಶ್‌, ಭಾವನಾ, ಹರಿಪ್ರಿಯಾ ಇರುವುದು ಡೌಟ್‌ ಎಂದು ಹೇಳುತ್ತಿದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸ್ಪರ್ಧಿಗಳ ಫೋಟೋಗಳು ಜೋರಾಗಿ ಹರಿದಾಡಿದೆ.

ಇದೇ ಶನಿವಾರ ಸಂಜೆ ನಡೆಯುವ ʼರಾಜಾರಾಣಿʼ ಗ್ರ್ಯಾಂಡ್‌ ಫಿನಾಲೆ ಸಂದರ್ಭದಲ್ಲಿ ಕೆಲ ಸ್ಪರ್ಧಿಗಳ ಹೆಸರು ರಿವೀಲ್‌ ಆಗಲಿದೆ. ಸೆ.29ರಿಂದ ಬಿಗ್‌ ಬಾಸ್‌ ಶುರುವಾಗಲಿದೆ.

ಸಂಭಾವ್ಯರ ಪಟ್ಟಿ ಇಲ್ಲಿವೆ:
ಚೈತ್ರಾ ಕುಂದಾಪುರ, ಅವಿನಾಶ್ (ಜೂನಿಯರ್ ದರ್ಶನ್), ಪವಿ ಪಡುಕೋಣೆ, ಕರಣ್‌ ಕೆಆರ್, ಅನುಷಾ ರೈ, ಕೆಜಿಎಫ್‌ ಬಾಬು,
ಹುಲಿ ಕಾರ್ತಿಕ್‌, ಗೌರವ್‌ ಶೆಟ್ಟಿ, ಮಾನಸ ಸಂತು, ಹರೀಶ್ ನಾಗರಾಜ್, ಐಶ್ವರ್ಯಾ ರಂಗರಾಜನ್, ಅಮೂಲ್ಯ ಭಾರದ್ವಾಜ್, ಭವ್ಯಾ ಗೌಡ, ದೀಪಕ್‌ ಗೌಡ, ಲೇಖಿ ಗೋಸ್ವಾಮಿ, ರೇಷ್ಮಾ, ಚಂದ್ರಪ್ರಭ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ನಟ ತ್ರಿವಿಕ್ರಮ್, ನಟಿ ಸುಕೃತಾ ನಾಗ್, ಶರತ್ ಕುಮಾರ್ ಹೆಸರು ಸಹ ಬಿಗ್‌ ಬಾಸ್‌ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದೆ.

 

ಟಾಪ್ ನ್ಯೂಸ್

High-Court

High Court: ಪ್ರಜ್ವಲ್‌ “ಮಾಸ್‌ ರೆಪಿಸ್ಟ್‌’ ಹೇಳಿಕೆ: ರಾಹುಲ್‌ ತುರ್ತು ವಿಚಾರಣೆ ಇಲ್ಲ!

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

1-ttt

Karnataka; ರಾಜ್ಯ ಟೆನಿಸ್‌ ಅಂಕಣಗಳಿಗೆ ಅತ್ಯಾಧುನಿಕ ಸ್ಪರ್ಶ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

1-team

Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್‌  ಇಂದಿನಿಂದ

MONEY (2)

Minimum wages; ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸಿದ ಕೇಂದ್ರ

online

400 crores ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ ವಂಚನೆ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK-11: ನಾನು ಯಾವ ಮನೆಗೂ ಹೋಗ್ತಿಲ್ಲ.. ಬಿಗ್ ಬಾಸ್ ಗೆ ಹೋಗಲ್ಲ ಎಂದ ಕನ್ನಡದ ಖ್ಯಾತ ನಟಿ

BBK-11: ನಾನು ಯಾವ ಮನೆಗೂ ಹೋಗ್ತಿಲ್ಲ.. ಬಿಗ್ ಬಾಸ್ ಗೆ ಹೋಗಲ್ಲ ಎಂದ ಕನ್ನಡದ ಖ್ಯಾತ ನಟಿ

BBK11: ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆಗೆ ಪ್ರೇಕ್ಷಕರೇ ಪ್ರಭುಗಳು

BBK11: ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆಗೆ ಪ್ರೇಕ್ಷಕರೇ ಪ್ರಭುಗಳು

7

BB18: ಬಿಗ್‌ಬಾಸ್‌ ಮನೆಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ನಟ ಮಹೇಶ್‌ ಬಾಬು ಸಂಬಂಧಿ; ಯಾರೀಕೆ?

16

BBK11: ಸ್ಪರ್ಧಿಗಳ ಆಯ್ಕೆಗೆ ವೋಟಿಂಗ್‌ To ಫೇಸ್‌ ರಿವೀಲ್; ಹೇಗಿರಲಿದೆ ಈ ಬಾರಿ ಬಿಗ್‌ಬಾಸ್?

Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್‌ ಮನೆಯ ಫೋಟೋಸ್ ವೈರಲ್

Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್‌ ಮನೆಯ ಫೋಟೋಸ್ ವೈರಲ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

High-Court

High Court: ಪ್ರಜ್ವಲ್‌ “ಮಾಸ್‌ ರೆಪಿಸ್ಟ್‌’ ಹೇಳಿಕೆ: ರಾಹುಲ್‌ ತುರ್ತು ವಿಚಾರಣೆ ಇಲ್ಲ!

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

1-ttt

Karnataka; ರಾಜ್ಯ ಟೆನಿಸ್‌ ಅಂಕಣಗಳಿಗೆ ಅತ್ಯಾಧುನಿಕ ಸ್ಪರ್ಶ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

1-team

Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್‌  ಇಂದಿನಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.