Bigg Boss Kannada ಸೀಸನ್‌ 11ರ ಆರಂಭಕ್ಕೆ ಸಿದ್ಧತೆ; ಸ್ಪರ್ಧಿಗಳಾಗಿ ಬರುವವರು ಇವರೇನಾ?


Team Udayavani, Jul 18, 2024, 1:49 PM IST

Bigg Boss Kannada ಸೀಸನ್‌11ರ ಆರಂಭಕ್ಕೆ ಸಿದ್ಧತೆ; ಸ್ಪರ್ಧಿಗಳಾಗಿ ಬರುವವರು ಇವರೇನಾ?

ಬೆಂಗಳೂರು: ಬಿಗ್ ಬಾಸ್‌ (BIGG BOSS) ಕಾರ್ಯಕ್ರಮಕ್ಕೆ ಆಯಾ ಭಾಷೆಯಲ್ಲಿ ಪ್ರತ್ಯೇಕವಾದ ವೀಕ್ಷಕರ ಬಳಗವೇ ಇದೆ. ಅದು ಯಾವುದೇ ಭಾಷೆಯಲ್ಲಿರಲಿ ʼಬಿಗ್‌ ಬಾಸ್‌ʼ ವಿವಾದಾತ್ಮಕ ಕಾರ್ಯಕ್ರಮವೆನ್ನುವ ಹಣೆಪಟ್ಟಿಯನ್ನೇ ಹೊಂದಿದೆ. ಅದಕ್ಕೆ ಕಾರಣ ದೊಡ್ಮನೆಯೊಳಗೆ ನಡೆಯುವ ಕೆಲ ಚಟುವಟಿಕೆ ಹಾಗೂ ಸ್ಪರ್ಧಿಗಳೆಂದರೆ ತಪ್ಪಾಗದು.

ಇತ್ತೀಚೆಗೆ ಬಿಗ್ ಬಾಸ್ ಮಲಯಾಳಂ ಸೀಸನ್ 6 ಮುಕ್ತಾಯ ಕಂಡಿದೆ. ಸದ್ಯ ಹಿಂದಿ ಬಿಗ್‌ ಬಾಸ್‌ ಓಟಿಟಿ ಸೀಸನ್‌ ಸಾಗುತ್ತಿದೆ. ಈ ನಡುವೆ ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಕನ್ನಡ ಬಿಗ್‌ ಬಾಸ್‌ ಕಾರ್ಯಕ್ರಮದ 11ನೇ ಸೀಸನ್‌ ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಕಿರುತೆರೆ, ಬೆಳ್ಳಿತೆರೆ, ಮಾಧ್ಯಮ, ರಾಜಕೀಯ, ಸಾಮಾಜಿಕ, ಸೋಶಿಯಲ್‌ ಮೀಡಿಯಾ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆಗೈದ, ವಿವಾದದ ಮೂಲಕ ಸುದ್ದಿಯಾದ ಒಂದಷ್ಟು ಜನರು ಸ್ಪರ್ಧಿಗಳಾಗಿ ಕ್ಯಾಮರಾ ಕಣ್ಗಾವಲಿನ ʼಬಿಗ್‌ ಬಾಸ್‌ʼ ಮನೆಯೊಳಗೆ ಎಂಟ್ರಿ ಆಗುತ್ತಾರೆ.

ಕನ್ನಡದಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ಹೆಚ್ಚಿನ ವೀಕ್ಷಕರಿದ್ದಾರೆ. ಕಿಚ್ಚ ಸುದೀಪ್‌ (Kichcha Sudeep) ಅವರು ನಡೆಸಿಕೊಡುವುದರಿಂದ ಈ ಕಾರ್ಯಕ್ರಮ ಕಿರುತೆರೆಯಲ್ಲಿ ಹೊಸ ಬಗೆಯ ದಾಖಲೆಯನ್ನು ಪ್ರತಿ ಸೀಸನ್‌ ನಲ್ಲೂ ಬರೆಯುತ್ತದೆ.

ಯಾವಾಗ ಶುರು ಬಿಗ್‌ ಬಾಸ್‌ ಸೀಸನ್ 11?:

ಇದೀಗ ಬಿಗ್‌ ಬಾಸ್‌ ಸೀಸನ್‌ 11ರ ಆರಂಭಕ್ಕೆ ಸಿದ್ದತೆಗಳು ನಡೆಯುತ್ತಿದೆ ಎಂದು ವರದಿಯಾಗಿದೆ. ಬೆಂಗಳೂರು ಹೊರವಲಯದಲ್ಲಿ ನಡೆಯುವ ಬಿಗ್‌ ಬಾಸ್‌ ಕಾರ್ಯಕ್ರಮದ ಮನೆಯ ತಯಾರಿಗಾಗಿ ನೂರಾರು ಜನರ ಅಗತ್ಯವಿರುತ್ತದೆ. ಇದಕ್ಕಾಗಿ ತಿಂಗಳುಗಟ್ಟಲೆ ಸಮಯಬೇಕು. ಹಾಗಾಗಿ ಸೆಪ್ಟೆಂಬರ್‌ ಅಂತ್ಯಕ್ಕೆ ಅಥವಾ ಅಕ್ಟೋಬರ್‌ 3ನೇ ವಾರದಿಂದ ಹೊಸ ಸೀಸನ್‌ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ.

ಇವರೇನಾ ಸ್ಪರ್ಧಿಗಳು.. ಪ್ರತಿ ಸೀಸನ್‌ ನಲ್ಲಿ ಬಿಗ್‌ ಬಾಸ್‌ ಆರಂಭವಾಗುವ ಮುನ್ನವೇ ಸ್ಪರ್ಧಿಗಳು ಯಾರಾಗಲಿದ್ದಾರೆ ಎನ್ನುವುದೇ ಕುತೂಹಲದ ವಿಚಾರ. ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಷ್ಟು ಸುಲಭದಲ್ಲ. ವಿವಿಧ ಕ್ಷೇತ್ರಗಳ ಜೊತೆ ವಿವಿಧ ಮನಸ್ಥಿತಿಯವರು ದೊಡ್ಮನೆಯೊಳಗೆ ಇದ್ದರೆ ಆಟ ಸಾಗುವ ರೀತಿ ನೋಡುವುದೇ ಚೆಂದ. ಹಾಗಾಗಿ ಆಯೋಜಕರಿಗೆ ಇದೊಂದು ಸವಾಲೇ ಸರಿ.

ಬಿಗ್‌ ಬಾಸ್‌ ಸೀಸನ್ 11 ಆರಂಭವಾಗಲಿದೆ ಎನ್ನುವ ದೂರದ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ ಸ್ಪರ್ಧಿಗಳು ಯಾರು ಎನ್ನುವುದರ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ʼಮಜಾಭಾರತʼ ಖ್ಯಾತಿಯ ರಾಘವೇಂದ್ರ, ಯೂಟ್ಯೂಬರ್‌ ವರ್ಷಾ ಕಾವೇರಿ, ನಟ ತ್ರಿವಿಕ್ರಮ್‌ ,‘ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯ, ತುಕಾಲಿ ಸಂತು ಪತ್ನಿ ಮಾನಸಾ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಸೇರಿದಂತೆ ಇತರರ ಹೆಸರು ಕೂಡ ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧಿಗಳ ಲಿಸ್ಟ್‌ ನಲ್ಲಿ ಕೇಳಿ ಬರುತ್ತಿದೆ. ಆದರೆ ಅಧಿಕೃತ ಮಾಹಿತಿ ಹೊರಬರಲು ಇನ್ನೂ ಕೆಲ ತಿಂಗಳುಗಳೇ ಬೇಕು.

ಸೀಸನ್‌ 10ರಲ್ಲಿ ಹತ್ತಾರು ವಿವಾದಗಳು.. ಕಳೆದ ಸೀಸನ್‌ ಅಂದರೆ ಬಿಗ್‌ ಬಾಸ್‌ ಸೀಸನ್‌ 10 ಕಾರ್ಯಕ್ರಮದಲ್ಲಿ ಹತ್ತಾರು ವಿವಾದಗಳು ಎಬ್ಬಿದ್ದವು. ಹುಲಿ ಉಗುರು ಧರಿಸಿದ್ದಾರೆ ಎನ್ನುವ ಆರೋಪದ ಮೇಲೆ ವರ್ತೂರು ಸಂತೋಷ್‌ ಅವರನ್ನು ಅರಣ್ಯ ಅಧಿಕಾರಿಗಳು ಬಿಗ್‌ ಬಾಸ್‌ ಮನೆಯೊಳಗೆ ಬಂದೇ ವಶಕ್ಕೆ ಪಡೆದುಕೊಂಡಿದ್ದರು. ಈ ಸುದ್ದಿ ಅಂದು ಟಿವಿ ಮಾಧ್ಯಮಗಳಲ್ಲಿ ಹತ್ತಾರು ದಿನ ಸುದ್ದಿಯಾಗಿತ್ತು. ಸಮುದಾಯವೊಂದರ ಬಗ್ಗೆ ತನಿಷಾ ಕುಪ್ಪಂಡ ಅವರು ಅವಮಾನವಾಗುವ ರೀತಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಟಾಸ್ಕ್‌ ವೊಂದರಲ್ಲಿ ಕಣ್ಣಿಗೆ ಸೋಪಿನ ನೀರು ತಾಗಿ ಸಂಗೀತಾ , ಡ್ರೋನ್‌ ಪ್ರತಾಪ್‌ ಆಸ್ಪತ್ರೆಗೆ ಸೇರಿದ್ದರು.

ಕಳೆದ ಸೀಸನ್‌ ನಲ್ಲಿ ಕಿಚ್ಚ ಸುದೀಪ್‌ ಅವರು ಸಿನಿಮಾ ಚಿತ್ರೀಕರಣದ ಕಾರಣ, ಕೆಲ ಎಪಿಸೋಡ್‌ ಗಳನ್ನು ಮಿಸ್‌ ಮಾಡಿಕೊಂಡಿದ್ದರು. ಈ ಬಾರಿ ಕಿಚ್ಚ ಸುದೀಪ್‌ ಅವರೇ ಕಾರ್ಯಕ್ರಮ ನಡೆಸಿಕೊಡುತ್ತಾರೋ ಅಥವಾ ಬೇರೆ ಯಾರಾದರೂ ನಡೆಸಿಕೊಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.

ಟಾಪ್ ನ್ಯೂಸ್

Accident-Logo

Accident: ದುಬಾೖಯಲ್ಲಿ ಅಪಘಾತ: ಗೋಕಾಕದ ನಾಲ್ವರ ಸಾವು

Ravikumar

MUDAದಲ್ಲಿ ನಡೆದ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಎಂಎಲ್‌ಸಿ ರವಿಕುಮಾರ್‌

DK-Shiva-Kumar

By Election: ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ: ಡಿಸಿಎಂ ಡಿ.ಕೆ. ಶಿವಕುಮಾರ್‌ ಪುನರುಚ್ಚಾರ

Rastra-pathi-Bhavan

CM ಅಭಿಯೋಜನೆ: ರಾಷ್ಟ್ರಪತಿಗಳಿಗೆ ಕಾಂಗ್ರೆಸ್‌ ಮಾಡಿದ್ದ ಮನವಿಗೆ ಸ್ಪಂದನೆ

air india

Air India ಜತೆ ವಿಲೀನ: ಸೆ.3ರ ಬಳಿಕ ವಿಸ್ತಾರ ಟಿಕೆಟ್‌ ಬುಕ್ಕಿಂಗ್‌ ಇಲ್ಲ!

Supreme Court

Supreme Court: ಇತ್ಯರ್ಥಕ್ಕೆ ಬಾಕಿ ಉಳಿದಿವೆ 83 ಸಾವಿರ ಪ್ರಕರಣಗಳು

Congress-Symbol

AICC: ರಾಜ್ಯಕ್ಕೆ ಕಾಂಗ್ರೆಸ್‌ನಿಂದ ನಾಲ್ವರು ಕಾರ್ಯದರ್ಶಿಗಳ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karen Kshiti Suvarna: ಕ್ಷಿತಿಗೆ ಪ್ರಶಸ್ತಿ ಖುಷಿ ಹೈಡ್‌ ಆ್ಯಂಡ್‌ ಸೀಕ್‌ ಕಿರುಚಿತ್ರ

Karen Kshiti Suvarna: ಕ್ಷಿತಿಗೆ ಪ್ರಶಸ್ತಿ ಖುಷಿ ಹೈಡ್‌ ಆ್ಯಂಡ್‌ ಸೀಕ್‌ ಕಿರುಚಿತ್ರ

BIGG BOSS: ಕನ್ನಡ, ತಮಿಳು, ತೆಲುಗು, ಹಿಂದಿ.. ಬಿಗ್‌ಬಾಸ್‌ ಆರಂಭಕ್ಕೆ ಕೌನ್‌ ಡೌನ್‌ ಶುರು

BIGG BOSS: ಕನ್ನಡ, ತಮಿಳು, ತೆಲುಗು, ಹಿಂದಿ.. ಬಿಗ್‌ಬಾಸ್‌ ಆರಂಭಕ್ಕೆ Countdown ಶುರು

12

Bigg Boss Kannada 11: ಶೀಘ್ರ ಬಿಗ್‌ ಬಾಸ್‌ ಪ್ರೋಮೊ ರಿಲೀಸ್;‌ ಈ ಬಾರಿಯೂ ಕಿಚ್ಚನೇ ಕಿಂಗ್

10

Bigg Boss Tamil: ಕಮಲ್‌ ಹಾಸನ್‌ ಜಾಗಕ್ಕೆ ಬರಲಿದ್ದಾರಾ ಈ ಜನಪ್ರಿಯ ನಟ?

Bigg Boss Kannada: ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್‌ ಇರಲ್ವಾ? ಚರ್ಚೆ ಜೋರು

Bigg Boss Kannada: ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್‌ ಇರಲ್ವಾ? ಚರ್ಚೆ ಜೋರು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Accident-Logo

Accident: ದುಬಾೖಯಲ್ಲಿ ಅಪಘಾತ: ಗೋಕಾಕದ ನಾಲ್ವರ ಸಾವು

Ravikumar

MUDAದಲ್ಲಿ ನಡೆದ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಎಂಎಲ್‌ಸಿ ರವಿಕುಮಾರ್‌

DK-Shiva-Kumar

By Election: ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ: ಡಿಸಿಎಂ ಡಿ.ಕೆ. ಶಿವಕುಮಾರ್‌ ಪುನರುಚ್ಚಾರ

Rastra-pathi-Bhavan

CM ಅಭಿಯೋಜನೆ: ರಾಷ್ಟ್ರಪತಿಗಳಿಗೆ ಕಾಂಗ್ರೆಸ್‌ ಮಾಡಿದ್ದ ಮನವಿಗೆ ಸ್ಪಂದನೆ

Parliment New

Waqf Act: ಜನರ ಸಲಹೆ ಸ್ವೀಕಾರಕ್ಕೆ ಜೆಪಿಸಿ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.