BBK11: ಬಿಗ್ಬಾಸ್ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಕಾಮಿಡಿಯನ್ ಧನರಾಜ್; ಅಂಥದ್ದೇನಾಯ್ತು
Team Udayavani, Oct 2, 2024, 1:46 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannda-11) ಆರಂಭವಾಗಿ ಎರಡು ದಿನ ಕಳೆದಿದೆ ಅಷ್ಟೇ. ಆದರೆ ಸ್ಪರ್ಧಿಗಳ ನಡುವಿನ ಟಾಕ್ ಫೈಟ್ ತಾರರಕ್ಕೇರಿದೆ.
ಎರಡು ದಿನಗಳ ದೊಡ್ಮನೆ ಆಟದಲ್ಲಿ ಸ್ವರ್ಗ ಹಾಗೂ ನರಕದ ನಿವಾಸಿಗಳು ಪರಸ್ಪರ ಆರೋಪ – ಪ್ರತ್ಯಾರೋಪ ಮಾಡುತ್ತಿದ್ದಾರೆ. ನಾಮಿನೇಷನ್ ಪ್ರಕ್ರಿಯೆಗಳು ನಡೆದಿದ್ದು, ಕೆಲ ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ.
ಜಗದೀಶ್, ಯಮುನಾ, ಮಂಜು, ಹಂಸಾ, ಭವ್ಯಾ ನಾಮಿನೇಟ್ ಆಗಿದ್ದು, ಶಿಶಿರ್, ಮಾನಸ, ಮೋಕ್ಷಿತಾ ಟಾಸ್ಕ್ ನಲ್ಲಿ ಸೋತ ಕಾರಣ ನೇರವಾಗಿ ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ ಮೊದಲೇ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: Kollywood: ಮೂವರು ಗಂಡಂದಿರಿಗೆ ವಿಚ್ಚೇದನ ಕೊಟ್ಟು 4ನೇ ಮದುವೆಗೆ ಸಜ್ಜಾದ ಖ್ಯಾತ ನಟಿ
ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ನ ಉಸ್ತುವಾರಿಯನ್ನು ಧನರಾಜ್ (Dhanraj Achar) ವಹಿಸಿಕೊಂಡಿದ್ದಾರೆ. ಟಾಸ್ಕ್ ಮಾಡುವಾಗ ಜಗದೀಶ್ ಅವರ ಮೈ ತಾಗಿ ಒಬ್ಬ ಮಹಿಳಾ ಸ್ಪರ್ಧಿ ಕೆಳಗೆ ಬಿದ್ದಿದ್ದಾರೆ. ಇದನ್ನು ಧನರಾಜ್ ಅವರು ಇದು ಗಣನೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಜಗದೀಶ್ ಅವರು ಅಸಮಾಧಾನಗೊಂಡು ನೀವು ರೆಫ್ರಿ ನಿಲ್ಲೋಕೆ ಲಾಯಕ್ಕಿಲ್ಲ ಎಂದಿದ್ದಾರೆ. ಇದಕ್ಕೆ ಧನರಾಜ್ ಅವರು ಗರಂ ಆಗಿದ್ದು ನೀವ್ಯಾರೂ ಹೇಳೋಕೆ ಎಂದು ರೋಷವೇಷ ತಾಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಇನ್ನೊಂದು ಪ್ರೋಮೊದಲ್ಲಿ ಧನರಾಜ್ ಅವರು ಬಿಗ್ ಬಾಸ್ ಬಳಿ ಬಂದು ಭಾವುಕರಾಗಿರುವುದನ್ನು ತೋರಿಸಲಾಗಿದೆ. ನಾನು ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಿದ್ದೀನಿ ಬಿಗ್ ಬಾಸ್. ಕಷ್ಟ ಅನ್ನಿಸುತ್ತಿದೆ ಬಿಗ್ ಬಾಸ್. ಕೊಟ್ಟಿರುವ ಟಾಸ್ಕ್ ಸರಿಯಾಗಿ ಮಾಡೋಕೆ ಆಗಿಲ್ಲ ಎಂದು ಧನರಾಜ್ ಬಿಗ್ ಬಾಸ್ ಮುಂದೆ ಭಾವುಕರಾಗಿದ್ದಾರೆ.
ಇಂದು ರಾತ್ರಿ(ಅ.2ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
View this post on Instagram
ಯೂಟ್ಯೂಬ್ ಹಾಗೂ ರೀಲ್ಸ್ ನಲ್ಲಿ ಕಾಮಿಡಿ ವಿಡಿಯೋಸ್ ಮಾಡುತ್ತಲೇ ಜನಪ್ರಿಯರಾಗಿರುವ ದಕ್ಷಿಣ ಕನ್ನಡದ ಪುತ್ತೂರು ಮೂಲದ ಧನರಾಜ್ ಆಚಾರ್. ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಹಸ್ತ ರೇಖೆ ನೋಡಿ ಸಹ ಸ್ಪರ್ಧಿಯ ಭವಿಷ್ಯ ನುಡಿದ ಚೈತ್ರಾ
BBK-11: ಬಿಗ್ಬಾಸ್ ಮನೆಯಲ್ಲಿ ಆ ʼಡೌಟ್ʼನಿಂದಲೇ ಶುರುವಾಯಿತು ಜಗಳ
BBK11: ಬಿಗ್ಬಾಸ್ ಮನೆಗೆ ಮತ್ತೆ ಹುಲಿ ಉಗುರು ಸಂಕಷ್ಟ? ಗೋಲ್ಡ್ ಸುರೇಶ್ ಬಳಿ ಇರುವುದೇನು?
BBK-11: ಗೌತಮಿ ಮೇಲೆ ಸ್ವರ್ಗ ನಿವಾಸಿಗಳ ಕೆಂಗಣ್ಣು.. ಬಿಗ್ಬಾಸ್ನಲ್ಲಿಂದು ಮಾತಿನ ಯುದ್ಧ
BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ – ಯಮುನಾ ಟಾಕ್ ಫೈಟ್: ನಾಮಿನೇಟ್ ಅದವರು ಯಾರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Shirva: ಬಂಟಕಲ್ಲು ರಕ್ತದಾನ ಶಿಬಿರ- ರಕ್ತದಾನದಿಂದ ಜೀವ ಉಳಿಸುವ ಕಾರ್ಯ: ಕಾಪು ತಹಶೀಲ್ದಾರ್
ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯೊಳಗಿತ್ತು ಡೆತ್ ನೋಟ್
India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ
Thalapathy 69: ದಳಪತಿ ವಿಜಯ್ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ
Udupi-ಮಣಿಪಾಲ: 9ತಿಂಗಳಲ್ಲಿ 25 ಮನೆ, ಅಂಗಡಿ ಲೂಟಿ; ಪೊಲೀಸ್ ವ್ಯವಸ್ಥೆಗೇ ಸವಾಲಾದ ಕಳ್ಳರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.