ಹುಚ್ಚ ವೆಂಕಟ್‌ To ಸಂಯುಕ್ತಾ.. ಬಿಗ್‌ಬಾಸ್‌ನಲ್ಲಿ ಕಿರಿಕ್‌ ಮಾಡಿ ಹೊರಬಂದ ಸ್ಪರ್ಧಿಗಳಿವರು


Team Udayavani, Oct 16, 2024, 3:29 PM IST

ಹುಚ್ಚ ವೆಂಕಟ್‌ To ಸಂಯುಕ್ತಾ.. ಬಿಗ್‌ಬಾಸ್‌ನಲ್ಲಿ ಕಿರಿಕ್‌ ಮಾಡಿ ಹೊರಬಂದ ಸ್ಪರ್ಧಿಗಳಿವರು

ಬೆಂಗಳೂರು: ಪ್ರತಿ ಸಲಿ ಬಿಗ್‌ ಬಾಸ್‌ ಕಾರ್ಯಕ್ರಮ (Bigg Boss Kannada) ದ ಹೊಸ ಸೀಸನ್‌ ಆರಂಭವಾದಾಗ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತದೆ ಅಥವಾ ದೊಡ್ಮನೆಯೊಳಗಿನ ಸ್ಪರ್ಧಿಗಳಿಂದ ಸದ್ದಾಗುತ್ತದೆ.

ಬಿಗ್‌ ಬಾಸ್‌ ಕಾರ್ಯಕ್ರಮ ವ್ಯಕ್ತಿತ್ವಗಳ ಆಟ. ಇಲ್ಲಿ 100 ದಿನ ಉಳಿದು ಟ್ರೋಫಿ ಎತ್ತಿಕೊಳ್ಳುವುದಕ್ಕಿಂತ ಉಳಿದ್ದಷ್ಟು ದಿನ ತನ್ನ ನಿಜವಾದ ವ್ಯಕ್ತಿತ್ವದಿಂದಲೇ ವೀಕ್ಷಕರ ಮನಗೆಲ್ಲುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

ಬಿಗ್‌ ಬಾಸ್‌ಗೆ ವಿವಾದಿತ ಕಾರ್ಯಕ್ರಮವೆನ್ನುವ ಹಣೆಪಟ್ಟಿಯೂ ಇದೆ. ಆಯಾ ಭಾಷೆಯಲ್ಲಿ ಬಿಗ್‌ ಬಾಸ್‌ಗೆ ಅಪಾರ ವೀಕ್ಷಕರಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಎಲ್ಲಾ ಭಾಷೆಯ ಬಿಗ್‌ ಬಾಸ್‌ ಒಂದಲ್ಲ ಒಂದು ಕಾರಣಕ್ಕೆ ವಿವಾದವಾಗಿಯೇ ಸುದ್ದಿಯಾಗಿದೆ.

ಇದನ್ನೂ ಓದಿ: BBK11: ಬಿಗ್‌ ಬಾಸ್‌ ಮನೆಯಲ್ಲಿ ಹೊಡೆದಾಟ; ಶೋನಿಂದ ಹೊರಬಿದ್ದ ಜಗದೀಶ್‌ – ರಂಜಿತ್‌?

ಕನ್ನಡ ಬಿಗ್‌ ಬಾಸ್‌ ಇತಿಹಾಸ ಗಮನಿಸಿದರೆ, ಇಲ್ಲೂ ಕೂಡ ಕೆಲ ಸ್ಪರ್ಧಿಗಳ ನಡುವಳಿಕೆ ವಿವಾದಕ್ಕೆ ಕಾರಣವಾಗಿದೆ. ಮಾತಿನ ಮಲ್ಲಯುದ್ದ ಮಾತ್ರವಲ್ಲದೆ, ಕೆಲ ಸ್ಪರ್ಧಿಗಳು ದೈಹಿಕವಾಗಿ ಹಲ್ಲೆ ನಡೆಸಿ ಶೋನಿಂದ ಹೊರಹೋಗಿದ್ದಾರೆ.

ಬಿಗ್‌ ಬಾಸ್‌ ಕನ್ನಡ-11 (Bigg Boss‌ Kannada-11) ದೈಹಿಕವಾಗಿ ಹಲ್ಲೆ ಮಾಡಿ ಇಬ್ಬರು ಹೊರಹೋಗಿದ್ದಾರೆ ಎನ್ನಲಾಗುತ್ತಿದೆ. ಇದು ಕನ್ನಡ ಬಿಗ್‌ ಬಾಸ್‌ನಲ್ಲಿ ಹೊಸದೇನಲ್ಲ. ಈ ರೀತಿ ಘಟನೆಗಳು ಕನ್ನಡ ಬಿಗ್‌ ಬಾಸ್‌ ನಲ್ಲಿ ಹಿಂದೆಯೂ ನಡೆದಿದೆ.

ಹುಚ್ಚ ವೆಂಕಟ್: ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲಿ ಹುಚ್ಚ ವೆಂಕಟ್ (Huccha Venkat) ಅವರ ಹಲ್ಲೆಯ ಘಟನೆ ಇಂದಿಗೂ ವೀಕ್ಷಕರಿಗೆ ನೆನಪಿದೆ. ತನ್ನ ಭಾಷೆ, ವ್ಯಕ್ತಿತ್ವ ಹಾಗೂ ನೇರ ನುಡಿಯಿಂದ ಗಮನ ಸೆಳೆದಿದ್ದ ಹುಚ್ಚ ವೆಂಕಟ್ 3ನೇ ಸೀಸನ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು.

ಮನೆಯೊಳಗೆ ಹೋಗಿದ್ದ ಹುಚ್ಚ ವೆಂಕಟ್ ಕಿಚ್ಚ ಸುದೀಪ್ ಎದುರಲ್ಲೇ ಸಹ ಸ್ಪರ್ಧಿ ರವಿ ಮೂರೂರ್ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ನೋಡಿದ ಆಯೋಜಕರು ಕೂಡಲೇ ವೆಂಕಟ್‌ ಅವರನ್ನು ಮನೆಯಿಂದ ಆಚೆ ಕಳುಹಿಸಿದ್ದರು. ಇದಾದ ಬಳಿಕ ವೆಂಕಟ್‌ ನಾಲ್ಕನೇ ಸೀಸನ್‌ ನಲ್ಲಿ ದೊಡ್ಮನೆಗೆ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ಅಂದಿನ ಸೀಸನ್‌ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದ ನಟ ಪ್ರಥಮ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಆ ಕೂಡಲೇ ವೆಂಕಟ್‌ ಹೊರಗೆ ಕರೆದುಕೊಂಡು ಬರಲಾಗಿತ್ತು.

11ನೇ ಸೀಸನ್‌ ಆರಂಭವಾಗುವ ಸಮಯದಲ್ಲಿ ವೆಂಕಟ್‌ ತಮಗೆ ಬಿಗ್‌ ಬಾಸ್‌ ಗೆ ಬರಲು ಒಂದು ಅವಕಾಶ ಕೊಡಿ ಎಂದು ಸುದೀಪ್‌ ಅವರಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದರು.

ಸಂಯುಕ್ತಾ ಹೆಗ್ಡೆ: ʼಕಿರಿಕ್‌ ಪಾರ್ಟಿʼ ಬೆಡಗಿ ಸಂಯುಕ್ತಾ ಹೆಗ್ಡೆ (Samyuktha Hegde) ವೈಲ್ಡ್ ಕಾರ್ಡ್ ಮೂಲಕ ಬಿಗ್‌ ಬಾಸ್‌ -5ಗೆ ಎಂಟ್ರಿ ಆಗಿದ್ದರು. ಆದರೆ ಮನೆಗೆ ಬಂದ 15 ದಿನಯೊಳಗೆಯೇ ಸಂಯುಕ್ತಾ ಸಹ ಸ್ಪರ್ಧಿಯೊಬ್ಬರ ಮೇಲೆ ಹಲ್ಲೆ ಮಾಡಿದ ಕಾರಣಕ್ಕಾಗಿ ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದಿದ್ದರು.

ಪ್ರತಿ ದಿನದ ಟಾಸ್ಕ್ ನಂತೆ ಸ್ಪರ್ಧಿಗಳಿಗೆ ಟಾಸ್ಕ್ ವೊಂದನ್ನು ನೀಡಲಾಗಿತ್ತು. ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರದ  ದಾರವನ್ನು ಕತ್ತರಿಯಿಂದ ಕತ್ತರಿಸಬೇಕಿತ್ತು. ಈ ವೇಳೆ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದ್ರು ಅಂತ ಸಂಯುಕ್ತ ಅವರ ಮೇಲೆ ಕೈ ಮಾಡಿದ್ದರು. ಅಲ್ಲದೆ ಎರಡು ಬಾರಿ ಅವರಿಗೆ ಹೊಡೆದಿದ್ದರು.

ಇದನ್ನೂ ಓದಿ: Bigg Boss: ವಾರದ ಮಧ್ಯದಲ್ಲೇ ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆದ ವೀಕ್ಷಕರ ಮೆಚ್ಚಿನ ಸ್ಪರ್ಧಿ

ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿದ್ದ ಇದೇ ವಿಚಾರಕ್ಕೆ ಸಂಯುಕ್ತಾ ಅವರನ್ನು ಬಿಗ್‌ ಬಾಸ್‌ ಮನೆಯಿಂದ ಆಚೆ ಕಳುಹಿಸಲಾಗಿತ್ತು.

ಜಗದೀಶ್‌ – ರಂಜಿತ್:‌ ಇತ್ತೀಚೆಗೆ ಆರಂಭಗೊಂಡಿರುವ ಬಿಗ್‌ ಬಾಸ್‌ ಕನ್ನಡ -11 ಮೊದಲಿನಿಂದಲೂ ಸ್ಪರ್ಧಿಗಳ ನಡುವಿನ ಪೈಪೋಟಿಯಿಂದ ಸದ್ದು ಮಾಡುತ್ತಿದೆ. ಜಗದೀಶ್‌ ಅವರು ತನ್ನ ದೊಡ್ಡ ಧ್ವನಿಯಿಂದ ದೊಡ್ಮನೆಯಲ್ಲಿ ಡಾಮಿನೇಟ್‌ ಆಟವನ್ನು ಆಡುತ್ತಿದ್ದಾರೆ. ಆದರೆ ಅವರ ಮೇಲೆ ದೊಡ್ಮನೆಯ ಎಲ್ಲರೂ ಮುಗಿಬಿದ್ದಿದ್ದಾರೆ. ಉಗ್ರಂ ಮಂಜು, ತಿವಿಕ್ರಮ್‌, ರಂಜಿತ್‌, ಚೈತ್ರಾ ಅವರು ಜಗದೀಶ್‌ ಅವರೊಂದಿಗೆ ವಾಗ್ವಾಕ್ಕೆ ಇಳಿದಿದ್ದಾರೆ.

ಕ್ಯಾಪ್ಟನ್‌ ಶಿಶಿರ್‌ ಅವರು ಎಲಿಮಿನೇಷನ್‌ಗೆ ನಾಮಿನೇಟ್‌ ಮಾಡುವಾಗ ಜಗದೀಶ್‌ ಅವರು ಶಿಶಿರ್‌ ಅವರಿಗೆ ನೀವು ಕೆಲ ಸ್ಪರ್ಧಿಗಳನ್ನು ಟಾರ್ಗೆಟ್‌ ಮಾಡಿ ನಾಮಿನೇಟ್‌ ಮಾಡುತ್ತಿದ್ದೀರಿ ಎಂದಿದ್ದಾರೆ. ಇದಕ್ಕೆ ಉಳಿದ ಸ್ಪರ್ಧಿಗಳು ಜಗದೀಶ್‌ ಅವರ ಮೇಲೆಯೇ ಮುಗಿಬಿದ್ದಿದ್ದಾರೆ. ಮಾನಸ ಅವರ ವಿಚಾರದಲ್ಲಿ ಜಗದೀಶ್‌ ಮಧ್ಯ ಮಾತನಾಡಿದ್ದು, ಈ ವೇಳೆ ರಂಜಿತ್‌ ಅವರೊಂದಿಗೆ ಮಾತಿನ ಚಕಮಕಿ ನಡೆದಿದೆ.

ಕೈ- ಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದು, ದೈಹಿಕವಾಗಿ ಹಲ್ಲೆ ನಡೆಸಿದ ಕಾರಣಕ್ಕೆ ಕಾರ್ಯಕ್ರಮದ ಮೂಲ ನಿಯಮ ಉಲ್ಲಂಘನೆ ಆಗಿದೆ. ಪರಿಣಾಮ ಬಿಗ್‌ ಬಾಸ್‌ ಇಬ್ಬರನ್ನೂ ಮನೆಯಿಂದ ಆಚೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.

ಜಗದೀಶ್‌ ಅವರು ಬಿಗ್‌ ಬಾಸ್‌ನಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದ್ದು, ಅಭಿಮಾನಿಯೊಬ್ಬರ ಜತೆಗೆ ತೆಗೆಸಿಕೊಂಡಿರುವ ಫೋಟೋವೊಂದು ವೈರಲ್‌ ಆಗಿದೆ.

ರಂಜಿತ್‌ ಅವರಿಗೆ ಎಚ್ಚರಿಕೆ ನೀಡಿ ಮತ್ತೆ ಮನೆಯೊಳಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಯಾವುದಕ್ಕೂ ಕಾರ್ಯಕ್ರಮ ಪ್ರಸಾರವಾದ ಬಳಿಕವೇ ಅಸಲಿಯತ್ತು ಗೊತ್ತಾಗಲಿದೆ.

ಟಾಪ್ ನ್ಯೂಸ್

10-udupi

Udupi: ಪಟಾಕಿ ಅಕ್ರಮ ದಾಸ್ತಾನು ; ಪಟಾಕಿ ಪೊಲೀಸ್‌ ವಶಕ್ಕೆ

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

Nigeria: ತೈಲ ಟ್ಯಾಂಕರ್‌ ಸ್ಫೋಟ-ನೂರು ಮಂದಿ ಸಜೀವ ದಹನ, 50 ಜನರಿಗೆ ಗಾಯ

Nigeria: ತೈಲ ಟ್ಯಾಂಕರ್‌ ಸ್ಫೋಟ-ನೂರು ಮಂದಿ ಸಜೀವ ದಹನ, 50 ಜನರಿಗೆ ಗಾಯ

1-s-j

SCO Summit; ಉಗ್ರವಾದದ ವಿರುದ್ಧ ಪಾಕಿಸ್ಥಾನದಲ್ಲೇ ಸ್ಪಷ್ಟ ಸಂದೇಶ ನೀಡಿದ ಎಸ್. ಜೈಶಂಕರ್

1-yekanath

Maharashtra Poll; ”ತ್ಯಾಗ” ಮಾಡಲು ಸಿದ್ಧರಾಗಬೇಕು.. ಶಿಂಧೆಗೆ ಬಿಜೆಪಿ ಸ್ಪಷ್ಟ ಸಂದೇಶ!

Sagara: ತಾಯಿ ಮಗು ಆಸ್ಪತ್ರೆ ಹೈಟೆಕ್ ಮಾಡಲು ಅಗತ್ಯ ಕ್ರಮ; ಬೇಳೂರು

Sagara: ತಾಯಿ ಮಗು ಆಸ್ಪತ್ರೆ ಹೈಟೆಕ್ ಮಾಡಲು ಅಗತ್ಯ ಕ್ರಮ; ಬೇಳೂರು

Helicopter: ಮುಖ್ಯ ಚುನಾವಣಾ ಆಯುಕ್ತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

Helicopter: ಮುಖ್ಯ ಚುನಾವಣಾ ಆಯುಕ್ತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

BBK11: ಬಿಗ್‌ ಬಾಸ್‌ ಮನೆಯಲ್ಲಿ ಹೊಡೆದಾಟ; ಶೋನಿಂದ ಹೊರಬಿದ್ದ ಜಗದೀಶ್‌ – ರಂಜಿತ್‌?

Bigg Boss: ವಾರದ ಮಧ್ಯದಲ್ಲೇ ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆದ ವೀಕ್ಷಕರ ಮೆಚ್ಚಿನ ಸ್ಪರ್ಧಿ

Bigg Boss: ವಾರದ ಮಧ್ಯದಲ್ಲೇ ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆದ ವೀಕ್ಷಕರ ಮೆಚ್ಚಿನ ಸ್ಪರ್ಧಿ

BBK11: ಏನೋ ಕಿತ್ತುಕೊಳ್ತೀಯಾ.. ಜಗದೀಶ್ ಮೇಲೆ‌‌ ಮುಗಿಬಿದ್ದ ಬಿಗ್ ಬಾಸ್ ಸಹ ಸ್ಪರ್ಧಿಗಳು..

BBK11: ಏನೋ ಕಿತ್ತುಕೊಳ್ತೀಯಾ.. ಜಗದೀಶ್ ಮೇಲೆ‌‌ ಮುಗಿಬಿದ್ದ ಬಿಗ್ ಬಾಸ್ ಸಹ ಸ್ಪರ್ಧಿಗಳು..

4-biggboss

BBK11: ಅಪ್ಪನಿಗೆ ಹುಟ್ಟಿದ್ರೆ ಎದುರುಗಡೆ ನಿಂತು ಮಾತನಾಡಲಿ: ಜಗದೀಶ್ ಗೆ ಚೈತ್ರಾ ಸವಾಲು

11

BBK11: ಬಿಗ್‌ಬಾಸ್‌ಗೆ ಕಿಚ್ಚ ವಿದಾಯ.. ಟ್ವೀಟ್‌ ಮಾಡಿ ಎಲ್ಲ ಗೊಂದಲಕ್ಕೆ ತೆರೆ ಎಳೆದ ಸುದೀಪ್

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

10-udupi

Udupi: ಪಟಾಕಿ ಅಕ್ರಮ ದಾಸ್ತಾನು ; ಪಟಾಕಿ ಪೊಲೀಸ್‌ ವಶಕ್ಕೆ

15(1)

Manipal: ಎಂಜಿಎಂ ಚಿಟ್ಟೆ ಪಾರ್ಕ್‌ನಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು

14

Malpe: ಸಿಎನ್‌ಜಿ ಕೊರತೆ; ರಿಕ್ಷಾ ಚಾಲಕರಿಗೆ ಚಿಂತೆ

9-sagara

Sagara: ನಗರ ವ್ಯಾಪ್ತಿಯ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ; ಬೇಳೂರು ಸೂಚನೆ

ಎಳನೀರು: ಮೊದಲ ಬಾರಿ ರೈತರಿಗೆ ಬಂಪರ್‌ ದರ-36ರೂ.ಗೆ ಬೆಳೆಗಾರರಿಂದ ಖರೀದಿ

ಎಳನೀರು: ಮೊದಲ ಬಾರಿ ರೈತರಿಗೆ ಬಂಪರ್‌ ದರ-36ರೂ.ಗೆ ಬೆಳೆಗಾರರಿಂದ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.