BBT8: ವಿವಾದಾತ್ಮಕ ನಿರ್ಮಾಪಕ ಟು ಖ್ಯಾತ ನಟಿ.. ಇವರೇ ನೋಡಿ ಬಿಗ್‌ಬಾಸ್‌ ತಮಿಳು ಸ್ಪರ್ಧಿಗಳು


Team Udayavani, Oct 7, 2024, 2:16 PM IST

BBT8: ವಿವಾದಾತ್ಮಕ ನಿರ್ಮಾಪಕ ಟು ಖ್ಯಾತ ನಟಿ.. ಇವರೇ ನೋಡಿ ಬಿಗ್‌ಬಾಸ್‌ ತಮಿಳು ಸ್ಪರ್ಧಿಗಳು

ಚೆನ್ನೈ: ಕಿರುತೆರೆಯಲ್ಲಿ ಈಗ ಬಿಗ್‌ ಬಾಸ್‌ (BIGG BOSS) ಪರ್ವ ಶುರುವಾಗಿದೆ. ಸೌತ್‌ ನಿಂದ ನಾರ್ತ್‌ವರೆಗೂ ಬಿಗ್‌ ಬಾಸ್‌ ಕಾರ್ಯಕ್ರಮದ ಹವಾ ಶುರುವಾಗಿದೆ. ಒಂದು ಕಡೆ ತೆಲುಗು ಬಿಗ್‌ ಬಾಸ್‌ ಆರಂಭವಾಗಿ ವಾರಗಳೇ ಕಳೆದಿದ್ದು, ಕನ್ನಡ ಬಿಗ್‌ ಬಾಸ್‌ ಆರಂಭವಾಗಿ ಒಂದು ವಾರ ಕಳೆದಿದೆ. ಇದರ ನಡುವೆ ಹಿಂದಿ ಹಾಗೂ ತಮಿಳು ಬಿಗ್‌ ಬಾಸ್‌ ಒಂದೇ ದಿನ ಆರಂಭವಾಗಿದೆ.

ಬಿಗ್‌ ಬಾಸ್‌ ಕಾರ್ಯಕ್ರಮ ಹೆಚ್ಚಾಗಿ ವಿವಾದದಿಂದಲೇ ಸುದ್ದಿ ಆಗುತ್ತದೆ. ವಿವಿಧ ಕ್ಷೇತ್ರದಲ್ಲಿನ ಸೆಲೆಬ್ರಿಟಿಗಳು 100 ದಿನಕ್ಕೂ ಹೆಚ್ಚಿನ ಕಾಲ ದೊಡ್ಮನೆಯಲ್ಲಿ ಬಿಗ್‌ ಬಾಸ್‌ ಆಟವನ್ನು ಆಡುತ್ತಾರೆ. ಇಲ್ಲಿ ಒಬ್ಬ ವ್ಯಕ್ತಿಯ ಅಸಲಿ ಬಣ್ಣ ಬಯಲಾಗುವುದರ ಜತೆಗೆ ವ್ಯಕ್ತಿತ್ವದ ಪರೀಕ್ಷೆಯೂ ದಿನನಿತ್ಯವಾಗುತ್ತದೆ. ನೂರಾರು ಕ್ಯಾಮರಾ ಮುಂದೆ ಸ್ಪರ್ಧಿಗಳು ತಮ್ಮ ನಿಜ ಬಣ್ಣದೊಂದಿಗೆ ದಿನ ಕಳೆಯಬೇಕಾಗುತ್ತದೆ.

ಬಿಗ್‌ ಬಾಸ್‌ ತಮಿಳು 8 (Bigg Boss Tamil 8): ತಮಿಳು ಬಿಗ್‌ ಬಾಸ್‌ ಈ ಬಾರಿ ಆರಂಭಕ್ಕೂ ಮುನ್ನ ಸುದ್ದಿಯಾದ ಶೋ. ಅದಕ್ಕೆ ಪ್ರಮುಖ ಕಾರಣ ಇಷ್ಟು ವರ್ಷ ಶೋ ನಡೆಸಿಕೊಡುತ್ತಿದ್ದ ಕಮಲ್‌ ಹಾಸನ್‌ (Kamal Hasan) ಈ ಬಾರಿ ಬಿಗ್‌ ಬಾಸ್‌ ನಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ ಅವರ ಬದಲಿಗೆ ನಟ ವಿಜಯ್‌ ಸೇತುಪತಿ (Vijay Sethupathi) ಅವರು ಹೊಸ ಬಿಗ್‌ ಬಾಸ್‌ ಹೋಸ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈ ಬಾರಿಯ ಸ್ಪರ್ಧಿಗಳು ಇವರೇ..: ಈ ಬಾರಿ ತಮಿಳು ಬಿಗ್‌ ಬಾಸ್‌ ಮನೆಗೆ 18 ಮಂದಿ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ನಟ, ನಟಿ, ನಿರ್ಮಾಪಕ, ಗಾಯಕರು ಸೇರಿದಂತೆ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಿದ್ದಾರೆ. ಇಲ್ಲಿದೆ ಸ್ಪರ್ಧಿಗಳ ಪಟ್ಟಿ..

ಅಂಶಿತಾ ಅಕ್ಬರ್ಷಾ (Anshitha Akbarsha): ತಮಿಳು ಟಿವಿ ಶೋನಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಅವರು ತನ್ನ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ.

ದೀಪಕ್‌ (Deepak): ವಿಡಿಯೋ ಜಾಕಿಯಾಗಿರುವ ದೀಪಕ್‌ ಹಲವು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.

ರವೀಂದರ್ ಚಂದ್ರಶೇಖರನ್: (Ravindar Chandrasekaran): ಫೋರ್ಜರಿ ಪ್ರಕರಣದಲ್ಲಿ ಬಂಧನ ಸೇರಿದಂತೆ ಹಲವು ವಿವಾದಗಳಿಂದ ಸುದ್ದಿಯಾಗಿರುವ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಅವರು ನಟಿ ಮಹಾಲಕ್ಷ್ಮಿಅವರನ್ನು ವಿವಾಹವಾಗಿದ್ದಾರೆ. ಈ ವಿವಾಹ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಅರ್ನವ್ (Arnav): ತಮಿಳು ಕಿರುತೆರೆಯಲ್ಲಿ ನಟನಾಗಿ ಗುರುತಿಸಿಕೊಂಡಿರುವ ಅರ್ನವ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗಿದ್ದಾರೆ.

ಗಾನಾ ಜೆಫ್ರಿ (Gaana Jeffry): ತನ್ನ ವಿಶಿಷ್ಟ್ಯ ಗಾಯನದಿಂದ ಗಮನ ಸೆಳೆದಿರುವ ಗಾನಾ ಜೆಫ್ರಿ ಬಿಗ್‌ ಬಾಸ್‌ ತಮಿಳು ಸೀಸನ್‌ -8 ರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರತಿಭಾವಂತ ಗಾಯಕ, ಸಂಯೋಜಕ, ಗೀತರಚನೆಕಾರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.

ರಂಜಿತ್ (Ranjith):‌ ನಟ-ನಿರ್ದೇಶಕ ರಂಜಿತ್ ಅವರು ಬಿಗ್‌ ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಅವರ ಚಿತ್ರವೊಂದನ್ನು ಪ್ರಚಾರ ಮಾಡುವಾಗ ಜಾತಿ ಆಧಾರಿತ ಮರ್ಯಾದಾ ಹತ್ಯೆಗಳನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಈ ವರ್ಷದ ಆರಂಭದಲ್ಲಿ ಅವರು ಸುದ್ದಿಯಾಗಿದ್ದರು.

ಮರ್ಯಾದಾ ಹತ್ಯೆಯನ್ನು ‘ಹಿಂಸೆʼಅಲ್ಲ, ‘ಪೋಷಕರು ತಮ್ಮ ಮಕ್ಕಳ ಮೇಲೆ ತೋರಿಸುವ ಪ್ರೀತಿ’ ಎಂದು ಅವರು ಹೇಳಿದ್ದರು.

ಅರುಣ್ ಪ್ರಸಾದ್ (Arun Prasath): ʼಭಾರತಿ ಕಣ್ಣಮ್ಮʼ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ನಟ ಅರುಣ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ವಿಜೆ ವಿಶಾಲ್ (VJ Vishal): ʼಕಲ್ಯಾಣಮಂ ಕಲ್ಯಾಣಂʼನಂತಹ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ವಿಜೆ ವಿಶಾಲ್ ಬಿಗ್ ಬಾಸ್‌ನಲ್ಲಿ ತನ್ನ ವ್ಯಕ್ತಿತ್ವ ಪರೀಕ್ಷೆಗೆ ಇಳಿಯಲಿದ್ದಾರೆ.

ಜಾಕ್ವೆಲಿನ್(Jacqueline): ನಿರೂಪಕಿ-ನಟಿ, ಜಾಕ್ವೆಲಿನ್ ಸಾಮಾಜಿಕ ಜಾಲತಾಣದಲ್ಲಿ ಅಪಾರ ಫಾಲೋವರ್ಸ್‌ ಗಳನ್ನು ಹೊಂದಿದ್ದಾರೆ. ಇದೀಗ ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗಿದ್ದಾರೆ.

ಮುತ್ತುಕಮಾರನ್(Muthukamaran): ತನ್ನ ಸೆಲೆಬ್ರಿಟಿ ಸಂದರ್ಶನಗಳಿಂದ ಖ್ಯಾತಿ ಆಗಿರುವ ಯೂಟ್ಯೂಬರ್‌ ಮುತ್ತುಕಮಾರನ್ ಬಿಗ್ ಬಾಸ್‌ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಸೌಂದರ್ಯ ನಂಜುಂಡನ್(Soundariya Nanjundan):

ರಜಿನಿಕಾಂತ್‌ ಅವರ ʼದರ್ಬಾರ್‌ʼ ಸೇರಿದಂತೆ ತಮಿಳಿನ ಕೆಲ ಸಿನಿಮಾಗಳಲ್ಲಿ ನಟಿಸಿರುವ ಸೌಂದರ್ಯ ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

 ಪವಿತ್ರಾ ಜನನಿ (Pavithra Janani):

ತಮಿಳು ಕಿರುತೆರೆಯ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಪವಿತ್ರಾ ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ.

ಸಚನಾ ನಮಿದಾಸ್(Sachana Namidass): ವಿಜಯ್‌ ಸೇತುಪತಿ ಅವರ ʼಮಹಾರಾಜʼ ಸಿನಿಮಾದಲ್ಲಿ ಮಗಳ ಪಾತ್ರದಲ್ಲಿ ನಟಿಸಿರುವ ಸಚನಾ ನಮಿದಾಸ್‌ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ್ದಾರೆ.

ತರ್ಷಿಕಾ (Tharshika):

ಯೂಟ್ಯೂಬರ್ ಮತ್ತು ನಟಿಯಾಗಿ ಗುರುತಿಸಿಕೊಂಡಿರುವ ತರ್ಷಿಕಾ ʼವೈಬ್ ವಿತ್ ತರ್ಷಿʼ ಚಾನೆಲ್‌ನಿಂದ ಖ್ಯಾತಿ ಅಗಿದ್ದಾರೆ. ಬಿಗ್ ಬಾಸ್ ತಮಿಳು ಮನೆಗೆ ಪ್ರವೇಶಿಸಿದ್ದಾರೆ.

ದರ್ಶ ಗುಪ್ತಾ (Dharsha Guptha):

ʼಕುಕು ವಿತ್ ಕೋಮಾಲಿʼ ಎಂಬ ಅಡುಗೆ ಕಾರ್ಯಕ್ರಮದ ಎರಡನೇ ಸೀಸನ್‌ನಲ್ಲಿ ದರ್ಶ ಗುಪ್ತಾ ಖ್ಯಾತಿ ಗಳಿಸಿದರು. ʼಮುಳ್ಳುಮ್ ಮಲರುಮ್ʼ ಮತ್ತು ʼಸೆಂಟೂರ ಪೂವೆʼಯಂತಹ ಟಿವಿ ಶೋಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಅವರು ʼರುದ್ರ ತಾಂಡವಂʼ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ʼಓ ಮೈ ಘೋಸ್ಟ್ʼ ಚಿತ್ರದಲ್ಲಿ ನಟಿಸಿದ್ದಾರೆ.

ಸುನಿತಾ ಗೊಗೊಯ್ (Sunita Gogoi):

ʼಕುಕು ವಿತ್ ಕೋಮಾಲಿʼ ಎಂಬ ಅಡುಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಸುನೀತಾ ಮನೆಮಾತಾಗಿದ್ದಾರೆ. ಧನುಷ್ ಅವರ ʼ3ʼ, ʼಇರವುʼ ಮತ್ತು ʼಮಾನ್ ವೆಟ್ಟೈʼ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಆರ್ ಜೆ ಅನಂತಿ (RJ Ananthi):

ಆರ್‌ ಜೆ ಆಗಿ ಖ್ಯಾತಿ ಆಗಿರುವ ಅನಂತಿ ಜಯಂ ರವಿಯವರ ʼಕೋಮಾಲಿʼ ಚಿತ್ರದಲ್ಲಿ ನಟಿಸಿದ್ದಾರೆ. ʼಬಿಗಿಲ್ʼ ಮತ್ತು ʼನನ್ಬನ್ ಒರುವನ್ʼವಂತ ಪಿರಗುʼ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಸತ್ಯ (Sathya):

ಫಿಟ್ನೆಸ್ ಫ್ರೀಕ್ ಆಗಿರುವ ನಟ ಸತ್ಯ ಅವರು ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ಗಾಯಕಿ ರಮ್ಯಾ ಎನ್ಎಸ್ಕೆ ಅವರ ಪತಿ ಆಗಿದ್ದಾರೆ. ಸತ್ಯ ತಮಿಳಿನ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

ಬಿಗ್‌ ಬಾಸ್‌ ತಮಿಳು-8 ವಿಜಯ್ ಟಿವಿ ಮತ್ತು ಡಿಸ್ನಿ ಹಾಟ್‌ಸ್ಟಾರ್ +ನಲ್ಲಿ ಪ್ರಸಾರವಾಗುತ್ತಿದೆ.

ಟಾಪ್ ನ್ಯೂಸ್

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

Mangaluru CCB team seized huge quantity of drugs; Siberian citizen arrested

Mangaluru: ಬೃಹತ್‌ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಂಡ ಸಿಸಿಬಿ ತಂಡ; ನೈಜಿರಿಯಾ ಪ್ರಜೆ ಬಂಧನ

zameer ahmed khan

Vijayapura: ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಹೈಕಮಾಂಡ್ ಇದೆ, ವಿಜಯೇಂದ್ರ ಯಾರು?: ಸಚಿವ ಜಮೀರ್

Coal Mine: ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ.. 7 ಮಂದಿ ಮೃತ್ಯು, ಹಲವು ಕಾರ್ಮಿಕರಿಗೆ ಗಾಯ

Coal Mine: ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ.. 7 ಮಂದಿ ಮೃತ್ಯು, ಹಲವು ಕಾರ್ಮಿಕರಿಗೆ ಗಾಯ

BY Vijayendra’s contribution is to talk lightly about those who worked for the party says KS Eshwarappa

Hubli: ವಿಜಯೇಂದ್ರ ಎಳಸು, ನನ್ನ ಬಗ್ಗೆ ಏನು ಮಾತನಾಡುತ್ತಾರೆ..: ಕೆ.ಎಸ್.ಈಶ್ವರಪ್ಪ ವಾಗ್ದಾಳಿ

v

Kinnigoli: ಕಾರಿಗೆ ಆಕಸ್ಮಿಕ ಬೆಂಕಿ; ಸ್ಥಳೀಯರ ಸಹಾಯದಿಂದ ಪಾರಾದ ತಾಯಿ ಮಕ್ಕಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bigg Boss Marathi 5: ಬಿಗ್‌ ಬಾಸ್‌ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?

Bigg Boss Marathi 5: ಬಿಗ್‌ ಬಾಸ್‌ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

BBK11: ಬಿಗ್‌ಬಾಸ್‌: ಮಾನವ ಹಕ್ಕು ಆಯೋಗಕ್ಕೆ ದೂರು

BBK11: ಬಿಗ್‌ಬಾಸ್‌: ಮಾನವ ಹಕ್ಕು ಆಯೋಗಕ್ಕೆ ದೂರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

7(3)

Kaup: ಉಚ್ಚಿಲ ದಸರೆಗೆ ವಸ್ತುಪ್ರದರ್ಶನ ಮೆರುಗು

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

Mangaluru CCB team seized huge quantity of drugs; Siberian citizen arrested

Mangaluru: ಬೃಹತ್‌ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಂಡ ಸಿಸಿಬಿ ತಂಡ; ನೈಜಿರಿಯಾ ಪ್ರಜೆ ಬಂಧನ

6(1)

Karkala: ಮಕ್ಕಳ ಕೈಯ್ಯಲ್ಲಿ ಹೂವಿನಕೋಲು!; ನವರಾತ್ರಿ ವಿಶೇಷ ಆಚರಣೆ ಮುಂದುವರಿಸುವ ಮಕ್ಕಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.